ಬೆಳಗ್ಗೆ ಜನ ಬರಲ್ಲ; ಸಂಜೆ ಬೀಗ ತೆಗೆಯಲ್ಲ!

ಅರಣ್ಯ ಇಲಾಖೆಯ ಸಂರಕ್ಷಿತ ಪವಿತ್ರ ವನ ಪ್ರವೇಶಕ್ಕೆ ಅಡ್ಡಿ

Team Udayavani, Apr 19, 2019, 5:37 PM IST

19-April-36

ಸಾಗರ: ಸಂಜೆ ಆರಕ್ಕೆ ಬೀಗ ಹಾಕುವುದರಿಂದ ವರದಹಳ್ಳಿ ರಸ್ತೆಯ ಅರಣ್ಯ ಇಲಾಖೆಯ ಪವಿತ್ರ ವನದ ಎದುರು ನಿರಾಶರಾಗಿ ನಿಂತ ಜನಸಂದಣಿ.

ಸಾಗರ: ನಗರದ ಹೊರವಲಯದ ವರದಹಳ್ಳಿ ರಸ್ತೆಯಲ್ಲಿ ಹೆಲಿಪ್ಯಾಡ್‌ ಎದುರಿನ ಪವಿತ್ರ ವನವನ್ನು ಅದನ್ನು ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಜನ ಬಳಕೆಗೆ ಬಿಡದೆ ಸಂರಕ್ಷಿತ
ಅರಣ್ಯದ ಮಾದರಿಯಲ್ಲಿ ನೋಡಿಕೊಳ್ಳುತ್ತಿದೆ ಎಂಬ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ
ಮಾಡಿ ಅಪರೂಪದ ಮರ ಗಿಡಗಳು, ನೀರಿನ ಝರಿ, ಪಾದಚಾರಿ ಮಾರ್ಗ, ಚಿಣ್ಣರ ಆಟದ ಉಪಕರಣಗಳು, ವಿಶ್ರಾಂತಿ ಕಟ್ಟೆ,
ಚಾವಡಿ ಮೊದಲಾದವುಗಳನ್ನು ನಿರ್ಮಾಣ ಮಾಡಿರುವ ಅರಣ್ಯ ಇಲಾಖೆ ಸಂಜೆ 5-45 ಆಗುತ್ತಿದ್ದಂತೆ ಒಳಬರುವ ಜನರನ್ನೂ ತಳ್ಳಿ
ಬೀಗ ಹಾಕುತ್ತಿರುವುದರಿಂದ ಪಾರ್ಕ್‌ ಕೇವಲ ದೂರದಿಂದ ಜನರ ಕಣ್ಣು ತಂಪು ಮಾಡುವುದಕ್ಕೆ ಸೀಮಿತವಾಗಿದೆ.

ಪವಿತ್ರ ವನದ ಎದುರಿನ ಗೇಟ್‌ನಲ್ಲಿಯೇ ಸಾರ್ವಜನಿಕರ ಪ್ರವೇಶ ಅವಧಿಯ ಫಲಕ ಕಾಣುತ್ತಿದ್ದು, ಬೆಳಗ್ಗೆ 10ರಿಂದ ಸಂಜೆ ಆರರವರೆಗೆ ಮಾತ್ರ ಪ್ರವೇಶ ಎಂಬ ಸೂಚನೆ ಕಾಣುತ್ತದೆ. ಬೆಳಗಿನ ಅವಧಿಯಲ್ಲಿ ಸಾರ್ವಜನಿಕರು ಇತ್ತ ಸುಳಿಯುವುದಿಲ್ಲ. ಈ ಮುನ್ನ ಹತ್ತಿರದ ವಿದ್ಯಾರ್ಥಿ ಹಾಸ್ಟೆಲ್‌ನ ವಿದ್ಯಾರ್ಥಿಗಳು ಮರದ ಆಶ್ರಯದಡಿ
ಓದುವುದಕ್ಕಾಗಿ ಬರುತ್ತಿದ್ದರೂ ಈಗ ಪರೀಕ್ಷೆ ಮುಗಿದಿರುವುದರಿಂದ ಅವರು ಬರುವುದಿಲ್ಲ. ಮಧ್ಯಾಹ್ನದ ಬಿಸಿಲು ಇಳಿದು ತುಸು ಸುತ್ತಾಡ ಬಯಸುವ ವೃದ್ಧರು, ಮಕ್ಕಳು ಇತ್ತ ಬರುವ ಸಮಯದಲ್ಲಿ ಗೇಟ್‌ ಗೆ ಹಾಕಿದ ಬೀಗ ನೋಡಿ ನಿರಾಶರಾಗುವ
ಪರಿಸ್ಥಿತಿ ಪ್ರತಿದಿನದ ದೃಶ್ಯವಾಗಿದೆ.

ಸಾಗರ ನಗರದ ವಿಶೇಷಗಳ ಹೊರತಾಗಿ ನಗರದೊಳಗೆ ವ್ಯವಸ್ಥಿತ ಪಾರ್ಕ್‌ನ ಕೊರತೆ ಎದ್ದು ಕಾಣುತ್ತದೆ. ನೆಹರೂ ಮೈದಾನದ
ಪಕ್ಕದಲ್ಲಿನ ನಗರಸಭೆಯ ಉದ್ಯಾನವನ ನಿರ್ವಹಣೆಯಿಲ್ಲದೆ ಜಾನುವಾರುಗಳ ಮೇವು ತಾಣವಾಗಿದೆ. ಶಾಸಕ ಎಚ್‌.
ಹಾಲಪ್ಪ ಇದರತ್ತ ವಕ್ರದೃಷ್ಟಿ ಬೀರಿದ್ದು, ಇದೇ ಜಾಗದಲ್ಲಿ ರಂಗಮಂದಿರ ನಿರ್ಮಾಣದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ನಗರದ ಇತರ ಕೆಲವು ಭಾಗಗಳಲ್ಲಿ ವಾಕಿಂಗ್‌ ಟ್ರಾಕ್‌ ಲಭ್ಯವಿದೆಯಾದರೂ ಅತ್ಯುತ್ತಮ ಹಸಿರು ವಾತಾವರಣ ಮಾತ್ರ ವರದಹಳ್ಳಿ ರಸ್ತೆಯ
ಪವಿತ್ರ ವನದಲ್ಲಿ ಮಾತ್ರ ಲಭ್ಯ.

ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಚೇರಿ ಸಮಯದ ಅನ್ವಯ ಪಾರ್ಕ ನಿರ್ವಹಣೆಯಾಗುತ್ತಿರುವುದರಿಂದ ಈ ಸಮಸ್ಯೆ ಕಾಡುತ್ತಿದೆ. ಜನಪರವಾಗಿರಬೇಕಾದ ಅರಣ್ಯ ಇಲಾಖೆ ಸಬೂಬುಗಳನ್ನು ಹೇಳದೆ ಕೊನೆಪಕ್ಷ ರಾತ್ರಿ 8 ರವರೆಗಾದರೂ ಉದ್ಯಾನವನದ ಗೇಟ್‌ ತೆರೆದಿರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.