ಇರುಳಿಗರ ನಿವೇಶನದ ಕನಸಿಗೆ ಸ್ಪಂದಿಸಿದ ಜಿಲ್ಪಾಡಳಿತ


Team Udayavani, Dec 20, 2021, 1:16 PM IST

ಇರುಳಿಗರ ನಿವೇಶನದ ಕನಸಿಗೆ ಸ್ಪಂದಿಸಿದ ಜಿಲ್ಪಾಡಳಿತ

ರಾಮನಗರ: ತಾಲೂಕಿನ ಕೂಟಗಲ್‌ ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ 4 ದಶಕಗಳಿಂದ ಯಾವುದೇ ಮೂಲ ಸೌಕರ್ಯಗಳು ಇಲ್ಲದೆ ವಾಸವಾಗಿರುವ ಇರುಳಿಗ ಕುಟುಂಬಗಳಿಗೆ ಈಗ ಸ್ವಂತ ನಿವೇಶನ ಹೊಂದುವ ಸಕಾಲ ಪ್ರಾಪ್ತವಾಗಿದೆ.

ಸುಮಾರು 4 ದಶಕಗಳಿಂದ ಸುಮಾರು 40 ರಿಂದ 45 ಇರುಳಿಗ, ಬುಡಕಟ್ಟು ಸಮುದಾಯದ ಕುಟುಂಬಗಳು ಕೂಟಗಲ್‌ ಗ್ರಾಮದಲ್ಲಿ ವಾಸವಾಗಿದ್ದರು. ತೀವ್ರ ನಿರ್ಲಕ್ಷಕ್ಕೆ ಒಳಗಾಗಿದ್ದರು. ಜಿಲ್ಲಾಡಳಿತ,ತಾಲೂಕು ಆಡಳಿತ, ಗ್ರಾಪಂ ಇಲ್ಲಿ ಯಾವ ಮೂಲ ಸೌಕರ್ಯಗಳನ್ನು ಕಲ್ಪಿಸಿರಲಿಲ್ಲ. ಈ ಕುಟುಂಬಗಳಿಗೆಸ್ವಂತ ನಿವೇಶನ ಕಲ್ಪಿಸಿಕೊಡಲು ಸರ್ವೆಸಂಖ್ಯೆ 43ರಲ್ಲಿ 5 ಎಕರೆ ಭೂಮಿಯನ್ನು ಗುರುತಿಸಲಾಗಿದ್ದರೂ ಸಹ ನಿವೇಶನಗಳನ್ನು ವಿಂಗಡಿಸಿ ಕೊಟ್ಟಿರಲಿಲ್ಲ.

ಸರ್ವೆ ಸಂಖ್ಯೆ 94ರಲ್ಲಿ 2 ಎಕರೆ ಭೂಮಿ: ಕಳೆದ ತಿಂಗಳು ಸುರಿದ ಭಾರಿ ಮಳೆಯಲ್ಲಿ ಗುಡಿಸಲುಕುಸಿದು ರತ್ನಗಿರಯ್ಯ ಎಂಬ ವೃದ್ಧರೊಬ್ಬರು ಮೃತಪಟ್ಟಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಸಮುದಾಯದ ಪ್ರಮುಖರು ರತ್ನಗಿರಯ್ಯ ಅವರ ಶವವನ್ನು ಡೀಸಿ ಕಚೇರಿ, ಜಿಪಂ ಕಚೇರಿ ಮುಂಭಾಗ ಇಟ್ಟು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಈ ಕಾರಣ ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಟಗಲ್‌ ಸರ್ವೆ ಸಂಖ್ಯೆ 94ರಲ್ಲಿ 2 ಎಕರೆ ಭೂಮಿಯ ನ್ನು ಗುರುತಿಸಿ, ನಿವಶೇನಗಳನ್ನು ವಿಂಗಡಿಸಿಕೊಡುವುದಾಗಿ ತಿಳಿಸಿದ್ದು, ಭೂಮಿ ಸರ್ವೆ ನಡೆಸಿದ್ದಾರೆ.

ನಾಯಕನ ಸ್ಮರಿಸಿದ ತಾತ್ಕಾಲಿಕ ಗುಡಿಸಲು:

ತಾಲೂಕು ಆಡಳಿತ ಸರ್ವೆ ಸಂಖ್ಯೆ 94ರಲ್ಲಿ ಖಚಿತವಾಗಿ ಸ್ಥಳ ಗುರುತಿಸಿರುವ ಕಾರಣ ಕೂಟಗಲ್‌ ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ ವಾಸವಿರುವಇರುಳಿಗ ಕುಟುಂಬಗಳು ತಾ ತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಾರಂಭಿಸಿದ್ದಾರೆ. ಇರುಳಿಗ, ಬುಡಕಟ್ಟು ಜನಾಂಗದ ನಾಯಕ ಬಿರ್ಸಾಮುಂಡಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ, ತಮ್ಮ ಸ್ವಂತ ನೆಲಕ್ಕೆ ರತ್ನಗಿರಿ ಹಾಡಿ ಎಂದು ನಾಮಕರಣಮಾಡಿ ತಾತ್ಕಾಲಿಕ ವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಾರಂಭಿಸಿದ್ದಾರೆ. ತಾಲೂಕು ಆಡಳಿತ ತಮಗೆ ನಿವೇಶನಗಳನ್ನು ವಿಂಗಡಿಸಿ, ಖಾತೆ ಮಾಡಿಕೊಟ್ಟ ನಂತರ ಸ್ವಂತ ಮನೆ ನಿರ್ಮಿಸಿಕೊಳ್ಳಲು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.

45 ಕುಟುಂಬದ ಆಸರೆಗೆ 5 ಎಕರೆ ಬೇಡಿಕೆ: ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಇರುಳಿಗಸಂಘಟನೆಯ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಇರುಳಿಗ, 40 ವರ್ಷಗಳಿಂದ ಈ ಭಾಗದ ಇರುಳಿಗ ಕುಟುಂಬಗಳು ಅನುಭವಿಸಿದ ಯಾತನೆಗೆ ಸ್ಪಲ್ಪ ಮಟ್ಟಿಗೆ ಪರಿಹಾರ ಸಿಕ್ಕಂತಾಗಿದೆ. ತಮ್ಮೊಂದಿಗೆ ರಾಜು, ಬಾಲರಾಜ್ ಮಹದೇವಯ್ಯ, ಶಿವರಾಜ್ ಜೆ.ಎಲ್., ಸಂಶೋಧನಾ ವಿದ್ಯಾರ್ಥಿ ಎಸ್‌.ರುದ್ರೇಶ್ವರ, ಡಾ. ಕೆ.ವಿ.ಕೃಷ್ಣಮೂರ್ತಿ ಮುಂತಾದವರು ಜಿಲ್ಲಾಡಳಿತ, ಜಿಪಂ ಮೇಲೆ ಒತ್ತಡ ಹೇರಲು ನೆರವಾಗಿದ್ದಾರೆ. ಜಿಲ್ಲಾಡಳಿತ, ಜಿಪಂ ಸಹ ತಮ್ಮ ಮನವಿಗೆ ಸ್ಪಂದಿಸಿದೆ. ನಿವೇಶನ ವಿತರಿಸಲು ಮುಂದಾಗಿದ್ದಾರೆ.

ಆದರೆ 45 ಕುಟುಂಬಗಳಿಗೆ ನಿವೇಶನಗಳನ್ನು ವಿತರಿಸಬೇಕಾಗಿದೆ. ಈ ಹಿಂದೆ ಸರ್ವೆ ಸಂಖ್ಯೆ 43ರಲ್ಲಿ 5 ಎಕರೆ ಗುರುತಿಸಲಾಗಿತ್ತು. ತಾಲೂಕು ಆಡಳಿತ ಈಗ ಸರ್ವೆ ಸಂಖ್ಯೆ 94ರಲ್ಲಿ ಕೇವಲ 2 ಎಕರೆ ಭೂಮಿ ಕೊಟ್ಟಿದೆ. ಎಲ್ಲ 45 ಕುಟುಂಬಗಳಿ ಗೂ ನಿವೇಶನಬೇಕಾಗಿದ್ದು, 5 ಎಕರೆ ಭೂಮಿ ಮಂಜೂರು ಮಾಡ ಬೇಕು ಎಂದು ಒತ್ತಾಯಿಸಿದ್ದಾರೆ.

ರತ್ನಗಿರಿ ಹಾಡಿ ಎಂದು ನಾಮಕರಣ: ಇರುಳಿಗರ

ಭವಣೆಯನ್ನು ಕಂಡ ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ ಮತ್ತು ಸಿಇಒ ಇಕ್ರಮ್‌ ಸ್ಪಂದಿಸಿದ್ದಾರೆ.ಭೂಮಿ ಗುರುತಿಸಿದ್ದಾರೆ. ಇರುಳಿಗ ಕುಟುಂಬಗಳುಗುರುತಿಸಿರುವ ಭೂಮಿಯಲ್ಲೇ ತಾತ್ಕಾಲಿಕವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಾರಂಭಿದ್ದಾರೆ. ತಮ್ಮದೇಆದ ಸ್ಥಳಕ್ಕೆ ಕುಟುಂ ಬಗಳು ರತ್ನಗಿರಿ ಹಾಡಿ ಎಂದು ನಾಮಕರಣ ಮಾಡಿದ್ದಾರೆ. ಊರಿನ ಪ್ರಮುಖರಾದಸಂಜೀವಯ್ಯ, ಮಂಜುನಾಥ್‌.ಕೆ.ಎಚ್‌ ಸೇರಿದಂತೆಹಲವರು ಸಹ ಸಹಕಾರ ಕೊಟ್ಟಿದ್ದಾರೆ. ಜಿಲ್ಲಾಡಳಿತ ನೂತನವಾಗಿ ನಿವೇಶನಗಳನ್ನು ವಿಂಗಡಿಸಿದ ನಂತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸಿಕೊಡಬೇಕು ಎಂದು ಅವರು ಜಿಲ್ಲಾಧಿಕಾರಿಗಳು ಹಾಗು ಸಿಇಒ ಅವರನ್ನು ಆಗ್ರಹಿಸಿದ್ದಾರೆ.

ಸಿಇಒ ಭೇಟಿ ಪರಿಶೀಲನೆ :

ಕೂಟಗಲ್‌ ಗ್ರಾಮದಲ್ಲಿ ಇರುಳಿಗ ಕುಟುಂಬಗಳಿಗೆ ನಿವೇಶನ ವಿತರಿಸಲು ಗುರುತಿಸಿರುವ ಸ್ಥಳಕ್ಕೆ ಜಿಪಂಸಿಇಒ ಇಕ್ರಮ್‌ ಇತ್ತೀಚಿಗಷ್ಟೇ ಭೇಟಿ ಕೊಟ್ಟಿದ್ದರು.ಭೂಮಿ ಸರ್ವೆ, ನಿವೇಶನಗಳ ವಿಂಗಡಣೆಗೆ ಕೈಗೊಂಡಿರುವ ಕ್ರಮಗಳು ಇತ್ಯಾದಿ ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆಅವರು ಇರುಳಿಗ ಕುಟುಂಬಗಳು ಮತ್ತು ಕೂಟಗಲ್‌ ಗ್ರಾಮಸ್ಥರ ಅಹವಾಲು ಆಲಿಸಿದರು.

ಕೂಟಗಲ್‌ ಗ್ರಾಮದ ಸರ್ವೆ ಸಂಖ್ಯೆ 94ರಲ್ಲಿ 2 ಎಕರೆ ಭೂಮಿ ಯನ್ನು ಇರುಳಿಗರ ವಸತಿ ಲೇಔಟ್‌ಗೆಂದು ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶಿಸಿದ್ದಾರೆ. ಇನ್ನು ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕಾಗಿದೆ. ಅರ್ಹ ಕುಟುಂಬಗಳಿಂದ ಅಗತ್ಯ ದಾಖಲೆ ಪಡೆದುಕೊಂಡು, 30×40 ಅಳತೆಯ ನಿವಶೇನಗಳನ್ನು ವಿಂಗಡಿಸಲಾಗುವುದು. ಮುನಿಯಪ್ಪ, ಪಿಡಿಒ, ಕೂಟಗಲ್‌ ಗ್ರಾಪಂ

ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.