ರಾಮನಗರ: ಹೈದರಾಬಾದ್ ನಿಂದ ಆಗಮಿಸಿದ್ದ ಕೂಲಿಕಾರ್ಮಿಕರಿಗೆ ಜ್ವರ ಹಿನ್ನಲೆ ಆಸ್ಪತ್ರೆಗೆ ದಾಖಲು
Team Udayavani, Mar 29, 2020, 12:36 PM IST
ರಾಮನಗರ: ಜಿಲ್ಲೆಯ ಮಾಗಡಿ ತಾಲೂಕು ಕೆಂಪಸಾಗರ ಬಳಿ ಹೈದರಾಬಾದ್ ನಿಂದ ಹಿಂದಿರುಗಿದ ಸುಮಾರು ಹತ್ತು ಮಂದಿ ಕೂಲಿ ಕಾರ್ಮಿಕರು ಪೈಕಿ ಮೂವರಿಗೆ ಜ್ವರ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹತ್ತು ಮಂದಿ ಅನುಮಾನವಾಗಿ ಓಡಾಡಿಕೊಂಡಿದ್ದನ್ನು ಗಮನಿಸಿದ ಗ್ರಾಮಸ್ಥರು ಮತ್ತು ಸಾತನೂರು ತಾಲೂಕು ಪಂಚಾಯತ್ ಸದಸ್ಯೆ ಸುಮಾ ರಮೇಶ್, ಸಾತನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೂರ್ತಿ ಆರೋಗ್ಯ ಇಲಾಖೆ ಮತ್ತು ಪೊಲೀಸರ ಗಮನ ಸೆಳೆದಿದ್ದಾರೆ.
ಥರ್ಮಲ್ ಸ್ಕ್ಯಾನರ್ ನಲ್ಲಿ ಮೂರು ಮಂದಿಗೆ ಜ್ವರ ಇರುವುದು ಪತ್ತೆಯಾಗಿದೆ. ಮೂರು ಜನರನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈಗೆ ಕ್ವಾರಂಟೈನ್ ಮುದ್ರಿಕೆ ಹಾಕಲಾಗಿದೆ.