ಡಿ.2ರಿಂದ ಇಂದ್ರಧನುಷ್ ಲಸಿಕೆ ಅಭಿಯಾನ
Team Udayavani, Nov 30, 2019, 5:01 PM IST
ರಾಮನಗರ: ಜಿಲ್ಲೆಯಲ್ಲಿ ಮಿಷನ್ ಇಂದ್ರ ಧನುಷ್ ಕಾರ್ಯಕ್ರಮದಡಿಯಲ್ಲಿ ಡಿಸೆಂಬರ್2ರಿಂದ ಆರಂಭಿಸಿ 2-10 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಲಿಸಿಕೆ ನೀಡುವ ಅಭಿಯಾನವನ್ನು 4 ಹಂತಗಳಲ್ಲಿ ಹಮ್ಮಿಕೊಂಡಿರುವುದಾಗಿ ಡಿಎಚ್ಒ ಡಾ.ನಿರಂಜನ್ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಇಲಾಖೆಯ ಕಚೇರಿ ಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಪರ ಮಾಹಿತಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳನ್ನು ಮಾರಕ ರೋಗಗ ಳಿಂದ ದೂರವಿರಿಸಲು ಈ ಲಸಿಕೆಗಳ ಅಭಿಯಾನ ಅವಶ್ಯಕವಾಗಿದೆ ಎಂದರು.
4 ಹಂತಗಳಲ್ಲಿ ಅಭಿಯಾನ: ಈ ಬಾರಿ ಇಂದ್ರ ಧನುಷ್ ಕಾರ್ಯಕ್ರಮ 4 ಹಂತಗಳಲ್ಲಿ ಅಂದರೆಡಿಸೆಂಬರ್ 2 ರಿಂದ 10 ರವರೆಗೆ, 2020 ಜನವರಿ 3 ರಿಂದ 13 ರವರೆಗೆ, ಫೆಬ್ರವರಿ 3 ರಿಂದ 12 ರವರೆಗೆ ಹಾಗೂ ಮಾರ್ಚ್ 02 ರಿಂದ 10 ವರೆಗೆ ನಡೆಸಲಾಗುವುದು. ಲಸಿಕೆಯಿಂದ ವಂಚಿತರಾಗಿರುವ ಮಕ್ಕಳು ಮತ್ತು ಗರ್ಭಿಣಿಯರನ್ನು ಮನೆ ಮನೆ ಸರ್ವೆ ಮಾಡಿ ಗುರುತಿಸಿ ಈ ಕಾರ್ಯ ಕ್ರಮದಲ್ಲಿ ಲಸಿಕೆ ಹಾಕಲಾಗುವುದು. ಮುಖ್ಯವಾಗಿ ಅಲೆಮಾರಿ ಜನಾಂಗ ಹಾಗೂ ಬುಡಕಟ್ಟು ಸಮುದಾಯದ 2 ವರ್ಷದೊಳಗಿನ ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಿ ಶೇ 100 ಗುರಿ ಸಾಧಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಸಮೀಕ್ಷೆ ನಡೆಸಿ ಲಸಿಕೆ ಪಡೆಯದೆ ಇರುವ 713 ಮಕ್ಕಳು ಹಾಗೂ 102 ಗರ್ಭಿಣಿಯರನ್ನು ಗುರುತಿಸಲಾಗಿದೆ. ಅವರಿಗೆ ಈ ಅಭಿಯಾನದಲ್ಲಿ ಲಸಿಕೆ ನೀಡಲು ಆರೋಗ್ಯಇಲಾಖೆಯಿಂದ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ, ಚನ್ನಪಟ್ಟಣ ತಾಲೂಕಿನಲ್ಲಿ 307 ಮಕ್ಕಳು ಹಾಗೂ 38 ಗರ್ಭಿಣಿಯರನ್ನು, ಕನಕಪುರ ತಾಲೂಕಿನಲ್ಲಿ 110 ಮಕ್ಕಳು ಹಾಗೂ 22 ಗರ್ಭಿಣಿ ಯರನ್ನು, ಮಾಗಡಿ ತಾಲೂಕಿನಲ್ಲಿ 78 ಮಕ್ಕಳು ಹಾಗೂ 9 ಗರ್ಭಿಣಿಯರು, ರಾಮನಗರ ತಾಲೂಕಿನಲ್ಲಿ 218 ಮಕ್ಕಳು ಹಾಗೂ 33 ಗರ್ಭಿಣಿಯರನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಇಂದ್ರಧನುಷ್ ಮೊದಲನೇ ಸುತ್ತು ಈಗಾಗಲೇ ಮೇ-2018 ರಿಂದ ಜುಲೈ 2018 ರವರೆಗೆ ನಡೆಸಲಾಗಿದ್ದು, ಶೇ 92.97 ರಷ್ಟು ಹಾಗೂ ಆಗಸ್ಟ್-2018 ರಿಂದ ಅಕ್ಟೋಬರ್ -2018 ರವರಗೆ ನಡೆದ ಅಭಿಯಾನದಲ್ಲಿ ಶೇ 97.27 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು. ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಪದ್ಮ ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ