ಸಾಹಿತ್ಯ ಸಾಮಾಜಿಕ ಬದಲಾವಣೆಗೆ ಅಸ್ತ್ರ
Team Udayavani, Sep 18, 2019, 1:49 PM IST
ಮಾಗಡಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಗುಡಿಸಲ ಬೆಳಕು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಸಾಹಿತಿ ಡಾ.ಸಿದ್ದಲಿಂಗಯ್ಯ ಉದ್ಘಾಟಿಸಿದರು.
ಮಾಗಡಿ: ಸಾಮಾಜಿಕ ಬದಲಾವಣೆಗೆ ಸಾಹಿತ್ಯ, ಕಾವ್ಯ ಅಸ್ತ್ರವಿದ್ದಂತೆ, ಅದನ್ನು ಬಳಸಿಕೊಂಡು ಸಮಾಜದಲ್ಲಿ ಸಮಾನತೆಗೆ ಶ್ರಮಿಸಬೇಕಿದೆ ಎಂದು ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತೋಟದ ಮನೆ ಗಿರೀಶ್ ಅವರ ಗುಡಿಸಲ ಬೆಳಕು ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಲ್ಯ ಗ್ರಾಮ ಬೌದ್ಧರ ವಿಶ್ವವಿದ್ಯಾಲಯವಾಗಿತ್ತು. ಕಲ್ಯದ ಕಲಿಗಣನಾಥ ಗುಹಾಂತರ ದೇವಾಲಯದಲ್ಲಿ ಬುದ್ಧನ ಶಿರಸ್ಸಿದೆ. ಕಲ್ಯ ಬಗ್ಗೆ ಸಂಪೂರ್ಣವಾಗಿ ಸಂಶೋಧನೆಯಾಗಬೇಕು. ಸಂಸ್ಕೃತಿ ಪಂಡಿತತ್ತೋಮರ ಪರಂಪರೆ ಮಾಗಡಿಯಲ್ಲಿದೆ. ಭೌಗೋಳಿಕವಾಗಿ ಬೆಟ್ಟಗುಡ್ಡಗಳಿಂದ ಕೂಡಿರುವ ಸುಂದರವಾದ ಕಾನನ ಪ್ರದೇಶವಾಗಿದ್ದು, ಸಹಜವಾಗಿ ಮಾಗಡಿಯ ನೆಲ, ಜಲ, ಭಾಷೆ, ಸಂಸ್ಕೃತಿ, ನಾಟಕಗಳು ಕವಿ ಹೃದಯವನ್ನು ಮಿಡಿಯುತ್ತವೆ ಎಂದು ಹೇಳಿದರು.
ಮಾಗಡಿ ಸಂಸ್ಕೃತಿಯ ತೊಟ್ಟಿಲು: ಮಾಗಡಿ ಸೀಮೆಯಲ್ಲಿ ಸಾಹಿತಿಗಳು, ಸಂಸ್ಕೃತ ಪಂಡಿತರು, ಸಂಗೀತಗಾರರು, ನಾಟಕಕಾರರು ಕವಿಗಳಿಗೇನು ಕೊರತೆಯಿಲ್ಲ. ಮಾಗಡಿ ಒಂದು ಸಾಂಸ್ಕೃತಿ ತೊಟ್ಟಿಲ್ಲಿದ್ದಂತೆ, ಅನೇಕ ಶ್ರೇಷ್ಟರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕ ಹೆಬ್ಬಳಲಿನ ಎಚ್.ವಿ.ನಂಜುಂಡಯ್ಯ, 64 ಭಾಷೆಯನ್ನು ಒಂದೇ ಭಾಷೆಗೆ ತುರ್ಜುಮೆ ಮಾಡಿರುವ ಸಿರುಬು ವಲಯ ಕರಲಮಂಗಲದ ಶ್ರೀಕಂಠಯ್ಯ, ನಾರಸಂದ್ರದ ಬಸವಪ್ಪ ಶಾಸ್ತ್ರಿ, ಸಾತನೂರಿನ ಅಭಿನವ ಕಾಳಿದಾಸ ಪುಂಡರೀಕ ವಿಠಲ, ತಂಬೂರಿ, ವೀಣೆ ಸಂಗೀತ ವಿದ್ವಾನ್ ಶ್ರೀನಿವಾಸಚಾರ್ಯ ಇನ್ನೂ ಅನೇಕರು ಮಾಗಡಿಯವರು ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.
ಸಮಾನತೆಯೇ ನಿಜವಾದ ಧರ್ಮ: ತೋಟದ ಮನೆ ಗಿರೀಶ್ ಅವರು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ತಾವು ಬಾಲ್ಯದಲ್ಲಿ ಅನುಭವಿಸಿದ ಶೋಷಣೆಯಿಂದ ಹೊರಬಂದ ರೀತಿಯನ್ನು ತಮ್ಮ ಸಮರ್ಥವಾಗಿ ರಚಿಸಿದ್ದಾರೆ. ಕಲ್ಲಿನ ಮೂರ್ತಿಯನ್ನು ಪೂಜಿಸುವುದಕ್ಕಿಂತ ಮಾನವರನ್ನು ಸಮಾನತೆಯಿಂದ ನೋಡುವುದೇ ನಿಜವಾದ ಧರ್ಮ. ಯುವ ಕವಿಗಳು ಮೊದಲು ಪಂಪ, ಲಕ್ಷ್ಮೀಶ, ಕುಮಾರವ್ಯಾಸ, ಬಿಎಂಶ್ರೀ, ಕುವೆಂಪು, ದಾ.ರಾ.ಬೇಂದ್ರೆ, ದಾಸ ಸಾಹಿತ್ಯ, ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಗ್ರಾಮೀಣ ಮೂಲದ ಜನಪದಗಳಾದ ಕೋಲಾಟ, ರಾಗಿ ಬೀಸುವ ಪದ, ಗೀಗೀ ಪದ, ಕಂಸಾಳೆ ನೃತ್ಯ, ಸೋಮನ ಕುಣಿತ, ಪಠದ ಕುಣಿತ, ಜವಳಿ ಕುಣಿತ, ನಾಟಕಗಳು, ಗ್ರಾಮ ದೇವತೆ ಉತ್ಸವ ತಮಟ, ವಾಧ್ಯ ಇವುಗಳನ್ನು ಜೀವಂತಗೊಳಿಸಬೇಕು ಎಂದು ತಿಳಿಸಿದರು.
ಸಮಾಜಮುಖೀ ಚಿಂತನೆ ರೂಪಿಸಿಕೊಳ್ಳಿ: ಸಾಹಿತಿ ಎಲ್.ಎನ್.ಮುಕುಂದರಾಜ್ ಮಾತನಾಡಿ, ಮಾನವರಾದವರು ದೇವಸ್ಥಾನದ ಬಳಿ ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಲ್ಲುವ ಬದಲಾಗಿ ಗ್ರಂಥಾಲಯದೊಳಗೆ ಪ್ರವೇಶಿಸಿ ಸಾಹಿತ್ಯವನ್ನು ಓದುವ ಹವ್ಯಾಸವನ್ನು ಜನರು ಬೆಳೆಸಿಕೊಳ್ಳಬೇಕು. ಇದರಿಂದ ದೇಶ ಪ್ರಗತಿ ಸಾಧಿಸುತ್ತದೆ. ರಾಜಕಾರಣಿಗಳು, ಅಧಿಕಾರಿಗಳು ಸಾಂಸ್ಕೃತಿಕವಾಗಿ ಬದುಕುವಂತ ವಾತಾವರಣ ರೂಢಿಸಿಕೊಳ್ಳಬೇಕು. ಸಮಾಜಮುಖೀ ಚಿಂತನೆಗಳು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು, ಬೆಸ್ಕಾಂ ನೌಕರರ ಸಂಘದ ರಾಜ್ಯಾದ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ, ಸಿ.ಬಿ.ಅಶೋಕ್, ಚಿಕ್ಕವೀರಯ್ಯ, ಕಡಬಗೆರೆ ಮುನಿರಾಜು, ಗುಡಿಸಲು ಬೆಳಕು ಸಂಕಲನಕಾರ ತೋಟದ ಮನೆ ಗಿರೀಶ್ ಮಾತನಾಡಿದರು.
ಈ ವೇಳೆಯಲ್ಲಿ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಜಿ.ಶಿವರಾಮಯ್ಯ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್, ಸದಸ್ಯ ನಾರಾಯಣಪ್ಪ, ಜಿಪಂ ಮಾಜಿ ಅಧ್ಯಕ್ಷ ಧನಂಜಯ, ಪುರಸಭಾ ಮಾಜಿ ಅಧ್ಯಕ್ಷರಾದ ಎಚ್.ಜೆ.ಪುರುಷೋತ್ತಮ್, ರಂಗಹನುಮಯ್ಯ, ತಮ್ಮಣ್ಣಗೌಡ, ಸೀಗೇಕುಪ್ಪೆ ಶಿವಣ್ಣ, ಕಾಂತರಾಜು, ಸೀಬೇಗೌಡ, ಬೆಸ್ಕಾಂ ಹರೀಶ್, ಕೆಂಪೇಗೌಡ, ರಂಗಸ್ವಾಮಿ, ಶಿವರಾಮು, ಜಯರಾಂ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್ಡಿಕೆ ಸ್ಪರ್ಧೆ ಸುಳಿವು
Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ ಕಬ್ಬಿಣದ ಕಡಲೆ
Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್ ವಾಗ್ಧಾಳಿ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ