ಪಟಾಕಿ ಬೇಡ ಆಂದೋಲನಕ್ಕೆ ಚಾಲನೆ
Team Udayavani, Oct 27, 2019, 3:28 PM IST
ಚನ್ನಪಟ್ಟಣ: ಜೀವನದಲ್ಲಿ ಕತ್ತಲು ಕಳೆದು ಬೆಳಕು ತರುವ ಬೆಳಕಿನ ಹಬ್ಬವೇ ದೀಪಾವಳಿ ಎಂದು ಮುಖ್ಯ ಶಕ್ಷಕಿ ಶಬಾನಾಬೇಗಂ ಅಭಿಪ್ರಾಯಪಟ್ಟರು.
ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ, ಪಟಾಕಿ ಬೇಡ ಎಂಬ ಅಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರಲ್ಲೂ ಬೆಳಕಿನ ಹಬ್ಬ ದೀಪಾವಳಿ ಸಂತೋಷ, ಸಡಗರ ತರಲಿ. ಪ್ರತಿಯೊಬ್ಬರೂ ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತಗಳು, ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಪಟಾಕಿ ಹಚ್ಚದೇ ಹಸಿರು ದೀಪಾವಳಿ ಆಚರಿಸುವ ಪ್ರತಿಜ್ಞೆ ಮಾಡಬೇಕೆಂದರು.
ಪಟಾಕಿ ಎಂಬುದು ಮಾರಕವಾಗಿದ್ದು, ಪಟಾಕಿ ಸಿಡಿಸುವ ಹಾಗೂ ಪಟಾಕಿ ಸಿಡಿದ ಸಂದರ್ಭದಲ್ಲಿ ಅವಘಡಗಳು ಸಂಭವಿಸಿ, ಪ್ರತಿವರ್ಷ ಅನೇಕರು ಕಣ್ಣು ಕಳೆದುಕೊಂಡಿದ್ದಾರೆ. ಪಟಾಕಿಗಳಿಂದ ಬರುವ ಕಲುಷಿತ ದಟ್ಟ ಹೊಗೆಯಿಂದ ಮಕ್ಕಳಲ್ಲಿ ಅನೇಕ ರೀತಿಯ ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಪಟಾಕಿಯ ಸಿಡಿಸಿದಾಗ ಹೊರಬರುವ ಶಬ್ದದಿಂದ ಹೃದಯ ಕಾಯಿಲೆ, ಉಸಿರಾಟದ ತೊಂದರೆ, ನರಗಳ ದೌರ್ಬಲ್ಯವಿರುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಹಣ ಕೊಟ್ಟು ರೋಗಕ್ಕೆ ತುತ್ತಾಗುವ ಪಟಾಕಿಗಳನ್ನು ಸಿಡಿಸುವುದನ್ನು ಇಂದಿನಿಂದಲೇ ನಿಲ್ಲಿಸಿ ಬಿಡೋಣ.ಈ ನಿಟ್ಟಿನಲ್ಲಿ ಸರ್ಕಾರ ಪಟಾಕಿ ನಿಷೇಧಿಸಬೇಕೆಂದರು. ಶಾಲೆಯ ನೂರಾರು ವಿದ್ಯಾರ್ಥಿಗಳು, ನಗರದ ಎಂ.ಜಿ.ರಸ್ತೆ, ಜೆ.ಸಿ.ರಸ್ತೆ,ಅಂಚೆ ಕಚೇರಿ ರಸ್ತೆ, ಡ್ನೂಂ ಲೈಟ್ ಸರ್ಕಲ್ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಹಳೆಯ ಕೋರ್ಟ್ ರಸ್ತೆ ಹಾಗೂ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪಟಾಕಿನಿರ್ಮೂಲನೆಗೆ ಒತ್ತಾಯಿಸಿ ಆಂದೋಲನ ನಡೆಸಿದರು. ಶಾಲೆಯ ಹಿರಿಯ ದೈಹಿಕ ಶಿಕ್ಷಕ ಚಂದ್ರಯ್ಯ, ಶಿಕ್ಷಕಿಯರಾದ ಗಾಯಿತ್ರಿ, ಅಶ್ವಿನಿ, ಹೇಮಾವತಿ, ಲತಾ, ಮಮತಾ, ವಿನೋದ್ ಹಾಗೂ ಹಲವಾರು ಮಂದಿ ಶಿಕ್ಷಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್