ಆಕ್ಸಿಜನ್ ಉತ್ಪಾದನೆ ಘಟಕ ಸ್ಥಾಪನೆಗೆ ಸ್ಥಳ ಪರಿಶೀಲನೆ
Team Udayavani, May 8, 2021, 3:21 PM IST
ಕನಕಪುರ: ತಾಲೂಕಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ತೀರ್ಮಾನಿಸಿರುವ ಕೆಆರ್ಐಡಿಎಲ್ ಅಧ್ಯಕ್ಷರುದ್ರೇಶ್ ಅವರ ಆದೇಶದ ಮೇರೆಗೆ ನಿಗಮದ ಜಿಲ್ಲಾ ಮುಖ್ಯಅಭಿಯಂತರ ಪರಮೇಶ್ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಆಕ್ಸಿಜನ್ ಕೊರತೆ ನಿವಾರಿಸಲು ಕೆಆರ್ಐಡಿಎಲ್ಅಧ್ಯಕ್ಷ ರುದ್ರೇಶ್, ತಾಲೂಕಿನಲ್ಲಿ 500 ವ್ಯಾಟ್ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಮುಂದಾಗಿದ್ದಾರೆ.
ಅವರಆದೇಶದ ಮೇರೆಗೆ ನಿಗಮದ ಜಿಲ್ಲಾ ಮುಖ್ಯ ಅಭಿಯಂತರ ಪರಮೇಶ್ ತಾಲೂಕು ಆಸ್ಪತ್ರೆ ಆವರಣದಲ್ಲಿ ಸ್ಥಳೀಯಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು.ಆಸ್ಪತ್ರೆ ಮುಖ್ಯಾಧಿಕಾರಿ ವಾಸು, ನಿಗಮದ ಜಿಲ್ಲಾ ಸಹಾಯಕ ಅಭಿಯಂತರ ಉದಯ್, ಬಿಜೆಪಿ ಮುಖಂಡ ನಾಗನಂದ್,ರಾಜು, ಗೋಪಿ ಇತರರಿದ್ದರು.