ಜಿಲ್ಲೆಯಲ್ಲಿ ಒಟ್ಟು 1002 ನಾಮಪತ್ರ ಸಲ್ಲಿಕೆ


Team Udayavani, Dec 11, 2020, 3:49 PM IST

ಜಿಲ್ಲೆಯಲ್ಲಿ ಒಟ್ಟು 1002 ನಾಮಪತ್ರ ಸಲ್ಲಿಕೆ

ರಾಮನಗರ: ಜಿಲ್ಲೆಯ ರಾಮನಗರ  ಮತ್ತು ಕನ ಕ ‌ಪುರ ಗ್ರಾಪಂಗೆ ಡಿ.22 ರಂದು  ನಡೆಯುವ ಮೊದಲ ಹಂತದಲ್ಲಿ ಒಟ್ಟು 56 ಗ್ರಾಪಂಗಳ 521 ಕ್ಷೇತ್ರಗಳ 971ಸದಸ್ಯ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಗುರು ವಾರ ರಾಮನಗರ ತಾಲೂಕಿನಲ್ಲಿ 562 ನಾಮಪತ್ರ ಮತ್ತು ಕನಕಪುರದಲ್ಲಿ 440 ನಾಮಪತ್ರಗಳು ಒಟ್ಟು 1002 ನಾಮಪತ್ರಗಳು ಸಲ್ಲಿಕೆಯಾಗಿವೆ.

ರಾಮನಗರದ ಭೈರಮಂಗಲ ಗ್ರಾಪಂ-27, ಕಂಚುಗಾರನಹಳ್ಳಿ-18, ಗೋಪಹಳ್ಳಿ-18, ಮಂಚನಾಯ್ಕನಹಳ್ಳಿ-55, ಬನ್ನಿಕುಪ್ಪೆ (ಬಿ)-33, ಹದ್ರ-38,ಬಿಳಗುಂಬ- 34, ಸುಗ್ಗನಹಳ್ಳಿ -31, ಮಾಯಗಾನಹಳ್ಳಿ -39, ಕೂಟಗಲ್‌ -35, ಅಕ್ಕೂರು -8, ಹುಲಿಕೆರೆಗುನ್ನೂರು -28, ಲಕ್ಷ್ಮೀಪುರ -20, ಕೈಲಾಂಚ-11,ಹುಣಸನಹಳ್ಳಿ -27, ಬನ್ನಿಕುಪ್ಪೆ (ಕೆ)-24, ವಿಭೂತಿಕೆರೆ-34, ಶ್ಯಾನಬೋಗನಹಳ್ಳಿ -30 ಸೇರಿ 562 ನಾಮಪತ್ರ ಸಲ್ಲಿಕೆಯಾಗಿವೆ. ಕನಕಪುರದ ಯಲಚವಾಡಿ ಗ್ರಾಪಂ-30, ಬನವಾಸಿ -23, ಕೊಟ್ಟಗಾಳು-17, ಚೀಲೂರು -26, ದೊಡ್ಡಮರಳ-22, ತೋಕಸಂದ್ರ -33, ತುಂಗಣಿ-16, ದೊಡ್ಡಮುದವಾಡಿ -15,ಚಿಕ್ಕಮುದವಾಡಿ-3,ಹಳ್ಳಿಮಾರನಹಳ್ಳಿ-9,ಸೋಮ ದ್ಯಾಪನಹಳ್ಳಿ -5, ಕಲ್ಲಹಳ್ಳಿ -7, ಚಾಕನ ಹಳ್ಳಿ -20, ಬೂದಿಕುಪ್ಪೆ -3, ಟಿ.ಬೇಕುಪ್ಪೆ-16, ನಾರಾಯಣಪುರ-11, ಶಿವನಹಳ್ಳಿ – 5, ಅಚ್ಚಲು -17, ಚೂಡಹಳ್ಳಿ -11, ಅರೆಕಟದೊಡ್ಡಿ -16, ಕಬ್ಟಾಳು -26, ಹೊನ್ನಿಗನಹಳ್ಳಿ-3, ಕಾಡಹಳ್ಳಿ -6, ಸಾತ ನೂರು -2, ಮರಳೆಬೇಕುಪ್ಪೆ -3, ದೊಡ್ಡಾಲಹಳ್ಳಿ -8, ಐ.ಗೊಲ್ಲಹಳ್ಳಿ -9, ಮಳ್ಳಹಳ್ಳಿ -7, ಹೂಕುಂದ -7, ಅರಕೆರೆ -23, ಹೇರಂದ್ಯಾಪನಹಳ್ಳಿ-5, ಕೊಳ ಗೊಂಡನಹಳ್ಳಿ -5, ಹೊಸದುರ್ಗ-1, ಹುಣಸನಹಳ್ಳಿ-1, ಬನ್ನಿಮಕೋಡ್ಲು -5ಸೇರಿ 440 ನಾಮಪತ್ರ ಸಲ್ಲಿಕೆಯಾಗಿವೆ.

ಜೆಡಿಎಸ್‌ ಬೆಂಬಲಿತರು ನಾಮಪತ್ರ ಸಲ್ಲಿಕೆ: ತಾಲೂಕಿನ ಮಾಯಗಾನಹಳ್ಳಿ ಗ್ರಾಪಂ ಕೇತೋಹಳ್ಳಿ ಸಾಮಾನ್ಯ ಕ್ಷೇತ್ರದಿಂದ ರಮ್ಯಾ, ಮಹಿಳಾ ಮೀಸಲು ಕ್ಷೇತ್ರದಿಂದ ಸುಮಿತ್ರ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್‌ ಮುಖಂಡ ಯೋಗೇಶ್‌ ಕುಮಾರ್‌, ಸಿ.ಎಸ್‌.ಜಯ ಕುಮಾರ್‌, ರಾಮಕೃಷ್ಣಯ್ಯ ಇದ್ದರು.

ನಾಮಪತ್ರ ಸಲ್ಲಿಕೆಗೆ ಮತದಾರರ ಪಟ್ಟಿಯೇ ಇಲ್ಲ :

ರಾಮನಗರ: ಗ್ರಾಮ ಪಂಚಾಯ್ತಿ ಚುನಾವಣೆಗೆಂದು ಹೆಚ್ಚುವರಿಯಾಗಿ ಸ್ಥಾಪನೆಯಾಗಿರುವ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಅಧಿಕೃತವಾಗಿ ಸಿಗುತ್ತಿಲ್ಲ. ನಾಮಪತ್ರ ಸಲ್ಲಿಕೆ ಗೊಂದಲದ ಗೂಡಾಗಿದೆ. ಹೀಗಾಗಿ ಡಿ.11ರಂದು ನಾಮಪತ್ರ ಸಲ್ಲಿಕೆಯ ಸಮಯ ವನ್ನು 5 ಗಂಟೆಯವರೆಗೆ ವಿಸ್ತರಿಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಗಾಣಕಲ್‌ ನಟರಾಜು ಅವರು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸಮಸ್ಯೆ ಏನು?: ವಿಧಾನಸಭೆ ಚುನಾವಣೆ ಯಲ್ಲಿ ಇದ್ದ ಮತದಾರರ ಪಟ್ಟಿಗೂ, ಗ್ರಾಮ ಪಂಚಾಯ್ತಿ ಚುನವಣೆಗೆ ಇರುವ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸವಿದೆ.ಕಾರಣಮತಗಟ್ಟೆಗಳು ವಿಭಾಗವಾಗಿವೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ, ಸೂಚಕರ ಕ್ರಮ ಸಂಖ್ಯೆಗಳು, ಭಾಗದ ಸಂಖ್ಯೆ ಗಳು ವ್ಯತ್ಯಾಸವಾಗಿವೆ. ಉದಾಹರಣೆಗೆ ಬನ್ನಿ ಕುಪ್ಪೆ (ಬಿ) ಗ್ರಾಮಪಂಚಾಯ್ತಿ ವ್ಯಾಪ್ತಿಯ ಬನ್ನಿ ಕುಪ್ಪೆ (ಬಿ), ಬಸವನಪುರ ಮತ್ತುಮುತ್ತುರಾಯನಪುರ ಸೇರಿ ಒಂದು ಕ್ಷೇತ್ರವಾಗಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಇಲ್ಲಿ ಪ್ರತ್ಯೇಕ ಮತಪಟ್ಟಿ ಸೃಜಿಸಲಾಗಿದೆ. ಹಳೆ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆಗಳಿಗೂ, ಹೊಸ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆಗಳಿಗೂ ವ್ಯತ್ಯಾಸವಿದೆ. ಆದರೆ, ಪಂಚಾಯ್ತಿಗಳಲ್ಲಿ ಹೊಸ ಮತಪಟ್ಟಿ ಸಿಗುತ್ತಿಲ್ಲ. ಹಳೆ ಸಂಖ್ಯೆಯನ್ನೇ ನಮೂದಿಸಿ ನಾಮಪತ್ರ ಸಲ್ಲಿಸಿದರೆ, ಅದು ತಿರಸ್ಕೃತವಾಗುವ ಸಂಭವವಿದೆ. ಹೊಸ ಸಂಖ್ಯೆ ನಮೂದಿಸಲುಅಧಿಕೃತ ಮತಪಟ್ಟಿ ತಹಶೀಲ್ದಾರರ ಕಚೇರಿಯಲ್ಲೂ ಲಭ್ಯ ವಾಗುತ್ತಿಲ್ಲ ಎಂದು ಗಾಣಕಲ್‌ ನಟರಾಜು ದೂರಿದ್ದಾರೆ.

ಸಮಯ ವಿಸ್ತರಿಸಿ: ಈ ಸಂಬಂಧ ಅವರು ತಹ ಶೀಲ್ದಾರರ ಬಳಿ ಚರ್ಚಿಸಿದಾಗ ಕ್ರಮ ಸಂಖ್ಯೆ ವ್ಯತ್ಯಾಸವನ್ನು ಪರಿಶೀಲನೆ ವೇಳೆ ಪರಿಗಣಿಸುವುದಾಗಿ ಬಾಯಿ ಮಾತಿನಲ್ಲಿ ಹೇಳುತ್ತಾರೆ ಹೊರತು ಲಿಖಿತವಾಗಿ ಕೊಡುತ್ತಿಲ್ಲ. ಹೊಸ ಪಟ್ಟಿ ಇಂಗ್ಲಿಷಿನಲ್ಲಿದೆ, ಶುಕ್ರವಾರ ಕೊಡ್ತೀವಿ ಅಂತಾರೆ. ನಾಮ ಪತ್ರ ಸಲ್ಲಿಸಲು ಕೊನೆ ದಿನ ಇವರು ಪಟ್ಟಿಕೊಡೋದು ಯಾವಾಗ, ನಾಮಪತ್ರ ಸಲ್ಲಿಸೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಹೀಗಾಗಿ ನಾಮಪತ್ರ ಸಲ್ಲಿಕೆಯ ಸಮಯವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. ಎರಡು ಮೂಲ ಪ್ರತಿ ತರುವುದು ಎಲ್ಲಿಂದ?: ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ತಲಾ ಮೂರು ಪ್ರತಿಗಳನ್ನು ಸಲ್ಲಿಸಬೇಕು. ಇಷ್ಟೂ ದಿನ 1 ಮೂಲ ಮತ್ತು ಎರಡು ಛಾಯಾ ಪ್ರತಿಗಳನ್ನುಕೊಟ್ಟರೆ ಸಾಕಾಗುತ್ತಿತ್ತು. ಈಗ ಎರಡು ಮೂಲ ಮತ್ತು 1 ಛಾಯಾ ಪ್ರತಿ ಕೊಡಬೇಕು ಎಂಬ ನಿಯಮವನ್ನು ಚುನಾವಣಾಧಿಕಾರಿಗಳು ಜಾರಿ ಮಾಡಿದ್ದಾರೆ. ಕಂದಾಯ ಪಾವತಿ ದೃಢೀಕರಣ, ಶೌಚಾಲಯ ದೃಢೀಕರಣ ಇತ್ಯಾದಿ ದಾಖಲೆಗಳನ್ನು ಎರಡೆರೆಡು ಮೂಲ ಪ್ರತಿಗಳನ್ನು ತರುವುದು ಎಲ್ಲಿಂದ ಎಂದು ಪ್ರಶ್ನಿಸಿದ್ದಾರೆ. ಜಾತಿಪ್ರಮಾಣ ಪತ್ರಕ್ಕೆ ಅಭ್ಯರ್ಥಿಗಳು ಅಲೆದು ಸಾಕಾಗುತ್ತಿದೆ. ದಾಖಲೆ ಪಡೆಯಲು ಪ್ರತಿ ಆಕಾಂಕ್ಷಿಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆಎಂದು ಗಾಣಕಲ್‌ ನಟರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾಧಿಕಾರಿಗಳು ಈ ಎಲ್ಲಾ ಸಮಸ್ಯೆಯನ್ನು ಪರಿಗಣಿಸಿ ಸಮಯ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.