ಲಾಕ್ಡೌನ್: ಜನರಿಗೆ ಆತಂಕ ಬೇಡ
Team Udayavani, May 11, 2020, 8:58 AM IST
ಕುದೂರು: ಲಾಕ್ಡೌನ್ನಿಂದಾಗಿ ಜನರು ಆತಂಕಕ್ಕೊಳಗಾಗುವುದು ಬೇಡ. ಜನರಿಗಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಗ್ರಾಪಂ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಅಭಯ ನೀಡಿದರು.
ಭಾನುವಾರ ಗ್ರಾಮದ 7ನೇ ವಾರ್ಡ್ನ ಜನರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಲಾಕ್ಡೌನ್ನಿಂದ ಎಲ್ಲಾ ವರ್ಗದ ಜನರಿಗೂ ಅನಾನೂಕೂಲವಾಗಿದೆ.ಸಮಾಜದ ಕಟ್ಟ ಕಡೆಯ ವರ್ಗವನ್ನು ಇಂತಹ ಸಮಯದಲ್ಲಿ ಕಾಪಾಡಿಕೊಳ್ಳುವುದು ಮಾನವೀಯತೆ ಜೊತೆಗೆ ನಮ್ಮಂಥರಾಜಕಾರಣಿಗಳ ಜವಾಬ್ದಾರಿಯಾಗಿದೆ. ನಮ್ಮ ಕಾರ್ಯಕರ್ತರು ಹಾಗೂ ಸ್ನೇಹಿತ ರೊಂದಿಗೆ 200ಕ್ಕೂ ಹೆಚ್ಚು ಜನರನ್ನು ಗುರುತಿಸಿ, ಅಂತಹವರಿಗೆ ಅಕ್ಕಿ, ಎಣ್ಣೆ, ಬೆಳೆ ಇತರೆ ಅಗತ್ಯ ವಸ್ತು ನೀಡಲಾಗುತ್ತಿದೆ. ಲಾಕ್ಡೌನ್ ಸಮಯದಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಗ್ರಾಪಂ ಪೌರಕಾರ್ಮಿಕರು, ಕೋವಿಡ್ ವಾರಿ ಯರ್, ಪತ್ರಕರ್ತರನ್ನು ಅಭಿನಂದನೆ ಸಲ್ಲಿಸುವ ಜವಬ್ದಾರಿಯು ನಮ್ಮದಾಗಿದೆ ಎಂದು ಹೇಳಿದರು.
ಲಕ್ಷ್ಮೀ ವೆಂಕಟೇಶ್ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಕೆ.ಬಿ.ಬಾಲರಾಜು, ಕನ್ನಿಕಾ, ಲೀಲಾಮೃತಶ್ರೀ, ಕುಮಾರ್, ನಾಗೇಶ್, ಸೀನಪ್ಪ, ಜಯರಾಮು, ಗೋವಿಂದರಾಜು, ರಾಜಶೇಖರ್ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ