ಮಾಗಡಿ: ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು
Team Udayavani, Jul 3, 2020, 6:34 AM IST
ಮಾಗಡಿ: ಕೆರೆಯಲ್ಲಿ ಇಳಿದು ತಾವರೆ ಹೂ ಕೀಳುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಮಾಗಡಿಯಲ್ಲಿ ನಡೆದಿದೆ. ಪಟ್ಟಣದ ಹೊಸಪೇಟೆ ನಿವಾಸಿ ಕೃಷ್ಣಪ್ಪ (37) ಮೃತ ದುರ್ದೈವಿ.
ತಾಲೂಕಿನ ರಾಮ ನಗರದ ರಸ್ತೆ ಮಾರುತಿ ಪಬ್ಲಿಕ್ ಶಾಲೆ ಸಮೀಪದ ಕೆರೆಯಲ್ಲಿ ಮಂಗಳವಾರ ತಾವರೆ ಹೂ ಕೀಳಲು ಹೋಗಿದ್ದ ಕೃಷ್ಣಪ್ಪ ನೀರಿನ ಹೂಳಿನಲ್ಲಿ ಸಿಲುಕಿ ಹೊರ ಬರಲಾಗದೆ, ಆಕಸ್ಮಿಕ ವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ ಎನ್ನಲಾಗಿದೆ.
ಬುಧವಾರ ಆಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿ, ಕೆರೆಯಿಂದ ಶವ ಹೊರತೆಗೆದಿದ್ದಾರೆ. ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿತ್ತು. ಮಾಗಡಿ ಪೊಲೀಸರು ಪ್ರಕರಣ ದಾಖ ಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.