ಹೆದ್ದಾರಿ ದಾಟಲು ಪಾದಚಾರಿಗಳಿಗಿಲ್ಲ ಪರ್ಯಾಯ ಮಾರ್ಗ


Team Udayavani, Apr 1, 2021, 3:25 PM IST

There is no alternative for pedestrians to cross the highway

ಚನ್ನಪಟ್ಟಣ: ಪಟ್ಟಣ ಪ್ರದೇಶದ ಜನನಿಬಿಡ ವೃತ್ತಗಳಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಿಸದ ಕಾರಣ ಪಾದಚಾರಿಗಳು ಭಯದ ನಡುವೆಬೆಂಗಳೂರು – ಮೈಸೂರು ಹೆದ್ದಾರಿ ದಾಟಬೇಕಾದಅನಿವಾರ್ಯತೆ ಎದುರಾಗಿದೆ.ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಆದನಂತರ ಖಾಸಗಿ ಬಸ್‌ ನಿಲ್ದಾಣ, ಮೈಸೂರು ಬ್ಯಾಂಕ್‌ವೃತ್ತದ ಬಳಿ ಹೆದ್ದಾರಿ ದಾಟಲು ಇದ್ದ ರಸ್ತೆಯನ್ನುಮುಚ್ಚಿ ರುವುದರಿಂದ ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವವರಿಗೆಸಮಸ್ಯೆ ಆಗಿದೆ.

ಹೆದ್ದಾರಿ ಪ್ರಾಧಿಕಾರ ಸ್ಕೈವಾಕ್‌ಅಥವಾ ಅಂಡರ್‌ಪಾಸ್‌ ನಿರ್ಮಿಸದೆ ಏಕಾಏಕಿ ರಸ್ತೆವಿಭಜಕದ ಮಧ್ಯೆ ಇದ್ದ ಪಾದಚಾರಿ ಮಾರ್ಗಮುಚ್ಚಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಗಮನ ಹರಿಸುತ್ತಿಲ್ಲ: ಹೆದ್ದಾರಿಯ ಎರಡೂ ಕಡೆಗಳಿಂದ ವಾಹನ ವೇಗವಾಗಿ ಚಲಿಸುತ್ತಲೇ ಇರುತ್ತವೆಎಂಬುದು ತಿಳಿದಿದ್ದರೂ ಪಾದಚಾರಿಗಳು ಅನಿವಾರ್ಯ ವಾಗಿ ಹೆದ್ದಾರಿ ದಾಟಲು ಮುಂದಾಗುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುವಸಾಧ್ಯತೆ ಹೆಚ್ಚಿರುತ್ತದೆ.

ಹೆದ್ದಾರಿ ಪ್ರಾಧಿಕಾರವಾಗಲಿ,ಪೊಲೀಸರಾಗಲಿ ಈ ಬಗ್ಗೆ ಗಮನಹರಿಸುತ್ತಿಲ್ಲ.

ಮೇಲ್ಸೇತುವೆ ಅತ್ಯಗತ್ಯ: ಪಟ್ಟಣದ ಅಂಚೆ ಕಚೇರಿರಸ್ತೆಯಿಂದ ಚರ್ಚ್‌ ರಸ್ತೆಗೆ ಹೋಗಲು ಈ ಹಿಂದೆರಸ್ತೆ ವಿಭಜಕದ ಮಧ್ಯೆ ಇದ್ದ ಮಾರ್ಗ ಅನುಕೂಲಕಲ್ಪಿಸಿತ್ತು. ಪೊಲೀಸರು ಎರಡೂ ಕಡೆಗಳಲ್ಲಿ ದಟ್ಟಣೆನಿಯಂತ್ರಿಸಿ ಪಾದಚಾರಿಗಳ ಓಡಾಟಕ್ಕೆ ಅನುವುಮಾಡಿಕೊಡುತ್ತಿದ್ದರು. ಆದರೆ, ಇತ್ತೀಚೆಗೆ ಆವಿಭಜಕ ಮುಚ್ಚಿದ್ದರಿಂದ ಎರಡೂ ರಸ್ತೆಗಳ ನಡುವಿನ ನೇರ ಸಂಪರ್ಕ ಕಡಿತವಾಗಿದ್ದು, ಎಂದಿನಂತೆಪಾದಚಾರಿಗಳು ಅಪಾಯದ ನಡುವೆಯೇಹೆದ್ದಾರಿ ದಾಟುತ್ತಿದ್ದಾರೆ.

ಅವೈಜ್ಞಾನಿಕ ಕ್ರಮ: ಪಟ್ಟಣ ವ್ಯಾಪ್ತಿಯಲ್ಲಿ ಅದರಲ್ಲೂ ಜನನಿಬಿಡ ಪ್ರದೇಶ ಆಗಿರುವ ಖಾಸಗಿ ಬಸ್‌ನಿಲ್ದಾಣ ವೃತ್ತದಲ್ಲಿ ರಸ್ತೆ ವಿಭಜಕ ಮುಚ್ಚಿರುವ ಕ್ರಮಅವೈಜಾnನಿಕವಾಗಿದ್ದು, ಮೇಲ್ಸೇತುವೆ ನಿರ್ಮಿಸದಿದ್ದರೂ ಸಿಗ್ನಲ್‌ಲೈಟ್‌ ಅಳವಡಿಸಿ ಪಾದಚಾರಿಗಳಿಗೆಅನುಕೂಲ ಮಾಡಿಕೊಡಬೇಕೆನ್ನುವುದು ಸಾರ್ವಜನಿಕರ ಆಗ್ರಹ ವಾಗಿದೆ.ವಿಭಜಕ ಮುಚ್ಚುವ ಮುನ್ನ ಯಾವುದೇಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ, ಮುಂದಿನ ವಿಭಜಕದಲ್ಲಿ ದಾಟಬೇಕೆಂಬ ಎಚ್ಚರಿಕೆ ಫಲಕಗಳನ್ನೂಹಾಕಿಲ್ಲ, ಹೆದ್ದಾರಿ ಪ್ರಾ—ಕಾರಕ್ಕೆ ಪೊಲೀಸರು ಸಂಭವನೀಯ ಅನಹುತಗಳ ಬಗ್ಗೆ ಅರಿವು ಮಾಡಿಕೊಟ್ಟುನಂತರ ಕ್ರಮ ಕೈಗೊಳ್ಳಬೇಕಿತ್ತು. ಏಕಾಏಕಿ ಮುಚ್ಚಿಅವಾಂತರ ಸೃಷ್ಟಿಸಿ, ಅನಾಹು ತಗಳಿಗೆ ಅವರೇಕಾರಣರಾಗುತ್ತಿದ್ದಾರೆಂಬ ಆರೋಪ ದಟ್ಟವಾಗಿದೆ.

ಎಂ.ಶಿವಮಾದು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.