ತಾಪಂ ಇರಲಿ, ಗ್ರಾಪಂಗೆ ಮಾರ್ಗದರ್ಶಕವಾಗಲಿ
Team Udayavani, Jan 22, 2021, 1:39 PM IST
ರಾಮನಗರ: ತಾಲೂಕು ಪಂಚಾಯ್ತಿಗಳ ಅಸ್ತಿತ್ವ ಮುಂದುವರಿಯಬೇಕು ಎಂಬ ಸಾರ್ವರ್ತಿಕ ಅಭಿ ಪ್ರಾಯ ಜಿಲ್ಲೆಯಲ್ಲಿ ವ್ಯಕ್ತವಾಗಿದೆ. ಗ್ರಾಪಂಗಳಿಗೆ ಮಾರ್ಗದರ್ಶಕ ಸಂಸ್ಥೆಯನ್ನಾಗಿ ತಾಪಂಗಳನ್ನು ಬಲವ ರ್ಧನೆಗೊಳಿಸಬೇಕು ಎಂಬ ಕೂಗು ಕೇಳಿ ಬಂದಿದೆ. ತಾಪಂ ವ್ಯವಸ್ಥೆಯನ್ನೇ ರದ್ದುಗೊಳಿಸುವ ವಿಚಾರ ಹೊಸ ವಿಷಯವೇನಲ್ಲ. ಹತ್ತಾರು ವರ್ಷದಿಂದ ಈ ವಿಷಯ ಚಾಲ್ತಿಯಲ್ಲಿದೆ. ಸಚಿವ ಗೋವಿಂದ ಕಾರಜೋಳ ಇತ್ತೀಚೆಗೆ ತಾಪಂ ವ್ಯವಸ್ಥೆಯನ್ನು ರದ್ದು ಮಾಡುವ ಚಿಂತನೆಯ ಬಗ್ಗೆ ಹೇಳಿಕೆ ನೀಡಿದ್ದು, ಅಸ್ತಿತ್ವದ ವಿಚಾರ ಮತ್ತೂಮ್ಮೆ ಪುಟಿದಿದೆ ಎಂದು ಸದಸ್ಯರು ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ಬಲ ತುಂಬಬೇಕು: ತಾಪಂ ಬೇಕೇ? ಬೇಡವೇ? ಎಂದು ಪತ್ರಿಕೆ ತಾಪಂ ಹಾಲಿ ಮತ್ತು ಮಾಜಿ ಅಧ್ಯಕ್ಷರು ಸದಸ್ಯರನ್ನು ಸಂಪರ್ಕಿಸಿದಾಗ, ತಾಪಂ ವ್ಯವಸ್ಥೆ ಇರಬೇಕು ಎಂದವರೇ ಹೆಚ್ಚು!. ಸದಸ್ಯರಿಗೆ ಅನುದಾನ ಮಾತ್ರವಲ್ಲದೆ, ಗ್ರಾಪಂಗಳಲ್ಲಿ ಸಮರ್ಥ ನಿರ್ವಹಣೆಯ ವಿಚಾರದಲ್ಲಿ ತಾಪಂಗಳಿಗೆ ಇನ್ನಷ್ಟು ಬಲ ತುಂಬಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.
ಗ್ರಾಪಂಗಳಿಗೆ ಮಾರ್ಗದರ್ಶಕ ಸಂಸ್ಥೆಯಾಗಲಿ: ರಾಮನಗರ ತಾಪಂ ಅಧ್ಯಕ್ಷ ಭದ್ರಯ್ಯ ಪ್ರತಿಕ್ರಿಯಿಸಿ, ಕಂದಾಯ ವಿಚಾರಗಳಲ್ಲಿ ಕಾನೂನು, ನಿಯಮಗಳನ್ನು ತಿಳಿದುಕೊಂಡಿರುವ ಅನೇಕರು ಇದ್ದಾರೆ. ಉದಾಹರಣೆಗೆ ಭೂಮಿ ಖಾತೆ ಮಾಡಿ ಕೊಡುವ ವಿಚಾರದಲ್ಲಿ ಗ್ರಾಪಂಗಳು ಎಡವಿರುವ ಅನೇಕ ಪ್ರಸಂಗಗಳಿವೆ. ಇಂತಹ ಪ್ರಸಂಗಗಳನ್ನು ತಾಪಂನಲ್ಲಿ ತಿದ್ದಿ, ಸರಿ ಮಾಡಿರುವ ಉದಾಹರಣೆಗಳು ಇವೆ. ಹೀಗಾಗಿ ತಾಪಂಗಳನ್ನು ಮಾರ್ಗದರ್ಶಕ ಸಂಸ್ಥೆಯನ್ನಾಗಿ ರೂಪಿಸಬೇಕು ಎಂದು ಭದ್ರಯ್ಯ ಅಭಿಪ್ರಾಯ ಪಟ್ಟಿದ್ದಾರೆ. ತಾಪಂಗೆ ಅನುದಾನ ಹೆಚ್ಚಳ ಬೇಡಿಕೆ ಸಮಂಜಸ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ:ಗುಂಡಿಗೆ ಇದ್ದರೇ ಈ ಗುಂಡಿ ರಸ್ತೆಗೆ ಬನ್ನಿ
ಅನುದಾನ ಕೊಟ್ಟು ತಾಪಂ ಉಳಿಸಿ
ಗ್ರಾಪಂಗಳಿಗೆ ಬರುವ ಅನುದಾನವೂ ತಾಪಂಗಳಿಗೆಬರದಿದ್ದರೆ, ಚುನಾಯಿತ ಪ್ರತಿನಿಧಿಗಳು ತಮ್ಮ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡುವು ದಾದರೂ ಹೇಗೆ? ತಾಪಂ ಅಧ್ಯಕ್ಷರಾಗಿದ್ದರೂ ಸಹ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಕನಕಪುರ ತಾಪಂ ಅಧ್ಯಕ್ಷ ನಾಗು ಬೇಸರ ವ್ಯಕ್ತಪಡಿ ಸಿದರು.
ಪತ್ರಿಕೆಗೆ ಪ್ರತಿಕ್ರಿಯಿಸಿದ ಅವರು, ಅಲ್ಪ ಅನುದಾನ ಯಾವುದಕ್ಕೂ ಸಾಲದು. ಕನಕಪುರ ದೊಡ್ಡ ತಾಲೂಕು, ಹೀಗಾಗಿ ಬರುತ್ತಿರುವ ಅನುದಾನವನ್ನು ಹಂಚಿಕೆ ಮಾಡುವುದೇ ದೊಡ್ಡ ಸವಾಲಾಗಿದೆ. ಗ್ರಾಪಂಗಳಿಗೆ ಕೋಟ್ಯಂತರ ರೂ. ಅನುದಾನ ಹರಿದು ಬರುವುದರಿಂದ ಸ್ಥಳೀಯ ಸಂಸ್ಥೆಯಿಂದಲೇ ಸಾಕಷ್ಟು ಗ್ರಾಮಾಭಿವೃದ್ಧಿ ಕಾರ್ಯ ಮಾಡಬಹುದು. ಗ್ರಾಪಂ ಸದಸ್ಯನಿಗಿರುವ ಗೌರವ ಹತ್ತಾರು ಗ್ರಾಮಗಳ ಮತದಾರರರಿಂದ ಆಯ್ಕೆಯಾಗಿ ಬರುವ ತಾಪಂ ಸದಸ್ಯರಿಗಿಲ್ಲ ದಂತಾಗಿದೆ. ಅನುದಾನ ಕೊಟ್ಟು ತಾಪಂ ವ್ಯವಸ್ಥೆ ಉಳಿಸಿಕೊಳ್ಳಬೇಕು.
ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ