ಭೈರವನದುರ್ಗ ಬೆಟ್ಟದಲ್ಲಿ ಸೌಲಭ್ಯ ಕೊರತೆ


Team Udayavani, Nov 23, 2019, 4:44 PM IST

RN-TDY-1

ಕುದೂರು: ಹತ್ತು ಹಲವು ವೈಶಿಷ್ಟ್ಯಗಳ ಅಗರ ಹಾಗೂ ಚಾರಣ ಪ್ರೀಯರ ಸ್ವರ್ಗವಾಗಿರುವ ಭೈರವನದುರ್ಗ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಗೊಳಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಪ್ರವಾಸಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಪ್ರಕೃತಿ ಸೌಂದರ್ಯ, ಗುಹಾಂತರ ದೇವಾಲಯ ಕೋಟೆ, ಇದರೊಳಗೊಂದು ಪಾತಾಳ ಗಂಗೆ, ರಾಜ ಮಹರಾಜರ ಕಾಲದ ಶಾಸನಗಳು, ಮೂರ್ತಿಗಳು, ಉಬ್ಬು ಶಿಲ್ಪಿಗಳು ಇವೆಲ್ಲವುಗಳ ಜತೆಗೆ ವನ್ಯಜೀವಿಗಳು ಹೀಗೆ ಪ್ರಕೃತಿ ಸೌಂದರ್ಯ ದಿಂದ ಕಂಗೊಳಿಸುತ್ತಿರುವ ಈ ಬೆಟ್ಟ ಅಭಿವೃದ್ಧಿಯಿಂದ ವಂಚಿತವಾಗಿರುವುದು ಚಾರಣ ಪ್ರಿಯರ ಮುನಿಸಿಗೆ ಕಾರಣವಾಗಿದೆ.

ಪ್ರತಿ ಭಾನುವಾರ ಪೂಜೆ: ಬೆಟ್ಟದ ಮಧ್ಯ ಭಾಗದಲ್ಲಿರುವ ಭೈರವೇಶ್ವರ ಸ್ವಾಮಿಗೆ ಪ್ರತಿ ಭಾನುವಾರ ಪೂಜೆ ನೆಡೆಯುತ್ತದೆ. ಬೆಳಗ್ಗೆ 11ರಿಂದ 4 ವರೆಗೆ ಪೂಜೆ ನೆಡೆಯುತ್ತದೆ. ಈ ವೇಳೆ ಭಕ್ತರ ದಂಡೆ ಹರಕೆ ತೀರಿಸಲು ಬೆಟ್ಟಕ್ಕೆ ಬಂದಿರುತ್ತದೆ. ಹಲಸಿನ ರಸಾಯನ ಸ್ವಾಮಿಗೆ ಹೆಚ್ಚು ಪ್ರಿಯ ಎಂದು ನಂಬಲಾಗಿದ್ದು ಹೆಚ್ಚಿನ ಭಕ್ತರು ಇದನ್ನೆ ನೈವೇದ್ಯಕ್ಕೆ ತರುತ್ತಾರೆ ಎಂದು ಹೇಳುತ್ತಾರೆ ಅರ್ಚಕರು.

ಸಿಹಿ ನೀರಿನ ಪಾತಾಳ ಗಂಗೆ: ಬೆಟ್ಟದ ತುದಿಯಲ್ಲಿ ಸಿಹಿ ನೀರಿನ ಕಲ್ಯಾಣಿಯಿದೆ. ಬೆಟ್ಟ ಹತ್ತಿ ಆಯಾಸ ವಾಗಿರುವವರು ಈ ನೀರನ್ನು ಕುಡಿದು ದಣಿವಾರಿಸಿ ಕೊಳ್ಳುತ್ತಾರೆ. ಇವೆಲ್ಲವೂ ರಾಜ ಮಹರಾಜರ ಆಳ್ವಿಕೆಯ ವೈಭವವನ್ನು ನಿರೂಪಿಸುವ ಕುರುಹುಗಳಿವೆ. ಏಳೆಂಟು ದೊಡ್ಡ ಬಂಡೆಗಳು ಆಧಾರವಿಲ್ಲದೆ ನಿಂತಿರುವುದು ಸೋಜಿಗ ಮೂಡಿಸುತ್ತದೆ.

ಕಡಿದಾದ ಬಂಡೆಗಳ ಇಳಿಜಾರು: ಬೆಟ್ಟವು ಕಡಿದಾದ ಬಂಡೆಗಳ ಸಾಲಿನ ಮಧ್ಯೆ ಇದ್ದು, ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಕಡಿದಾದ ಬಂಡೆಗಳ ನಡುವೆ ರೋಫಿಂಗ್, ಕ್ಲೈಂಬಿಂಗ್‌ ಮಾಡಲು ಸೂಕ್ತವಾಗಿದೆ. ಬೆಟ್ಟದ ತುದಿಯಲ್ಲಿ ಒಂದು ಕಾಲು ದಾರಿಯಿದ್ದು, ಉಳಿದ ಅರ್ಧ ಭಾಗ ಕ್ರಮಿಸಲು ಕಡಿದಾದ ಬಂಡೆಗಳ ಮೂಲಕ ಸಾಗಬೇಕು. ಅದ್ದರಿಂದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ವಿಶಿಷ್ಟ, ವಿಭಿನ್ನ, ಬೆಟ್ಟಕ್ಕೆ ಮೂಲ ಸೌಲಭ್ಯ ಒದಗಿಸಬೇಕೆಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.

ಬೆಟ್ಟ ತಲುಪುವುದು ಹೇಗೆ?:  ಕುದೂರು ನಿಲ್ದಾಣದಿಂದ 1.5 ಕೀ.ಮಿ. ದೊರದಲ್ಲಿರುವ ಈ ಬೆಟ್ಟದ ಬುಡಕ್ಕೆ ಪ್ರವೇಶಿಸುತ್ತಿದ್ದಂತೆ ದೇವಾಲಯ ಆರಂಭದ ಮೆಟ್ಟಿಲುಗಳ ಬಳಿ ಎರಡು ಉಬ್ಬು ಶಿಲ್ಪಿಗಳು ಕಾಣಸಿಗುತ್ತವೆ. 400 ರಿಂದ 500 ಮೆಟ್ಟಿಲುಗಳು ಹತ್ತಿದರೆ ಬೈರವೇಶ್ವರ ಸ್ವಾಮಿ ಲಿಂಗ ರೂಪದಲ್ಲಿ ಪ್ರತಿಷ್ಠಾಪಿತವಾಗಿರುವ ಪುರಾತನ ಗುಹೆ ಗೋಚರಿಸುತ್ತದೆ. ಅದರ ಅಕ್ಕಪಕ್ಕ ಅನೇಕ ಗುಹೆಗಳಿವೆ. ದೇವಾಲಯದ ಬಳಿ ವಿಶಿಷ್ಟ ಸುಗಂಧ ಭರಿತ ಜಲಾರ್‌, ಶಿವನಿಗೆ ಪ್ರಿಯ ಬಿಲ್ವ ಪತ್ರೆ ಮರಗಳಿವೆ. ಸ್ವಾಮಿ ಪೂಜೆಗೆ ಹೂ ಒದಗಿಸುತ್ತವೆ. ದೇವಾಲಯದ ಪಕ್ಕದಲ್ಲಿ ಇಳಿ ಜಾರಿದ್ದು, ಕಾಲಿಟ್ಟರೆ ಜಾರುವಂತಹ ನುಣುಪನ್ನು ಕಾಣಬಹುದಾಗಿದೆ.

 

-ಕೆ.ಎಸ್‌.ಮಂಜುನಾಥ್‌

ಟಾಪ್ ನ್ಯೂಸ್

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.