ಮೇಕೆದಾಟು ಪಾದಯಾತ್ರೆ 2.0; ಬಿಡದಿಯಿಂದ ಎರಡನೇ ದಿನದ ನಡಿಗೆ ಆರಂಭ
Team Udayavani, Feb 28, 2022, 11:29 AM IST
ರಾಮನಗರ: ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ 2.0 ಎರಡನೇ ದಿನದ ನಡಿಗೆ ಬಿಡದಿಯಿಂದ ಆರಂಭವಾಗಿದೆ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ನಾಯಕರುಗಳಾದ ಪರಮೇಶ್ವರ, ಆಂಜನಪ್ಪ, ಚಲುವರಾಯ ಸ್ವಾಮಿ, ಕಾಂತರಾಜು, ಲಕ್ಷ್ಮಿ ಹೆಬ್ಬಾಳ್ಕರ್ ಮುಂತಾದವರು ಭಾಗಿಯಾಗಿದ್ದಾರೆ.
ಕಾಂಗ್ರೆಸ್ ನಾಯಕರು ಇಂದು 19 ಕಿಮೀ ಅಂದರೆ ಕೆಂಗೇರಿವರೆಗೆ ನಡೆಯಲಿದ್ದಾರೆ. ದಾರಿಯುದ್ದಕ್ಕೂ ದಣಿವಾರಿಸಲು ಕಬ್ಬಿನ ಹಾಲು, ಹಣ್ಣು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:ಉಕ್ರೇನ್ ನಿಂದ ಆಗಮಿಸಿದ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಕೆಎಸ್ಆರ್ ಟಿಸಿ ಪ್ರಯಾಣ
ಕೋವಿಡ್ ಕಾರಣದಿಂದ ಸ್ಥಗಿತವಾಗಿದ್ದ ಮೇಕೆದಾಟು ಪಾದಯಾತ್ರೆಯು ರವಿವಾರ ಮತ್ತೆ ಆರಂಭವಾಗಿತ್ತು. ರಾಮನಗರದಿಂದ ಮತ್ತೆ ಆರಂಭವಾದ ಪ್ರತಿಭಟನೆ ರಾಜಧಾನಿ ಬೆಂಗಳೂರು ತಲುಪಲಿದೆ.