ಸಹಕಾರ ಸಂಘದ ಕಚೇರಿ ಕಳ್ಳತನ: ಸ್ಥಳೀಯರ ಕೈವಾಡ ಶಂಕೆ
Team Udayavani, Apr 17, 2022, 2:45 PM IST
ಕನಕಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಕಳ್ಳತನವಾಗಿರುವ ಘಟನೆ ಹೇರಿಂದ್ಯಾಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕೋಡಿಹಳ್ಳಿ ಹೋಬ ಳಿಯ ಹೇರೀಂದ್ಯಾಪನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿದ್ದ 1.8 ಲಕ್ಷ ರೂ. ಕಳ್ಳತನವಾಗಿದೆ. ಸಂಘದ ಕಚೇರಿ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿಟ್ಟಿದ ಹಣವನ್ನು ಕದ್ದು ಪರಾರಿಯಾಗಿದ್ದಾರೆ.
ಗುರುವಾರ ಸಂಘದ ಕಾರ್ಯದರ್ಶಿಗೆ ಹೇರಿಂದ್ಯಾಪನಹಳ್ಳಿ ಗ್ರಾಮದ ನಿವಾಸಿ ಶಿವಕಮಾರ ಎಂಬುವರು ದೂರವಾಣಿ ಕರೆ ಮಾಡಿ 94,176-00 ಬೆಳೆಸಾಲ ಪಾವತಿ ಮಾಡುವುದಾಗಿ ಕಚೇರಿಗೆ ಬರುವಂತೆ ಹೇಳಿದ್ದರು. ಕಚೇರಿ ರಜೆ ಇದೆ ನಾಳೆ ಬನ್ನಿ ಎಂದು ಸಂಘದ ಕಾರ್ಯದರ್ಶಿ ಹಣ ಕಟ್ಟಿಸಿಕೊಳ್ಳಲು ನಿರಾಕರಿಸಿದರು ಬಿಡದೆ ರೈತ ಶಿವಕುಮಾರ್ ಬಲವಂತವಾಗಿ ಒತ್ತಡ ಹಾಕಿ ಕಾರ್ಯದರ್ಶಿಯನ್ನು ಕಚೇರಿಗೆ ಕರೆಸಿಕೊಂಡು ಹಣ ಕಟ್ಟಿದ್ದರು.
ಸಂಘಕ್ಕೆ ಪಾವತಿಸಿದ ಬೆಳೆಸಾಲದ ಹಣವನ್ನು ಕೋಡಿಹಳ್ಳಿ ಬಿಡಿಸಿಸಿ ಬ್ಯಾಂಕ್ಗೆ ಕಟ್ಟಬೇಕಿತ್ತು. ಆದರೆ ಅಂದು ಬ್ಯಾಂಕ್ ರಜೆ ಇದ್ದ ಕಾರಣ ಒಟ್ಟು 1.8 ಲಕ್ಷ ರೂ. ಹಣವನ್ನು ಕಚೇರಿಯ ಬೀರುವಿನಲ್ಲಿಡಲಾಗಿತ್ತು. ಆದರೆ ಬೆಳೆ ಸಾಲ ಪಾವತಿ ಮಾಡಿದ ಮರುದಿನವೇ ಅದು ಕಳ್ಳತನವಾಗಿದೆ ಎಂದು ಸಂಘದ ಕಾರ್ಯದರ್ಶಿ ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಜಾ ಇದ್ದರೂ ಕೂಡ ಸಂಘಕ್ಕೆ ಹಣ ಕಟ್ಟಿದ ಮರುದಿನವೇ ಕಚೇರಿಯಲ್ಲಿ ಕಳ್ಳತನ ನಡೆದಿರುವುದು ಆನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಘಟನೆಯಲ್ಲಿ ಸ್ಥಳಿಯರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ ಮಾಹಿತಿ ತಿಳಿದ ಕೋಡಿಹಳ್ಳಿ ಪೊಲೀಸರು ಹಾಗೂ ಬೆರಳಚ್ಚು ಶ್ವಾನದಳ ತಜ್ಞರು ಸ್ಥಳ ಮಹಜರು ಮಾಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್ಡಿಕೆ ಸ್ಪರ್ಧೆ ಸುಳಿವು
Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ ಕಬ್ಬಿಣದ ಕಡಲೆ
Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್ ವಾಗ್ಧಾಳಿ
MUST WATCH
ಹೊಸ ಸೇರ್ಪಡೆ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್