ಸಂಘಟನೆಯಿಂದ ಸಮಾಜಕ್ಕೆ ಬ

ಸಮಾನತೆಯ ಕಲ್ಪನೆ ಬಿತ್ತಿದವರು ಅಂಬಿಗರ ಚೌಡಯ್ಯ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

Team Udayavani, May 12, 2019, 5:15 PM IST

11-March-38

ಸಾಗರ: ಗಂಗಾಪರಮೇಶ್ವರಿ ಸಮುದಾಯ ಭವನ ಲೋಕಾರ್ಪಣೆ ಮತ್ತು ಗಂಗಾ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.

ಸಾಗರ: ಅಂಬಿಗರು ನಂಬಿಕೆಗೆ ಅರ್ಹವಾದ ಜನಾಂಗ. 39 ಉಪ ಜಾತಿಗಳು ಸೇರಿ ಗಂಗಾಮತಸ್ಥ ಸಮಾಜವಾಗಿದ್ದು, ಸಮಾಜ ಸಂಘಟನಾತ್ಮಕವಾಗಿ ಇನ್ನಷ್ಟು ಪರಿಣಾಮಕಾರಿ ಹೆಜ್ಜೆಗಳನ್ನು ಇರಿಸಬೇಕು. ಸಂಘಟನೆಯಿಂದ ಸಮಾಜಕ್ಕೆ ಬಲ ಬರುತ್ತದೆ ಎಂದು ನರಸೀಪುರ ಮಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ತಿಳಿಸಿದರು.

ನಗರದ ಗಂಗಾಮತ ಸಮಾಜದ ವತಿಯಿಂದ ಶನಿವಾರ ಏರ್ಪಡಿಸಿದ್ದ ಗಂಗಾಪರಮೇಶ್ವರಿ ಸಮುದಾಯ ಭವನ ಲೋಕಾರ್ಪಣೆ ಮತ್ತು ಗಂಗಾ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯ ಸಮಾನತೆಯನ್ನು ಸಾರುವ ಮೂಲಕ ಸಮಾನ ಸಮಾಜದ ಪರಿಕಲ್ಪನೆ ಬಿತ್ತಿದವರು. ಜಾತೀಯತೆ, ಮೂಢನಂಬಿಕೆ ಮೊದಲಾದವುಗಳನ್ನು ಸಮಾಜದಿಂದ ತೊಲಗಿಸಲು ವಚನದ ಮೂಲಕ ಕಾರ್ಯದ ಮೂಲಕ ಪ್ರಯತ್ನ ನಡೆಸಿದ್ದಾರೆ. ಅವರ ಆದರ್ಶದ ಮಾರ್ಗವನ್ನು ನಾವು ಅರಿತುಕೊಂಡು ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಸಂಪ್ರದಾಯದ ಹೆಸರಿನಲ್ಲಿ ಪ್ರಾಣಿಬಲಿ, ಹಿನ್ನೆಲೆ ತಿಳಿಯದೆ ಬೇರೆಬೇರೆ ಧಾರ್ಮಿಕ ಆಚರಣೆ ಸರಿಯಲ್ಲ. ಚಿಂತೆ ಬದಲು ನಾವು ಸಮಾಜಮುಖೀಯಾಗಿ ಏನನ್ನಾದರೂ ಮಾಡಬೇಕು ಎನ್ನುವ ಚಿಂತನೆ ಇರಬೇಕು. ಗಂಗಾ ಜಯಂತ್ಯೋತ್ಸವ ನಮ್ಮನ್ನು ಚಿಂತನೆಯತ್ತ ಕೊಂಡೊಯ್ಯಬೇಕು ಎಂದು ಹೇಳಿದರು.

12ನೇ ಶತಮಾನದಲ್ಲಿ ಕನ್ನಡವನ್ನು ವಚನಗಳ ಮೂಲಕ ಪರಿಚಯಿಸಲಾಯಿತು. ಶಿವಶರಣರ ಯುಗದಲ್ಲಿ ಸಚ್ಛಾರಿತ್ರ್ಯದ ಬದುಕು ಕಟ್ಟಿಕೊಳ್ಳುವುದನ್ನು ವಚನಗಳ ಮೂಲಕ ತಿಳಿಸಿ ಕೊಟ್ಟಿದ್ದಾರೆ. ಸಣ್ಣ ಜನಾಂಗವೊಂದು ಅತ್ಯಂತ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮಾಡಿರುವುದು ನಿಜಕ್ಕೂ ಸ್ಮರಣೀಯ ಕೆಲಸವಾಗಿದೆ. ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಸಮುದಾಯ ಭವನದ ಜೊತೆಗೆ ಜನಾಂಗ ಬಾಂಧವರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಇಲ್ಲಿ ನಡೆದಿದೆ. ಸಮಾಜ ಸಂಸ್ಕಾರಯುತವಾಗಿರಬೇಕಾದರೆ ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನ ಸಿಗುವಂತೆ ಆಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು, ಧರೆಯ ಪರಮಾಪ್ತೆ ಗಂಗೆ. ಎಲ್ಲ ಖಂಡಗಳಲ್ಲಿಯೂ ನೀರಿದೆ. ಆದರೆ ಎಲ್ಲ ನೀರು ಗಂಗೆಯಲ್ಲ. ಗಂಗೆಯ ಭೂಸ್ಪರ್ಶದ ದಿನವನ್ನು ಗಂಗಾ ಜಯಂತಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಗಂಗೆ ಪಾವನೆಯೇ ಹೊರತು ಪತಿತೆಯಲ್ಲ. ಅನೇಕರ ಪಾಪಗಳನ್ನು ತನ್ನೊಡಲಿನಲ್ಲಿ ಇರಿಸಿಕೊಂಡು ಮನುಷ್ಯನನ್ನು ಪುನೀತವಾಗಿ ಮಾಡುವ ಶಕ್ತಿ ಇರುವುದು ಗಂಗಾನದಿಗೆ ಮಾತ್ರ. ಅಂಬಿಗರು ಎಷ್ಟು ನಿಷ್ಟರು ಎನ್ನುವುದನ್ನು ನಾವು ಗುಹ ಮತ್ತು ರಾಮನ ಸನ್ನಿವೇಶದಲ್ಲಿ ಕಾಣಬಹುದು ಎಂದರು.

ಸಮುದಾಯ ಭವನ ಸಮಿತಿ ಅಧ್ಯಕ್ಷ ಲಕ್ಷ್ಮಣ ಮಾಗಡಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಮುಖರಾದ ಕೆ.ಆರ್‌. ಧರ್ಮಪ್ಪ, ಇಕ್ಕೇರಿ ರಾಮಣ್ಣ, ಡಿ.ಬಿ. ಕೆಂಚಪ್ಪ, ಎ. ಹಾಲೇಶಪ್ಪ, ಜೆ. ಭೀಮಣ್ಣ, ನಾಗರಾಜ್‌, ಎಚ್.ಎಂ. ರಂಗನಾಥ್‌, ಕೆ.ಆರ್‌. ಮೇಘರಾಜ್‌, ರುಕ್ತೇಶ್‌, ಬಿ.ಡಿ. ರವಿಕುಮಾರ್‌, ಹುಳಿಗದ್ದೆ ನಾಗೇಂದ್ರ, ಗೀತಾ ಪರಶುರಾಮ್‌, ಲಲಿತಮ್ಮ ಇನ್ನಿತರರು ಇದ್ದರು. ಸೋಮಣ್ಣ ಪ್ರಾರ್ಥಿಸಿದರು. ನಟರಾಜ ಸ್ವಾಗತಿಸಿದರು. ಸಮುದಾಯ ಭವನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್‌.ವಿ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್‌ ಜಿ. ವಂದಿಸಿದರು. ರವಿ ಜಂಬಗಾರು ನಿರೂಪಿಸಿದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.