ಸಿದ್ಧಪಡಿಸಿದ ಆಹಾರ, ದಿನಸಿ ಮನೆ ಬಾಗಿಲಿಗೆ
Team Udayavani, Jul 26, 2020, 7:53 AM IST
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಹೋಟೆಲ್, ಬೇಕರಿಗಳಲ್ಲಿ ಸಿದ್ಧಪಡಿಸಿದ ಆಹಾರವನ್ನು ನಾಗರಿಕರ ಮನೆಬಾಗಿಲಿಗೆ ತಲುಪಿಸುವ ಆನ್ಲೈನ್ ಸೇವೆ ಫುಡ್ ಮಾರ್ಲಿನ್ ಆ್ಯಂಡ್ರಾಯಿಡ್ ಮೊಬೈಲ್ ಆ್ಯಪ್ಗೆ ಜಿಪಂ ಸಿಇಒ ಇಕ್ರಂ ಚಾಲನೆ ನೀಡಿ, ಆ್ಯಪ್ನ ಕಾರ್ಯನಿರ್ವಹಣೆ, ಡೆಲಿವರಿ ಸೇವೆ ಇತ್ಯಾದಿ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಜಿಲ್ಲಾ ಕೇಂದ್ರ ರಾಮ ನಗರದಲ್ಲಿ ಇಂತಹ ಸೇವೆ ಅಗತ್ಯವಿತ್ತು ಎಂದರು.
ಇದೀಗ ಕೋವಿಡ್ 19 ಸೋಂಕು ಇರುವ ಕಾರಣ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು, ಸರ್ಕಾರ, ಜಿಲ್ಲಾಡಳಿತ ವಿಧಿಸಿರುವ ನೀತಿ-ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಅತ್ಯಂತ ಎಚ್ಚರಿಕೆಯಿಂದ ಮನೆ ಬಾಗಿಲಿಗೆ ಸೇವೆ ತಲುಪಿಸಿ ಎಂದು ಫುಡ್ ಮಾರ್ಲಿನ್ ತಂಡಕ್ಕೆ ಸಲಹೆ ನೀಡಿದರು. ಫುಡ್ ಮಾರ್ಲಿನ್ ಸಂಸ್ಥೆಯ ಸಿಇಒ ಮಹೀಂದ್ರ ಕುಮಾರ್, ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಮೊಬೈಲ್ಗೆ ಇಳಿಸಿಕೊಂಡು ಹೆಸರು, ವಿಳಾಸ, ಫೋನ್ ನಂಬರ್ ದಾಖಲಿಸಿ ನೋಂದಾಯಿಸಿಕೊಳ್ಳಬಹುದು ಎಂದರು.
ಸದ್ಯ ಜಿಲ್ಲಾ ಕೇಂದ್ರದಲ್ಲಿ ಈ ಸೇವೆ ಲಭ್ಯವಾಗಲಿದೆ. ಇಲ್ಲಿನ ಪ್ರಮುಖ ಹೋಟೆಲ್, ಬೇಕರಿಗಳ ತಿಂಡಿ, ತಿನಿಸು ಜೊತೆಗೆ ದಿನಸಿ ಪದಾರ್ಥ, ಔಷಧಗಳನ್ನೂ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದೆ ಎಂದರು. ಗ್ರಾಹಕರು ಈ ಸೇವೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ದೂ. 6364355577ಕ್ಕೆ ಕರೆ ಮಾಡಬಹುದು. ಈ ಸೇವೆ ಬೆಳಗ್ಗೆ 7 ರಿಂದ ರಾತ್ರಿ 9ಗಂಟೆವರೆಗೆ ಹಾಗೂ ರಾಮನಗರ ವಾಸಿಗಳಿಗೆ ಮಾತ್ರ ಲಭ್ಯವಿದೆ ಎಂದು ವಿವರಿಸಿದರು.
ಆ್ಯಪ್ ಬಿಡುಗಡೆ ವೇಳೆ ಯಲ್ಲೋ ಅಂಡ್ ರೆಡ್ ಸರ್ವೀಸ್ ಪ್ರೈಲಿ.ನ ಅಮಿತ್ ರಾಜ್, ಎಚ್.ವಿನಯ್, ಎನ್.ವೈ.ಅಭಿಷೇಕ್, ಸಿ.ಹೇಮಂತ್, ಸಿ.ಶ್ವೇತಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ