ನವೆಂಬರ್ ತಿಂಗಳು ವಾಹನ ಚಾಲಕರ ಪಾಲಿಗೆ ಹಬ್ಬ
Team Udayavani, Nov 3, 2019, 4:57 PM IST
ಕನಕಪುರ: ನವೆಂಬರ್ ತಿಂಗಳು ವಾಹನ ಚಾಲಕರ ಪಾಲಿಕೆ ಹಬ್ಬವಿದ್ದಂತೆ. ರಾಜ್ಯಾದ್ಯಂತ ಸರಕು ಸಾಗಣೆ, ಖಾಸಗಿ ಮತ್ತು ಸರ್ಕಾರಿ ಬಸ್, ಆಟೋ ಸೇರಿದಂತೆ ಎಲ್ಲಾ ಚಾಲಕರು ನವೆಂಬರ್ ತಿಂಗಳನ್ನು ಹಬ್ಬದಂತೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಾರೆ.
ನಗರದ ಮೇಗಳ ಬೀದಿಯ ಆರ್ ಇಎಸ್ಶಿಕ್ಷಣ ಸಂಸ್ಥೆಯ ಸ್ಥಾಪಕ ಎಸ್. ಕರಿಯಪ್ಪ ಆಟೋ ಚಾಲಕರ ಸಂಘದ ವತಿಯಿಂದ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿದ್ದು, ಈ ವರ್ಷವು ಸಹ ಅರ್ಥಪೂರ್ಣವಾಗಿ ಕರ್ನಾಟಕರಾಜೋತ್ಸವವನ್ನು ಆಚರಿಸಿದರು. ಕರ್ನಾಟಕ ರಾಜ್ಯೋತ್ಸವದಲ್ಲಿ ಶಾಲಾ ಮಕ್ಕಳಿಂದ ಧ್ವಜಾರೋಹಣ ಮಾಡಿಸುವುದರ ಮೂಲಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿ, ಅನ್ನದಾನ ಮಾಡಿ ಕನ್ನಡದ ಮೇಲಿನ ಅಭಿಮಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾಗಣ್ಣ, ಉಪಾಧ್ಯಕ್ಷ ಮುತ್ತುರಾಜು, ಖಜಾಂಚಿ ರಘು, ಉಮೇಶ್, ರಮೇಶ್, ಕಾಂತ, ನಾಗೇಶ್, ಮುತ್ತಣ್ಣ, ಗೋಪಾಲ ಸೇರಿದಂತೆ ಅನೇಕ ಚಾಲಕರು ಪಾಲ್ಗೊಂಡಿದ್ದರು.