ಖಾಸಗಿ ಶಾಲೆ ವ್ಯಾಮೋಹ ಬಿಡಿ
Team Udayavani, Sep 25, 2019, 4:41 PM IST
ಕುದೂರು: ಗಾಂಧೀಜಿ 150ನೇ ಜಯಂತಿ ಅಂಗವಾಗಿ ಸರ್ಕಾರಿ ಶಾಲೆ ಗೋಡೆಗಳ ಮೇಲೆ ಚಿತ್ರ ಬರೆದು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಲಾಗುವುದು ಎಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು ಹೇಳಿದರು.
ಹೋಬಳಿಯ ಶ್ರೀಗಿರಿಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಬೇಕು. ಸರ್ಕಾರಿ ಶಾಲೆಗಳೂ ಸಹ ಖಾಸಗಿ ಶಾಲೆಗಳಿಗಿಂತ ಕಮ್ಮಿ ಇಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಯವುದೇ ರೀತಿಯ ಸಹಕಾರ ನೀಡಲು ಸಿದ್ಧವಾಗಿದ್ದೇವೆ. ಸರ್ಕಾರಿ ಶಾಲೆಯ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸಬೇಕಾಗಿದೆ ಎಂದರು.
ಅಭಿಯಾನದ ಮೂಲಕ ಮಾಗಡಿ ತಾಲೂಕಿನ ಸಾತನೂರು, ಕಲ್ಯಾ, ಹೂಜಿಗಲ್ಲು, ಹೊಸಪಾಳ್ಯ ಜನತಾ ಕಾಲೂನಿ, ಮತ್ತ ಶ್ರೀಗಿರಿಪುರ ಶಾಲೆ ಕೊಠಡಿಗಳ ಮೇಲೆ ವಿಭಿನ್ನ ಬಗೆಯ ಮಕ್ಕಳಿಗೆ ಆಸಕ್ತಿ ಮೂಡಿಸುವಂತಹ ಹಾಗೂ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಚಿತ್ರಗಳನ್ನು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಬಿಡಿಸಿದರು.
ಬಿಜೆಪಿ ಯುವ ಮೂರ್ಚಾ ಕಾರ್ಯದರ್ಶಿ ಬಾಲಾಜಿ ಮಾತನಾಡಿದರು. ಈ ವೇಳೆ ಧನಂಜಯ, ರಾಜೇಶ್, ಮಾರಪ್ಪ, ತಿಪ್ಪಸಂದ್ರ ರಾಂಪ್ರಸಾದ್, ಕುದೂರು ಗಂಗಣ್ಣ, ಶಶಿಧರ್, ಶಂಕರ್, ರಾಘವ, ಶಿಕ್ಷಕಿ ವೀಣಾ ಭಟ್, ಬೆಂಗಳೂರು ದಯಾನಂದ್ ಸಾಗರ್ ಎಂಜಿನಿಯರಿಂಗ್ ಕಾಲೇಜು, ಚಾಮರಾಜಪೇಟೆ ಆದರ್ಶ ಕಾಲೇಜಿನ ವಿದ್ಯಾರ್ಥಿಗಳು, ಬಿಜೆಪಿ ಮುಖಂಡರು ಹಾಜರಿದ್ದರು.