ರಾಮನಗರ : ಕೆರೆಯಲ್ಲಿ ಮುಳುಗಿ ಹೆಲ್ತ್ ಇನ್ಸ್ಪೆಕ್ಟರ್ ಸಾವು
Team Udayavani, Apr 25, 2019, 4:11 PM IST
ರಾಮನಗರ: ಸ್ನೇಹಿತರೊಂದಿಗೆ ಪಾನಗೋಷ್ಠಿ ಮುಗಿಸಿ ಕೆರೆಯಲ್ಲಿ ಈಜಲು ತೆರಳಿದ್ದ ಆರೋಗ್ಯ ಅಧಿಕಾರಿಯೊಬ್ಬರು ಕಾಲಿಗೆ ಬಳ್ಳಿ ಸಿಲುಕಿ ನೀರು ಪಾಲಾದ ಘಟನೆ ಬುಧವಾರ ಸಂಜೆ ಸಿಂಗ್ರಭೋವಿ ಕೆರೆಯಲ್ಲಿ ನಡೆದಿದೆ.
ಮೃತಪಟ್ಟ ಇನ್ಸ್ಪೆಕ್ಟರ್ 32 ರ ಹರೆಯದ ಶಂಕರ್ ಎನ್ನುವವರಾಗಿದ್ದಾರೆ. ಮಾಗಡಿ ಯ ಬೈಚಾಪುರ ನಿವಾಸಿ ಯಾಗಿದ್ದ ಶಂಕರ್ ಬಿಡದಿ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ನಾಲ್ವರು ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲೆಂದು ತೆರಳಿದ್ದರು ಎಂದು ತಿಳಿದು ಬಂದಿದೆ.
ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೊತೆಯಲ್ಲಿದ್ದ ಮೂವರು ಸ್ನೇಹಿತರನ್ನು ವಶಕ್ಕೆಪಡೆದು ವಿಚಾರಣೆ ನಡೆಸಲಾಗುತ್ತಿದೆ.