ಲಾಕ್ಡೌನ್ ಮುಗಿಯುವವರೆಗೂ ತರಕಾರಿ ವಿತರಿಸುವೆ: ಶಿವರುದ್ರಮ್ಮ
Team Udayavani, Apr 24, 2020, 6:06 PM IST
ಮಾಗಡಿ: ಕೋವಿಡ್-19 ತಡೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, ವಾರ್ಡ್ನ ಜನತೆಗೆ ಲಾಕ್ಡೌನ್ ಮುಗಿಯುವವರೆಗೆ ತರಕಾರಿ ವಿತರಿಸುತ್ತೇನೆ ಎಂದು ಪುರಸಭಾ ಸದಸ್ಯೆ ಶಿವರುದ್ರಮ್ಮ ವಿಜಯ ಕುಮಾರ್ ಭರವಸೆ ನೀಡಿದರು.
ಪಟ್ಟಣದ 21ನೇ ವಾರ್ಡ್ನ ಬಹುತೇಕ ಮಂದಿ ಒಂದಲ್ಲ ಒಂದು ಅಂಗಡಿಗಳಲ್ಲಿ ವ್ಯಾಪಾರ, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿ ದ್ದರು. ಈಗ ಲಾಕ್ಡೌನ್ ನಿಂದ ಸಂಕಷ್ಟ ಕ್ಕೊಳಗಾಗಿದ್ದಾರೆ. ಜೀವನ ಕಷ್ಟಕರವಾಗಿದೆ. ಪಡಿತರ ಇದ್ದರೆ ಸಾಲದು, ಅಗತ್ಯ ದಿನಸಿ ಪದಾರ್ಥ, ಹಾಲು,ತರಕಾರಿ ನಿತ್ಯ ಬೇಕಿರುತ್ತದೆ. ನಾನು ಮಾಜಿ ಶಾಸಕ ಎಚ್ .ಸಿ.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್, ತಾಲೂಕು ಅಧ್ಯಕ್ಷ ರಂಗ ಧಾಮಯ್ಯ, ಬಿಬಿಎಂಪಿ ಸದಸ್ಯ ವರದ ರಾಜು ಅವರ ಸಹಕಾರದಿಂದ ವಾರ್ಡ್ನ ಜನತೆಗೆ ನೆರವಾಗಿದ್ದೇನೆ ಎಂದು ಹೇಳಿದರು.
ಯುವ ಮುಖಂಡ ವಿಜಯ ಕುಮಾರ್, ಪುರಸಭಾ ಮಾಜಿ ಸದಸ್ಯ ರವಿಶಂಕರ್, ಪ್ರದೀಪ್, ವಿನಯ್, ನಾಗೇಶ್, ವಾರ್ಡ್ ನಾಗರಿಕರು, ಮಹಿಳೆಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು