ಸರ್ವೆ ವಿಳಂಬ: ಪ್ರತಿಭಟನೆಗೆ ನಿರ್ಧಾರ


Team Udayavani, Feb 27, 2021, 12:17 PM IST

ಸರ್ವೆ ವಿಳಂಬ: ಪ್ರತಿಭಟನೆಗೆ ನಿರ್ಧಾರ

ರಾಮನಗರ: ಸರ್ವೆ ಮಾಡಿಕೊಡ್ತೀವಿ ಅಂತ ರಾಮನಗರ ತಾಲೂಕಿನಲ್ಲಿ 3,413 ಅರ್ಜಿ ಸ್ವೀಕರಿಸಿದ್ದೀರಿ. ಆದರೆ, ಸರ್ವೆ ಮಾಡಲೇ ಇಲ್ಲ ಎಂದು ಸರ್ವೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಾಪಂ ಸದಸ್ಯರು, ಅರ್ಜಿ ವಿಲೇವಾರಿ ತಕ್ಷಣ ಆರಂಭಿಸದಿದ್ದರೆ ಮಾ.5ರಂದು ಸರ್ವೆ ಇಲಾಖೆ ಮುಂಭಾಗ ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ.

ನಗರದ ಮಿನಿ ವಿಧಾನಸೌಧದಲ್ಲಿರುವ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸರ್ವೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಅರ್ಜಿಗಳ ಬಗ್ಗೆ ಸದಸ್ಯ ಗಾಣಕಲ್‌ ನಟರಾಜ್‌ ವಿಷಯ ಪ್ರಸ್ತಾಪಿಸಿದರು. ಶುಲ್ಕ ಅಂತ ರೈತರಿಂದ 40 ಲಕ್ಷ ರೂ. ವಸೂಲಿ ಮಾಡಿದ್ದೀರಿ. ಆದರೆ, ತಿಂಗಳು ಉರುಳುತ್ತಿದ್ದರೂ ಸರ್ವೆ ಕಾರ್ಯ ಮುಗಿಸಿಲ್ಲ. ಮೋಜಿಣಿ ಮುಂತಾದ ದಾಖಲೆ ಇಲ್ಲದೆ, ರೈತರು ತಮ್ಮ ಆಸ್ತಿಗೆ ಇ-ಖಾತೆ ಮಾಡಿಸಿಕೊಳ್ಳಲು ಆಗು ತ್ತಿಲ್ಲ ಎಂದು ಸರ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸರ್ವೆದಾರರ ಮುಷ್ಕರ: ಸಭೆಯಲ್ಲಿ ಹಾಜರಿದ್ದ ಸರ್ವೆ ಇಲಾಖೆ ಅಧಿಕಾರಿ ಬಲರಾಂ ಪ್ರತಿಕ್ರಿಯಿಸಿ, ಪರವಾನಗಿ ಹೊಂದಿರುವ ಸರ್ವೆದಾರರು ಮುಷ್ಕರ ಹೂಡಿರುವುದರಿಂದ ಅರ್ಜಿ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಇಲಾಖೆಯಲ್ಲಿರುವ 24 ಸರ್ವೆ ಅಧಿಕಾರಿಗಳು ಕೆರೆ ಸರ್ವೆ ಇತ್ಯಾದಿ ಕೆಲಸಗಳಿಗೆ ನಿಯೋಜಿತರಾಗಿದ್ದಾರೆ. 8 ಮಂದಿ ಸರ್ವೆ ಅಧಿಕಾರಿಗಳಿಗೆ ಅರ್ಜಿ ವಿಲೇವಾರಿ ವಹಿಸಲಾಗಿದೆ. ತಿಂಗಳಿಗೆ 550 ಅರ್ಜಿಗಳನ್ನು ವಿಲೇ ಮಾಡುವುದಾಗಿ ತಿಳಿಸಿದರು. ಇಲಾಖೆಯ ಆಯುಕ್ತರು ಇ-ಸ್ವತ್ತು ಕೆಲಸಕ್ಕೆ ನಿಯೋಜಿಸುವಂತೆ ತಿಳಿಸಿದರೆ ಮಾಡುತ್ತೇವೆ. ಈ ಬಗ್ಗೆ ತಾಪಂ ಸದಸ್ಯರು ಅವರ ಮೇಲೆ ಒತ್ತಡ ಹೇರಬೇಕು ಎಂದರು.

ಅರ್ಜಿ ಸ್ವೀಕರಿಸುವುದಿಲ್ಲ ಅಂತ ಬೋರ್ಡ್‌ ಹಾಕಿ ಬಿಡಿ: ಇದಕ್ಕೆ ಕುಪಿತರಾದ ಗಾಣಕಲ್‌ ನಟರಾಜ್‌, ರೈತರನ್ನು ವಿನಾಕಾರಣ  ಅಲೆಸುತ್ತಿರುವುದು ನೀವು ತಿಂಗಳಿಗೆ 300, 500 ಅರ್ಜಿ ವಿಲೇವಾರಿ ಅಂದರೆ ಎಲ್ಲಾ ಅರ್ಜಿ ವಿಲೇ ಆಗುವುದು ಇನ್ನು ಒಂದು ವರ್ಷವಾಗುತ್ತೆ. ನಿಮ್ಮ ಹಿರಿಯ ಅಧಿಕಾರಿಗಳಿಗೆ ವಿಷಯದ ಗಂಭೀರತೆಯನ್ನು ವಿವರಿಸಿ ತಿಳಿಸಿ ಕೆಲಸ ಮಾಡಿಸಿ ಕೊಡಿ, ಇಲ್ಲವೆ ಎಲ್ಲ 3,413 ಅರ್ಜಿಗಳು ವಿಲೇ ಆಗುವವರೆಗೂ ಮೋಜಿಣಿ ಮತ್ತು 11 ಇ-ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಇಲಾಖೆಯಲ್ಲಿ ಫ‌ಲಕ ಪ್ರದರ್ಶಿಸಿ ಎಂದು ಖಾರವಾಗಿ ಪ್ರತಿಕ್ರಯಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಪ್ರಕಾಶ್‌ ಇಲಾಖೆಗೆ ಬೀಗ ಜಡಿದು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿಗಳಿಗೆ ಜಮಖಾನ, ಚೇರು, ಬೆಡ್‌ಶೀಟ್‌ ವಿತರಣೆ ಮಾಡಿ ಅಂತ ಸದಸ್ಯರು ಸಿಡಿಪಿಒಗೆ ಸದಸ್ಯರು ಸೂಚನೆ ಕೊಟ್ಟರು, ಕೃಷಿ, ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಪ್ರಗತಿಯ ಬಗ್ಗೆ ಚರ್ಚೆಗಳು ನಡೆದವು. ತಾಪಂ ಉಪಾಧ್ಯಕ್ಷೆ ರಮಾಮಣಿ, ತಾಪಂ ಇಒ ಶಿವಕುಮಾರ್‌ ಹಾಜರಿದ್ದರು.

ಗ್ರಾಮಗಳು ಬಂದ್‌ ಆಚರಿಸಬೇಕೆ? :

ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯ್ತಿ ಅಧ್ಯಕ್ಷ ಎಸ್‌.ಪಿ.ಜಗದೀಶ್‌ ಮಾತನಾಡಿ, ಇ-ಖಾತಾ ವಿಳಂಬದಿಂದ ಇತ್ತೀಚೆಗೆ ನಗರಸಭೆಯ ವಿರುದ್ಧ ಜನ ರಾಮನಗರ ಬಂದ್‌ ಆಚರಿಸಿದ್ದರು. ಗ್ರಾಮ, ಹೋಬಳಿ ಮಟ್ಟದಲ್ಲೂ ಬಂದ್‌ ಆಚರಿಸಬೇಕೆ ಎಂದು ಸರ್ವೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ನಿಮ್ಮಿಂದ ವಸತಿ ಯೋಜನೆ ವಿಫ‌ಲ :

ಸರ್ವೆದಾರರ ಕೊರತೆ ಇದ್ದರೆ ಮೇಲಾಧಿಕಾರಿಗಳಿಗೆ ತಿಳಿಸಿ ಕೆಲಸ ಮಾಡಿಸಿಕೊಡಬೇಕಾದ್ದು ಇಲಾಖೆ ಕರ್ತವ್ಯ. ಸರ್ವೆ ಇಲ್ಲದ ಕಾರಣ ಅನೇಕ ಕುಟುಂಬ ಮನೆ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಮೋಜಿಣಿ ಇಲ್ಲದೆ ವಸತಿ ಯೋಜನೆಯಡಿ ಮಂಜೂರಾಗಿದ್ದ ಅನೇಕ ಕುಟುಂಬಗಳ ಅನುದಾನ ವಾಪಸ್‌ ಹೋಗಿದೆ. ನಿಮ್ಮಿಂದ ಜಿಲ್ಲೆಯಲ್ಲಿ ವಸತಿ ಯೋಜನೆಗಳು ವಿಫ‌ಲವಾಗು¤ದೆ ಎಂದು ತಾಪಂ ಸದಸ್ಯ ಲಕ್ಷ್ಮೀಕಾಂತ ದೂರಿದರು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.