ಖಾಲಿ ನಿವೇಶನ: ನಿವಾಸಿಗಳಿಗೆ ತಪ್ಪದ ಗೋಳು
Team Udayavani, Nov 25, 2019, 4:30 PM IST
ಚನ್ನಪಟ್ಟಣ: ಮುರಿದು ಬಿದ್ದಿರುವ ಕಾಂಪೌಂಡ್, ಕಿತ್ತುಹೋಗಿರುವ ತಂತಿಬೇಲಿ, ಪಕ್ಕದಲ್ಲೇ ತಿಪ್ಪೆಗುಂಡಿ, ಕಸದರಾಶಿ, ಸುತ್ತಲೂ ಗಿಡಗಂಟೆಗಳು, ಅಲ್ಲೇ ಹಳೆಯ ಕಟ್ಟಡದ ಅವಶೇಷ, ಮುಂದೆ ಹೋಗಲಾಗದೆ ಅಲ್ಲೇ ನಿಂತು ದುರ್ನಾತ ಬೀರುತ್ತಿರುವ ಚರಂಡಿ ನೀರು.. ಇದು ಪಾಳುಬಿದ್ದಿರುವ ಬಂಗಲೆಯ ಚಿತ್ರಣವಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಮನೆಕಟ್ಟದೆ ಹಾಗೆಯೇ ಬಿಟ್ಟಿರುವ ಖಾಲಿ ನಿವೇಶನಗಳ ಸಂಕ್ಷಿಪ್ತ ರೂಪ.
ಪಟ್ಟಣದ ಖಾಲಿ ನಿವೇಶನಗಳು ಸ್ವಚ್ಚತೆಯ ನಿರ್ವಹಣೆ ಇಲ್ಲದೇ ಕೊಳಚೆ ಪ್ರದೇಶಗಳಾಗಿ ಪರಿವರ್ತನೆ ಯಾಗಿದ್ದು, ನಿವೇಶನಗಳ ಮಾಲೀಕರ ಅಸಡ್ಡೆಯಿಂದಾಗಿ ಅದರ ಅಕ್ಕಪಕ್ಕದ ಮನೆಗಳ ನಿವಾಸಿಗಳು ನೆಮ್ಮದಿಯ ಜೀವನದಿಂದ ವಂಚಿತರಾಗಿದ್ದಾರೆ. ಪ್ರತಿಷ್ಠಿತ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದೇವೆಂದು ಖಾಲಿ ನಿವೇಶನಗಳ ಪಕ್ಕದಲ್ಲಿ ವಾಸವಾಗಿರುವ ನಿವಾಸಿಗಳು ಹೆಸರಿಗೆ ಮಾತ್ರ ಹೇಳಿ ಕೊಳ್ಳಬೇಕಷ್ಟೇ. ಕೊಳಚೆ ಪ್ರದೇಶದ ವಾತಾವರಣ ಅಲ್ಲಿ ಸೃಷ್ಟಿಯಾಗಿರುವುದು ಮಾತ್ರ ಅಲ್ಲಿನ ವಾಸ್ತವ ಸಂಗತಿ.
ಖಾಲಿ ನಿವೇಶನಗಳಲ್ಲಿ ಬೆಳೆದಿರುವ ದೊಡ್ಡ ದೊಡ್ಡ ಪೊದೆಗಳು ಕಳ್ಳಕಾಕರಿಗೆ ಪ್ರಶಸ್ತ ತಾಣಗಳಾಗಿದ್ದು, ಕಳ್ಳತನಕ್ಕೆ ಯೋಜನೆ ರೂಪಿಸಲು ಸಹಾಯ ಮಾಡುವುದರ ಜತೆಗೆ ತಪ್ಪಿಸಿಕೊಳ್ಳಲು ಸಹಕಾರಿಯಾಗಿವೆ. ಪಟ್ಟಣದ ಸಾತನೂರು ರಸ್ತೆಯ ಹೌಸಿಂಗ್ ಬೋರ್ಡ್ ಕಾಲೋನಿ ಬಳಿ ಈ ಹಿಂದೆ ಈ ಪೊದೆಗಳಿಂದಾಗಿ ಹಲವು ಕಳ್ಳತನ ಪ್ರಕರಣಗಳುನಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಸರೀಸೃಪಗಳ ಆವಾಸ ಸ್ಥಾನ: ನಿರ್ವಹಣೆಯಿಲ್ಲದೆ ಮಿನಿ ಕಾಡಿನ ರೀತಿ ಪರಿವರ್ತನೆಯಾಗಿರುವ ಖಾಲಿ ನಿವೇಶನಗಳಲ್ಲಿ ಬೀದಿ ದನಗಳು, ಕುದುರೆಗಳು ಸ್ವಚ್ಛಂದವಾಗಿ ಆಹಾರ ಅರಸುತ್ತಾ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆ
ನೀಡುತ್ತಿವೆ. ಖಾಲಿ ನಿವೇಶನಗಲ್ಲಿ ಹುಲಹಾವು, ಪೊದೆಗಳಲ್ಲಿ ಸೇರಿಕೊಂಡು ತಾವು ನೆಮ್ಮದಿಯ ಜೀವನ ನಡೆಸುತ್ತಾ ಪಕ್ಕದ ನಿವಾಸಿಗಳಿಗೆ ಆತಂಕ ತಂದೊಡ್ಡಿವೆ. ಇವುಗಳ ಜತೆಗೆ ಹೆಗ್ಗಣಗಳು ಪಕ್ಕದ ನಿವೇಶನಕ್ಕೆ ಹೊಂದಿಕೊಂಡ ಮನೆಯ ಅಡಿಪಾಯಕ್ಕೆ ಕನ್ನ ಹಾಕಿ ಶಿಸ್ತಾಗಿ ತನ್ನ ಮನೆ ನಿರ್ಮಾಣ ಮಾಡಿಕೊಂಡು ಚರಂಡಿಗೂ ಮನೆಗೂ ಆಗಾಗ ಓಡಾಡಿಕೊಂಡಿವೆ.
ಸಾಂಕ್ರಾಮಿಕ ರೋಗಗಳ ಭೀತಿ: ಖಾಲಿ ನಿವೇಶನದಲ್ಲಿ ಚರಂಡಿ ನೀರು ಹರಿಯದೆ ನಿಂತು ದುರ್ವಾಸನೆ ಬೀರುತ್ತಾ ಸುತ್ತಲಿನ ಪರಿಸರ ಹಾಳಾಗಿದ್ದು, ಇದರ ಜತೆಗೆ ಕೆಲವರು ಸುತ್ತಮುತ್ತಲ ಕಸವನ್ನು ಇಲ್ಲಿಯೇ ತಂದು ಬಿಸಾಡುತ್ತಿರುವುದರಿಂದ ಈ ಅನಧಿಕೃತ ಕಸದ ತೊಟ್ಟಿಗಳಿಂದ ನಿವಾಸಿಗಳಿಗೆ ತೊಂದರೆ ಎದುರಾಗಿದೆ. ಕೆಲವು ಬಡಾವಣೆಗಳಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೊಳಚೆ ನೀರು ನಿವೇಶನದಲ್ಲೇ ನಿಂತು ಸೊಳ್ಳೆಗಳಿಗೆ ಪ್ರಶಸ್ತ ತಾಣಗಳಾಗಿರುವುದರಿಂದ ಪಕ್ಕದ ನಿವಾಸಿಗಳು ಸಾಂಕ್ರಾಮಿಕ ರೋಗಗಳ ಭೀತಿಯ ಆತಂಕದಲ್ಲಿದ್ದಾರೆ.
ಗಮನಹರಿಸದ ನಗರಸಭೆ: ಪ್ರತಿಷ್ಟಿತ ಬಡಾವಣೆ ಗಳಲ್ಲಿರುವ ಖಾಲಿ ನಿವೇಶನ ಗಳನ್ನು ನಿರ್ವಹಣೆ ಮಾಡಿ, ಸ್ವಚ್ಚತೆ ಕಾಪಾಡುವಂತೆ ಮಾಲೀಕರಿಗೆ ನಗರ ಸಭೆ ಸೂಚನೆ ನೀಡದಿರುವುದು ಮಾಲೀಕರ ಅಸಡ್ಡೆಗೆ ಕಾರಣ ವಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ತೊಂದರೆಅನುಭವಿ ಸುತ್ತಿರುವ ನಿವಾಸಿಗಳು ಆಗ್ರಹಿಸಿದ್ದಾರೆ.ತಮ್ಮ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಸ್ವಚ್ಛತೆ ಮಾಡಿ ಕೈತೊಳೆ ದುಕೊಳ್ಳುವ ಕೆಲಸ ಮಾಡದೆ ಇಡೀ ಪಟ್ಟಣವನ್ನು ನೈರ್ಮಲ್ಯವಾಗಿಡಲು ಸಹಕರಿಸಬೇಕು. ಖಾಲಿ ನಿವೇಶ ನಗಳ ಮಾಲೀಕರಿಗೆ ನೋಟಿಸ್ ನೀಡಿ ನಿರ್ವಹಣೆ ಮಾಡುವಂತೆ ಎಚ್ಚರಿಸಬೇಕೆಂದು ಒತ್ತಾಯ ಮಾಡಿದ್ದಾರೆ.
ಖಾಲಿ ನಿವೇಶನ ಹೊಂದಿರುವವರು ತಮ್ಮ ನಿವೇಶನಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕೆಂದು ಸೂಚಿಸಲಾಗಿದೆಯಾದರೂ, ಕೆಲವಡೆ ಪಾಲಿಸುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. -ಶಿವನಂಕಾರಿಗೌಡ, ಪೌರಾಯುಕ್ತ ನಗರಸಭೆ.
-ಎಂ.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ