ಚಿರತೆ ದಾಳಿಗೆ ಮಹಿಳೆ ಬಲಿ
Team Udayavani, Jan 19, 2018, 6:30 AM IST
ರಾಮನಗರ: ಹಸು ಮೇಲೆ ದಾಳಿ ಮಾಡಿದ ಚಿರತೆಗೆ ಪ್ರತಿರೋಧ ಒಡ್ಡಿದ ಮಹಿಳೆಯ ಮೇಲೆ ಎರಗಿದ ಚಿರತೆಯೊಂದು ಆಕೆಯನ್ನು ಬಲಿತೆಗೆದುಕೊಂಡ ಘಟನೆ ತಾಲೂಕಿನ ಚಿಕ್ಕಸೂಲಿಕರೆ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಗ್ರಾಮದ ಪುಟ್ಟಹಲಗಮ್ಮ (40) ಚಿರತೆ ದಾಳಿಗೆ ಬಲಿಯಾಗಿರುವ ಮಹಿಳೆ. ಹಸುಗಳನ್ನು ಮೇಯಿಸಲು ಗ್ರಾಮದ ಬಳಿ ಇರುವ ಅರಣ್ಯ ಪ್ರದೇಶಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಹಸುವೊಂದರ ಮೇಲೆ ಎರಗಿದ ಚಿರತೆಯನ್ನು ಕಂಡ ಪುಟ್ಟಹಲಗಮ್ಮ ಕೂಗಿಕೊಂಡು ಚಿರತೆಗೆ ಪ್ರತಿರೋಧ ಒಡ್ಡಿದರು. ಇದರಿಂದ ಆಕ್ರೋಶಗೊಂಡ ಚಿರತೆ ಹಸುವನ್ನು ಬಿಟ್ಟು ಪುಟ್ಟಹಲಗಮ್ಮನ ಮೇಲೆ ಎರಗಿತು. ತಕ್ಷಣ ಅಲ್ಲೇ ಇದ್ದ ಈಕೆಯ ಪತಿ ಶಿವಪ್ಪಕಿರುಚಾಡಿದರು. ಕೂಗಾಟ ಕೇಳಿ ಗ್ರಾಮಸ್ಥರು ಆಗಮಿಸಿದರಾದರೂ ಅಷ್ಟರಲ್ಲಾಗಲೆ ಚಿರತೆ ಪುಟ್ಟಹಲಗಮ್ಮ ಅವರ ದೇಹವನ್ನು ಕಚ್ಚಿಕೊಂಡು ಕರಡಿ ಹಳ್ಳದ ಬಳಿಯ ಗವಿಯ ಬಳಿಗೆ ಎಳೆದೊಯ್ದಿತ್ತು. ಬಳಿಕ, ಜನರ ಕೂಗಾಟ ಕೇಳಿ ಚಿರತೆ ದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!