ರಾಮನಗರ: ಚಿತ್ರಮಂದಿರ ತೆರವು ವಿಳಂಬ

ಬೇಡಿಕೆ ಈಡೇರಿಕೆಗೆ ಚಿತ್ರಮಂದಿರ ಮಾಲೀಕರ ಒತ್ತಾಯ| ಅ.15ರಿಂದ ಜಿಲ್ಲೆಯಲ್ಲಿ ಚಿತ್ರ ಮಂದಿರ ಆರಂಭ ಇಲ್ಲ

Team Udayavani, Oct 14, 2020, 2:05 PM IST

rn-tdy-2

ರಾಮನಗರ: ನಾಳೆ ಗುರುವಾರದಿಂದ ಜಿಲ್ಲೆಯಲ್ಲಿ ಚಿತ್ರ ಮಂದಿರಗಳು ತೆರೆಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಾರಣಚಿತ್ರ ಮಂದಿರ ಮಾಲೀಕರು ತಮ್ಮ ಕೆಲವು ಬೇಡಿಕೆಗಳು ಈಡೇರುವರೆಗೂ ಚಿತ್ರ ಮಂದಿರ ತೆರೆಯುವುದು ವಿಳಂಬವಾಗಲಿದೆ ಎಂದಿದ್ದಾರೆ.

ಸರ್ಕಾರದ ಕೆಲವು ನಿಯಮಗಳು ಹಾಗೂ ನಿರ್ಮಾಪಕರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿರುವುದರಿಂದ ಚಿತ್ರ ಪ್ರದರ್ಶನಉದ್ಯಮ ಲಾಭಶೂನ್ಯವಾಗುತ್ತಿದೆ. ಹೀಗಾಗಿ ಚಿತ್ರ ಪ್ರದರ್ಶನ ಉದ್ಯಮದ ಉಳಿವಿಗಾಗಿ ಸರ್ಕಾರದ ಮತ್ತು ಚಿತ್ರ ನಿರ್ಮಾಪಕರ ಗಮನ ಸೆಳೆಯಲು ಅ.15ರಿಂದಲೇ ಚಿತ್ರ ಪ್ರದರ್ಶನಗಳ ಆರಂಭ ವಿಳಂಬವಾಗಬಹುದು ಎಂದು ಮಾಲೀಕರು ತಿಳಿಸಿದ್ದಾರೆ.

ನಿರ್ಮಾಪಕರೊಂದಿಗಿನ ಘರ್ಷಣೆಯೇ ವಿಳಂಬಕ್ಕೆ ಕಾರಣ!: ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಚಿತ್ರ ಮಂದಿರಗಳ ಆರಂಭ ವಿಳಂಬವಾಗಲು ಪ್ರಮುಖ ಕಾರಣ ಪ್ರದರ್ಶಕರು ಮತ್ತುಚಿತ್ರ ನಿರ್ಮಾಕರ ನಡುವಿನ ಸಮಸ್ಯೆಗಳುಎಂದು ಹೇಳಲಾಗಿದೆ. ಡಾ.ರಾಜ್‌ ಕುಮಾರ್‌ ಅವರ ಕಾಲದ ಚಿತ್ರಮಂದಿರಗಳಲ್ಲಿ ಸಂಗ್ರಹವಾಗುತ್ತಿದ್ದ ಒಟ್ಟು ಪ್ರದರ್ಶನ ಶುಲ್ಕದಲ್ಲಿ ಚಿತ್ರ ಮಂದಿರಗಳಿಗೆ ಇಂತಿಷ್ಟು ಹಣ ಎಂದು ಕೊಡುತ್ತಿದ್ದರು. ಆದರೆ ಇಂದು ಚಿತ್ರ ಮಂದಿರದಿಂದಲೇ ಇಂತಿಷ್ಟು ಹಣ ಪಡೆದು ಚಿತ್ರ ಕೊಡುತ್ತಿದ್ದಾರೆ. ಚಿತ್ರಕ್ಕೆ ಕೊಟ್ಟ ಹಣ ಇಲ್ಲಿ ವಾಪಸ್‌ ಬರುತ್ತಿಲ್ಲ. ಹೀಗಾಗಿಯೇ ಚಿತ್ರ ಮಂದಿರಗಳು ಬಾಗಿಲು ಮುಚ್ಚುತ್ತಿವೆ ಎಂಬುದು ಪ್ರದರ್ಶಕರ ಸಂಘದ ಪ್ರಮುಖ ಆರೋಪ.

ಪರವಾನಿಗೆ ಶುಲ್ಕಕಡಿಮೆ ಮಾಡಿ: ಚಿತ್ರಮಂದಿರ ಪರವಾನಿಗೆ ಶುಲ್ಕ ಪ್ರತಿ 5 ವರ್ಷಕ್ಕೊಮ್ಮೆ 25 ಸಾವಿರ ರೂ (ವಾರ್ಷಿಕ5ಸಾವಿರ ರೂಗಳಂತೆ) ವಿಧಿಸಲಾಗುತ್ತಿತ್ತು. ಆದರೆ ಇದೀಗ ಪ್ರತಿ ವರ್ಷ 25 ಸಾವಿರ ಪಾವತಿಸಲು ಸರ್ಕಾರ ಒತ್ತಾಯಿಸುತ್ತಿದೆ.ಕಳೆದ5 ವರ್ಷಗಳಿಂದ ಚಿತ್ರ ಮಂದಿರಗಳ ವಹಿವಾಟು ಕುಸಿಯುತ್ತಿದೆ. ಹೀಗಾಗಿ ಈ ಶುಲ್ಕ ದುಬಾರಿಯಾಗಿದೆ. ಮೊದಲಿನ ಶುಲ್ಕವನ್ನೇ ಪಡೆ ಯುವಂತೆ ಸರ್ಕಾರದ ಮೇಲೆ ಪ್ರದರ್ಶಕರು ಒತ್ತಡ ಹೇರಿದ್ದಾರೆ.

ವಿದ್ಯುತ್ದರ ಸಮಸ್ಯೆ: ರಾಜ್ಯದಲ್ಲಿಚಿತ್ರದ್ಯೋಮವನ್ನು ಕೈಗಾರಿಕೆ ಎಂದು ಪರಿಗಣಿಸಲಾಗಿದೆ. ಆದರೆ ವಿದ್ಯುತ್‌ ಶುಲ್ಕ ಮಾತ್ರ ಕಮಶೀರ್ಷಿಯಲ್‌ ದರ ವಿಧಿಸಲಾಗುತ್ತಿದೆ. ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 4 ರೂ. ವಿಧಿಸಲಾಗುತ್ತಿದ್ದು ಇದೇ ದರವನ್ನು ಚಿತ್ರ ಮಂದಿರಗಳಿಂದಲೂ ಪಡೆಯಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಾಗಿದೆ.

ಪಿಪಿಇ ಕಿಟ್ಧರಿಸುವುದರಿಂದ ವಿನಾಯ್ತಿ: ಚಿತ್ರ ಮಂದಿರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಬೇಕು ಎಂಬ ಕೋವಿಡ್‌ ಲಾಕ್‌ಡೌನ್‌ ಎಸ್‌ ಒಪಿ ಹೇಳುತ್ತದೆ. ಪಿಪಿಇ ಕಿಟ್‌ ಧರಿಸಿಕೊಂಡು ಕೆಲಸ ಮಾಡುವುದು ಸಾಧ್ಯವಾಗದ ಮಾತು. ಎಸ್‌ಒಪಿಯ ಎಲ್ಲಾ ನಿಯಮ ಪಾಲಿಸಲು ಸಿದ್ಧ ಆದರೆ ಪಿಪಿಇ ಕಿಟ್‌ ಧರಿಸುವುದರಿಂದವಿನಾಯ್ತಿಕೊಡುವಂತೆಪ್ರದರ್ಶಕರು ಆಗ್ರಹಿಸಿದ್ದಾರೆ.

ಸರ್ವಿಸ್ಚಾರ್ಜ್ಗೆ ಅನುಮತಿ ಕೊಡಿ: ಮಹಾರಾಷ್ಟ, ಗುಜರಾತ್‌, ತಮಿಳುನಾಡು ಮುಂತಾದ ಬಳಕೆದಾರರಶುಲ್ಕ ವಿಧಿಸಲಾಗುತ್ತಿದೆ. ಟಿಕೆಟ್‌ ಮೇಲೆ ಇಂತಿಷ್ಟು ಸರ್ವಿಸ್‌ ಚಾರ್ಜ್‌ಎಂದು ಸಂಗ್ರಹಿಸಲಗುತ್ತಿದೆ.ಥಿಯೇಟರ್‌ಗಳ ನಿರ್ವಹಣೆ ಮತ್ತು ಸೌಲಭ್ಯ ಹೆಚ್ಚಿಸಲು ಈ ಶುಲ್ಕದ ಅಗತ್ಯವಿದೆ. ರಾಜ್ಯದಲ್ಲೂ ಈ ಶುಲ್ಕಕ್ಕೆ ಸರ್ಕಾರ ಅನುಮತಿ ನೀಡಬೇಕು. ಡಿಜಿಟಲ್‌ ಚಾರ್ಜ್‌ಸ್‌ ಪ್ರತಿ ಸಿನಿಮಾಕ್ಕೆ ಪ್ರತಿ ವಾರಕ್ಕೆ10 ಸಾವಿರ ರೂ. ಶುಲ್ಕ ಞವನ್ನು ನಿರ್ಮಾಪಕರೇ ಭರಿಸುವುದುನ್ನು ಮುಂದುವರೆಸಬೇಕು ಎಂಬುದು ಪ್ರದರ್ಶಕರ ಮತ್ತೂಂದು ಬೇಡಿಕೆಯಾಗಿದೆ.

ಈ ಎಲ್ಲಾ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಜಿಲ್ಲೆಯಲ್ಲಿ ಚಿತ್ರ ಪ್ರದರ್ಶನ ಆರಂಭ ತಡವಾಗಲಿದೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದುಕಡಿಮೆಯಾಗಿದೆ. ಪ್ರದರ್ಶನ ಶುಲ್ಕ ಸಂಗ್ರಹಕುಸಿಯುತ್ತಿದೆ. ಆದರೆ ಪ್ರದರ್ಶಕರು ಹಣ ಕೊಟ್ಟರೆ ಮಾತ್ರ ಚಿತ್ರಕೊಡ್ತೀವಿ ಎಂದು ಚಿತ್ರ ನಿರ್ಮಾಕರು ಹೇಳುತ್ತಿದ್ದಾರೆ. ಪ್ರದರ್ಶಕರು ಲಾಭ ಮಾಡಿಕೊಳ್ಳುವುದು ಹಾಗಿರಲಿ, ನಾವುಕೊಟ್ಟ ಹಣ ವಾಪಸ್‌ ಪಡೆಯಲು ಸಹ ಸಾಧ್ಯವಾಗುತ್ತಿಲ್ಲ. ಜಿ.ಸುರೇಂದ್ರನಾಥ, ರಾಮನಗರ ಶ್ರೀರಾಮ ಚಿತ್ರ ಮಂದಿರ ಮಾಲೀಕರು

 

ಬಿ.ವಿ.ಸೂರ್ಯಪ್ರಕಾಶ್

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Getting good response from people in constituency: D.K. Suresh

Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್

1-aaaa

Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.