ಶಾಶ್ವತ ನೀರಿನ ವ್ಯವಸ್ಥೆಗೆ ಕಾಲಾವಕಾಶ ಬೇಕು
Team Udayavani, Feb 11, 2019, 7:23 AM IST
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಸಾಕಾರವಾಗಲು ಇನ್ನೂ 2 ವರ್ಷ ಕಾಲಾವಕಾಶ ಬೇಕಾಗಿದೆ ಎಂದು ಶಾಸಕಿ ಅನಿತಾ ಹೇಳಿದರು.
ತಾಲೂಕಿನ ಕೈಲಾಂಚ ಹೋಬಳಿಯ ಗೌಡಯ್ಯನದೊಡ್ಡಿಯಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ 2 ಕೋಟಿ ರೂ. ವೆಚ್ಚದ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಬದ್ಧವಾಗಿದೆ ಎಂದರು.
ನೀರು ಪೂರೈಕೆಗೆ ಸೂಚನೆ: ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜಿಗೆ ಅಗತ್ಯವಿದ್ದಲ್ಲಿ ಟ್ಯಾಂಕರ್ಗಳಲ್ಲಿ ನೀರು ಪೂರೈಸುವಂತೆ ತಾವು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಳವೆ ಬಾವಿಗಳಿಗೆ ಮೋಟಾರ್ ಅಳವಡಿಕೆ ಮುಂತಾದ ವ್ಯವಸ್ಥೆಗಾಗಿ ಸರ್ಕಾರದಿಂದ ತಾವು 1 ಕೋಟಿ ರೂ., ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ. ಕನಕಪುರ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.
ವೇತನದ ಅರ್ಜಿ ಸಲ್ಲಿಕೆಗೆ ಅಲೆದಾಟ: ಈ ವೇಳೆ ರೈತ ಪುಟ್ಟೇಗೌಡ ಮಾತನಾಡಿ, ತಾಲೂಕಿನಾದ್ಯಂತ ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಹಾಕಲು ತಾಲೂಕು ಕಚೇರಿಗೆ ಅಲೆದಾಡುವಂತಾಗಿದೆ. ದಯಮಾಡಿ 60 ವರ್ಷ ಮೇಲ್ಪಟ್ಟಿರುವ ಎಲ್ಲರಿಗೂ ವೃದ್ಯಾಪ್ಯ ವೇತನ ಮಂಜೂರಾತಿ ಆದೇಶ ಪತ್ರ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ನೀವು ಸೂಚನೆ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಹೋಬಳಿ ಕೇಂದ್ರಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಂತರ್ಜಲ ವೃದ್ಧಿಗೆ ಚೆಕ್ಡ್ಯಾಂ ನಿರ್ಮಾಣ: ಸಣ್ಣ ನೀರಾವರಿ ಇಲಾಖೆ ಎಇಇ ಮಹೇಶ್ ಮಾತನಾಡಿ, ಕೈಲಾಂಚ ಹೋಬಳಿ ಗೌಡಯ್ಯನದೊಡ್ಡಿಯಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಚೆಕ್ಡ್ಯಾಂ ಕಂ ಬಾರಾಜ್ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. 2 ಕೋಟಿ ರೂ. ವೆಚ್ಚದ ಈ ಚೆಕ್ಡ್ಯಾಂ ಅನ್ನು ಸಣ್ಣ ನೀರಾವರಿ ಇಲಾಖೆಯ ಅಂತರ್ಜಲ ವೃದ್ಧಿಸುವ ಯೋಜನೆಯ ಮೂಲಕ ನಿರ್ಮಿಸಲಾಗುತ್ತಿದೆ. 60 ಮೀಟರ್ ಅಗಲ, 3 ಮೀಟರ್ ಎತ್ತರದ ಈ ಬಾರಾಜ್ ನಿರ್ಮಾಣವಾದ ನಂತರ ನದಿ ಪಾತ್ರದಲ್ಲಿ ಸುಮಾರು 2 ಕಿ.ಮೀವರೆಗೆ ನೀರು ನಿಲ್ಲುತ್ತದೆ. 3 ಮೀಟರ್ ನಂತರ ಹೆಚ್ಚುವರಿ ನೀರು ನದಿ ಪಾತ್ರದಲ್ಲಿ ಹರಿಯುತ್ತದೆ. ಬಾರಾಜ್ ಮೇಲೆ 4 ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಚೆಕ್ಡ್ಯಾಂ ಮೇಲೆ ರಸ್ತೆ ನಿರ್ಮಾಣ: ನದಿ ಪಾತ್ರದಲ್ಲಿ ನೀರು ಹಿಡಿದಿಟ್ಟುಕೊಳ್ಳುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ನದಿ ಪಾತ್ರದಲ್ಲಿ ನೀರು ಶೇಖರಣೆಯ ಆಗುವುದರಿಂದ ಕೃಷಿಗೂ ಉಪಯೋಗವಾಗಲಿದೆ. ಅಲ್ಲದೆ, ಚೆಕ್ಡ್ಯಾಂ ಮೇಲೆ ರಸ್ತೆಯನ್ನು ನಿರ್ಮಿಸುವುದರಿಂದ ರಾಮನಗರ-ಕನಕಪುರ ರಸ್ತೆ ಮತ್ತು ರಾಮನಗರ – ಮುದವಾಡಿ ರಸ್ತೆಗೆ ಸಂಪರ್ಕವನ್ನು ಕಲ್ಪಿಸಿದಂತಾಗುತ್ತದೆ. ಬಾರಾಜ್ ನಿರ್ಮಾಣ ಕಾರ್ಯ ಕನಿಷ್ಠ 1 ವರ್ಷ ಹಿಡಿಯಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಹುಲಿಕೆರೆ-ಕೋಟಹಳ್ಳಿ ಸಂಪರ್ಕ ಸೇತುವೆ ಕಾಮಗಾರಿ ಮತ್ತು ಸಬ್ಬಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಶಂಕುಸ್ಥಾಪನೆ ನೆರವೇರಿಸಿದರು. ಜಿಪಂ ಸದಸ್ಯೆ ಪ್ರಭಾವತಿ ಕೆ.ಶಿವಲಿಂಗಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಶ್ವಥ್, ಕೈಲಾಂಚ ಗ್ರಾಪಂ ಅಧ್ಯಕ್ಷ ಆರ್.ಪಾಂಡುರಂಗ, ಉಪಾಧ್ಯಕ್ಷ ಜಿ.ಪಿ.ಗಿರೀಶ್ವಾಸು, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಮುಖಂಡರಾದ ಎಚ್.ಸಿ.ರಾಜಣ್ಣ, ಜಿ.ಎನ್. ಸತ್ತೀಗೌಡ, ವಡ್ಡರಹಳ್ಳಿ ವೆಂಕಟೇಶ್, ಪುಟ್ಟೇಗೌಡ, ಶಿವರಾಮಯ್ಯ, ಜಿ.ವೆಂಕಟೇಗೌಡ, ಜಯಕುಮಾರ್, ರಾಜಶೇಖರ್ ಹಾಜರಿದ್ದರು.
ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ನಲ್ಲಿ ಎಲ್ಲಾ ಕ್ಷೇತ್ರಗಳಿಗೆಗೂ ಆದ್ಯತೆ ನೀಡಿ ಸಮಗ್ರ ಕರ್ನಾಟಕಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ರಾಮನಗರ ಶಾಸಕಿ ಅನಿತಾ ತಿಳಿಸಿದರು. ತಾಲೂಕಿನ ಬಿಳಗುಂಬ ಗ್ರಾಪಂ ವ್ಯಾಪ್ತಿಯ ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ ಎಸ್ಸಿಪಿ ಯೋಜನೆಯಡಿ 10 ಲಕ್ಷ ರೂ., ವೆಚ್ಚದ ರಸ್ತೆ, ಚರಂಡಿ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ,
ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಜಾರಿಗೆ ಬಜೆಟ್ನಲ್ಲಿ ಹಣ ಕಾಯ್ದಿರಿಸಿದ್ದಾರೆ. ಮಾತೃಶ್ರಿ ಯೋಜನೆಗೂ ಅನುದಾನವನ್ನು ಹೆಚ್ಚಳ ಮಾಡಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿ ಹಣ ಮೀಸಲಿಟ್ಟಿದ್ದಾರೆ. ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆ, ಚುಂಚಶ್ರೀ ಮತ್ತು ಸಿದ್ಧಗಂಗಾಶ್ರೀ ಅವರ ಹುಟ್ಟೂರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ತಲಾ 25 ಕೋಟಿ ಅನುದಾನ ನೀಡಿರುವುದು ಸಂತಸ ತಂದಿದೆ ಎಂದರು.
ವಿರೋಧ ಪಕ್ಷಕ್ಕೆ ಟೀಕಿಸುವುದೇ ಕೆಲಸ: ರಾಜ್ಯದಲ್ಲಿನ ಮೈತ್ರಿ ಸರ್ಕಾರಕ್ಕೆ ಬಿಜೆಪಿ ಪಕ್ಷವೇ ವಿರೋಧ ಪಕ್ಷವಾಗಿರುವುದರಿಂದ ಅವರು ಬಜೆಟ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ಪಕ್ಷ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಮೈತ್ರಿ ಸರ್ಕಾರ ಪೂರ್ಣಾವಧಿಗೆ ಕಾರ್ಯನಿರ್ವಹಿಸಲಿದೆ. ಜೆಡಿಎಸ್ನ ಎಲ್ಲಾ ಶಾಸಕರು ಪಕ್ಷದೊಟ್ಟಿಗೆ ಇದ್ದಾರೆ. ಅವರೆಲ್ಲೂ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲೂ ಯಾವ ಸಮಸ್ಯೆಯೂ ಇಲ್ಲ. ವೈಯಕ್ತಿಕ ಕೆಲಸಗಳ ಮೇಲೆ ನಾಲ್ಕು ಶಾಸಕರು ಹೊರಹೋಗಿದ್ದಾರೆ. ಅವರು ವಾಪಸ್ಸು ಬರುತ್ತಾರೆ ಎಂದು ಹೇಳಿದರು.
ರಸ್ತೆ ಕಾಮಗಾರಿಗೆ ಚಾಲನೆ: ಎಸ್ಸಿಪಿ ಯೋಜನೆಯಡಿ ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ರಸ್ತೆ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕದ ಸುದಪಯೋಗ ಪಡೆಸಿಕೊಳ್ಳಬೇಕು ಎಂದು ನಾಗರಿಕರಿಗೆ ಮನವಿ ಮಾಡಿದರು. ಜೆಡಿಎಸ್ ಕಾರ್ಯಕಾರಿಣಿ ಸದಸ್ಯ ಸಿದ್ದಲಿಂಗೇಗೌಡ, ಜಿಪಂ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ಗ್ರಾಮದ ಮುಖಂಡ ಕೆಂಗಲ್ಲಯ್ಯ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಂಕರ್, ಎಇ ವೀರನಂಜೇಗೌಡ ಹಾಜರಿದ್ದರು.
ರಾಜ್ಯ ಬಜೆಟ್ನಲ್ಲಿ ಎಲ್ಲಾ ಕ್ಷೇತ್ರಕ್ಕೂ ಆದ್ಯತೆ: ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ನಲ್ಲಿ ಎಲ್ಲಾ ಕ್ಷೇತ್ರಗಳಿಗೆಗೂ ಆದ್ಯತೆ ನೀಡಿ ಸಮಗ್ರ ಕರ್ನಾಟಕಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ರಾಮನಗರ ಶಾಸಕಿ ಅನಿತಾ ತಿಳಿಸಿದರು. ತಾಲೂಕಿನ ಬಿಳಗುಂಬ ಗ್ರಾಪಂ ವ್ಯಾಪ್ತಿಯ ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ ಎಸ್ಸಿಪಿ ಯೋಜನೆಯಡಿ 10 ಲಕ್ಷ ರೂ., ವೆಚ್ಚದ ರಸ್ತೆ, ಚರಂಡಿ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ,
ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಜಾರಿಗೆ ಬಜೆಟ್ನಲ್ಲಿ ಹಣ ಕಾಯ್ದಿರಿಸಿದ್ದಾರೆ. ಮಾತೃಶ್ರಿ ಯೋಜನೆಗೂ ಅನುದಾನವನ್ನು ಹೆಚ್ಚಳ ಮಾಡಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿ ಹಣ ಮೀಸಲಿಟ್ಟಿದ್ದಾರೆ. ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆ, ಚುಂಚಶ್ರೀ ಮತ್ತು ಸಿದ್ಧಗಂಗಾಶ್ರೀ ಅವರ ಹುಟ್ಟೂರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ತಲಾ 25 ಕೋಟಿ ಅನುದಾನ ನೀಡಿರುವುದು ಸಂತಸ ತಂದಿದೆ ಎಂದರು.
ವಿರೋಧ ಪಕ್ಷಕ್ಕೆ ಟೀಕಿಸುವುದೇ ಕೆಲಸ: ರಾಜ್ಯದಲ್ಲಿನ ಮೈತ್ರಿ ಸರ್ಕಾರಕ್ಕೆ ಬಿಜೆಪಿ ಪಕ್ಷವೇ ವಿರೋಧ ಪಕ್ಷವಾಗಿರುವುದರಿಂದ ಅವರು ಬಜೆಟ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ಪಕ್ಷ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಮೈತ್ರಿ ಸರ್ಕಾರ ಪೂರ್ಣಾವಧಿಗೆ ಕಾರ್ಯನಿರ್ವಹಿಸಲಿದೆ. ಜೆಡಿಎಸ್ನ ಎಲ್ಲಾ ಶಾಸಕರು ಪಕ್ಷದೊಟ್ಟಿಗೆ ಇದ್ದಾರೆ.
ಅವರೆಲ್ಲೂ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲೂ ಯಾವ ಸಮಸ್ಯೆಯೂ ಇಲ್ಲ. ವೈಯಕ್ತಿಕ ಕೆಲಸಗಳ ಮೇಲೆ ನಾಲ್ಕು ಶಾಸಕರು ಹೊರಹೋಗಿದ್ದಾರೆ. ಅವರು ವಾಪಸ್ಸು ಬರುತ್ತಾರೆ ಎಂದು ಹೇಳಿದರು. ರಸ್ತೆ ಕಾಮಗಾರಿಗೆ ಚಾಲನೆ: ಎಸ್ಸಿಪಿ ಯೋಜನೆಯಡಿ ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ರಸ್ತೆ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕದ ಸುದಪಯೋಗ ಪಡೆಸಿಕೊಳ್ಳಬೇಕು ಎಂದು ನಾಗರಿಕರಿಗೆ ಮನವಿ ಮಾಡಿದರು. ಜೆಡಿಎಸ್ ಕಾರ್ಯಕಾರಿಣಿ ಸದಸ್ಯ ಸಿದ್ದಲಿಂಗೇಗೌಡ, ಜಿಪಂ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ಗ್ರಾಮದ ಮುಖಂಡ ಕೆಂಗಲ್ಲಯ್ಯ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಂಕರ್, ಎಇ ವೀರನಂಜೇಗೌಡ ಹಾಜರಿದ್ದರು.
ಸೇವೆ ಕಾಯಂಗೊಳಿಸಲು ಗುತ್ತಿಗೆ ನೌಕರ ಒತ್ತಾಯ: ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿಸಲು ಆಗಮಿಸಿದ್ದ ಶಾಸಕಿ ಅನಿತಾ ಅವರಿಗೆ ಅರಣ್ಯ ಇಲಾಖೆ ಗುತ್ತಿಗೆ ನೌಕರ ತನ್ನ ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿದರು. 1800 ಜನ ಆಯಾಗಳನ್ನು ಕಾಯಂಗೊಳಿಸಿದ್ದಾರೆ.
ನಾವಿರೋದು 600 ಜನ. ನಮ್ಮನ್ನು ಕಾಯಂ ಮಾಡೋಲ್ಲ ಯಾಕೆ? ನಿಮ್ಮ ಮಾವನವರ ಪರ (ಎಚ್.ಡಿ.ದೇವೇಗೌಡ), ನಿಮ್ಮ ಯಜಮಾನರ (ಎಚ್.ಡಿ.ಕುಮಾರಸ್ವಾಮಿ), ನಿಮ್ಮ ಪರ ಚುನಾವಣೆ ಸಮಯದಲ್ಲಿ ಹಗಲು, ರಾತ್ರಿ ಅನ್ನದೇ ಕೆಲಸ ಮಾಡಿದ್ದೇವೆ. ಆ ಋಣಕ್ಕಾದರೂ ನಮ್ಮ ಕೆಲಸ ಮಾಡಿಕೊಡಿ. ನಿಮ್ಮ ಯಜಮಾನರು ಸಿಎಂ ಆಗಿದ್ದಾರೆ. ನೀವು ನಮ್ಮ ಎಂಎಲ್ಎ. ನಿಮ್ಮನ್ನು ಅಲ್ಲದೆ ಯಾರನ್ನು ಕೇಳಬೇಕು ಎಂದು ಅಲವತ್ತುಕೊಂಡರು.