ಮಾಗಡಿ:ಜೆಡಿಎಸ್-ಕಾಂಗ್ರೆಸ್ ಘರ್ಷಣೆ; ಲಾಠಿ ಪ್ರಹಾರ
Team Udayavani, Mar 14, 2018, 11:16 AM IST
ಮಾಗಡಿ: ಆಕ್ಷೇಪಾರ್ಹ ಫೇಸ್ಬುಕ್ ಪೋಸ್ಟ್ವೊಂದರ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಘಟನೆ ಬುಧವಾರ ನಡೆದಿದೆ.
ಮಂಗಳವಾರ ರಾತ್ರಿ ಪುರಸಭಾ ಸದಸ್ಯನೊಬ್ಬನಿಗೆ ಹಲ್ಲೆ ನಡೆದ ಬಳಿಕ ಘಟನೆ ಉದ್ವಿಗ್ನಗೊಂಡಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿ ಬಡಿದಾಡಿಕೊಂಡಿದ್ದಾರೆ.
ಮಾಗಡಿ ಠಾಣೆಯ ಎದುರು ನೂರಾರು ಜೆಡಿಎಸ್ ಕಾರ್ಯಕರ್ತರು ಜಮಾವಣೆಗೊಂಡು ಕೈ ಕೈ ಮಿಸಲಾಯಿಸಲು ಮುಂದಾಗಿದ್ದಾರೆ. ಠಾಣೆಯ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ.
ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದಾರೆ.
ಮಾಡಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ನಿರ್ಮಾಣವಾಗಿದೆ.