ಕೆಎಫ್‌ಡಿ ಪೀಡಿತರ ನೆರವಿಗೆ ಮನವಿ

ಸಾವಿಗೀಡಾದವರ ಕುಟುಂಬಕ್ಕೆ ತುರ್ತಾಗಿ 5 ಲಕ್ಷ ರೂ.ಪರಿಹಾರ ನೀಡಿ: ವೃಕ್ಷಲಕ್ಷ ಆಂದೋಲನ ಒತ್ತಾಯ

Team Udayavani, Apr 6, 2019, 5:21 PM IST

Udayavani Kannada Newspaper

ಸಾಗರ: ಕಾರ್ಗಲ್‌, ಸಂಪ, ಅರಲಗೋಡು ವ್ಯಾಪ್ತಿಯ ಹಳ್ಳಿಗಳಲ್ಲಿ ಇನ್ನೂ ಮಂಗಗಳು ಸಾಯುತ್ತಿವೆ. ಗ್ರಾಮಗಳ ಜನರು ಅರಳಗೋಡು
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಿಲೆ ತಪಾಸಣೆಗೆ ಆಸ್ಪತ್ರೆಯಲ್ಲಿ ಕ್ಯೂ ನಿಲ್ಲುವಂತಾಗಿದೆ. ಗ್ರಾಮದಲ್ಲಿ ಕೆಎಫ್‌ಡಿಗೆ ತುತ್ತಾಗಿ ಸಾವು ಕಂಡವರ ಸಂಖ್ಯೆ 20 ದಾಟಿದೆ. ಈ ಹಳ್ಳಿಗಳ ಶೇ. 25ರಷ್ಟು ಜನ ಹಳ್ಳಿ ತೊರೆದು ಬೇರೆಡೆ ಹೋಗಿದ್ದಾರೆ. ಈ ದಯನೀಯ ಸ್ಥಿತಿಯ ಶರಾವತಿ ಅಭಯಾರಣ್ಯದಲ್ಲಿರುವ ಅರಳಗೋಡಿನ ಜನರ ನೆರವಿಗೆ ಯಾವುದೇ ನೆಪಗಳಿಲ್ಲದೆ ಧಾವಿಸಬೇಕು ಎಂದು ನಗರದ ವೃಕ್ಷಲಕ್ಷ ಆಂದೋಲನ
ಒತ್ತಾಯಿಸಿದೆ.

ಅರಲಗೋಡು ಗ್ರಾಮಕ್ಕೆ ಭೇಟಿ ನೀಡಿದ ವೃಕ್ಷಲಕ್ಷ ತಂಡದ ಸದಸ್ಯರು ಪರಿಸ್ಥಿತಿಯನ್ನು ನೋಡಿ ವಿಶ್ಲೇಷಿಸಿ, ನೆಲ್ಲಿಮಕ್ಕಿ, ಮರಬಿಡಿ, ಚೇಗಳ, ಸಂಪ, ಬಣ್ಣುಮನೆ, ಕಂಚಿಕೈ, ಕಾಳಮಂಜಿ, ಇಟಿಗೆ, ಐತುಮನೆ, ಮರಾಠಿಕೇರಿ ಮಜರೆಗಳ ಸುಮಾರು 170 ಕುಟುಂಬಗಳು ಮಂಗನ ಕಾಯಿಲೆ ಪೀಡಿತ ಸಂತ್ರಸ್ತರಾಗಿದ್ದಾರೆ. ಸರ್ಕಾರ ಪರಿಹಾರ ನೀಡಿಲ್ಲ. ಕೃಷಿ ಚಟುವಟಿಕೆ ಪೂರ್ಣ ನಿಂತಿದೆ. ಅರಣ್ಯ ಇಲಾಖೆ ಲೆಕ್ಕದಲ್ಲಿ 176 ಮಂಗಗಳು ಸತ್ತಿವೆ. ಆದರೆ ಗ್ರಾಮದ ಮುಖಂಡ ಲೋಕರಾಜ್‌ ಪ್ರಕಾರ ಈ ಸಂಖ್ಯೆ 900 ದಾಟಿದೆ. ಹಳ್ಳಿ ಬಿಟ್ಟು ತೆರಳಿದ ಜನರಿಗೆ ಕಾಯಿಲೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಕುಟುಂಬಗಳು ತಾತ್ಕಾಲಿಕವಾಗಿ ಊರು ಬಿಡುವ ತಯಾರಿಯಲ್ಲಿ ಇದ್ದಾರೆ ಎಂದಿದೆ.

ಮಂಗನ ಕಾಯಿಲೆಯಿಂದ ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡಬೇಕು. ಮಳೆ ಬೀಳುವವರೆಗೆ ಏಪ್ರೀಲ್‌ – ಮೇ 2 ತಿಂಗಳ ಕಾಲ ಅರಲಗೋಡು ಹಳ್ಳಿಗಳ ಜನರಿಗೆ ಬೇರೆ ಸ್ಥಳಗಳಲ್ಲಿ
ತಾತ್ಕಾಲಿಕ ಪುನರ್ವಸತಿ ಕಲ್ಪಿಸಿಕೊಡಬೇಕು. ಅರಳಗೋಡು ಆಸ್ಪತ್ರೆಗೆ ಇನ್ನಷ್ಟು ಹಾಸಿಗೆ, ಉಪಕರಣ, ಔಷ ಧ, ಸಿಬ್ಬಂದಿಯನ್ನು ತಕ್ಷಣ ಒದಗಿಸಬೇಕು. ಔಷಧ ಕಂಡು ಹಿಡಿಯಬೇಕು. ಐಸಿಎಂಆರ್‌ ನವದೆಹಲಿ ಅವರ ತಜ್ಞರ ತಂಡ ಅರಳಗೋಡಿಗೆ ಬರುವಂತೆ ತುರ್ತು ಕ್ರಮ ಬೇಕು. ವನ್ಯ ಜೀವಿ ಅರಣ್ಯ ಇಲಾಖೆ
ಅರಳಗೋಡಿನಲ್ಲಿ ಸಾವಿಗೀಡಾದ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಸಾಮಾಜಿಕ- ಧಾಮಿಕ ಸಂಘಸಂಸ್ಥೆ,
ಮಠಗಳು ಅರಲಗೋಡಿಗೆ ಬಂದು ಸಂತ್ರಸ್ತರಿಗೆ ನೆರವಿನ ಹಸ್ತ ನೀಡುವಂತಾಗಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.

ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸಂಚಾಲಕ ಬಿ.ಎಚ್‌. ರಾಘವೇಂದ್ರ, ಸಾಗರ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರದ ಕೆ. ವೆಂಕಟೇಶ,
ಕವಲಕೋಡು, ವೃಕ್ಷಲಕ್ಷದ ಆನೆಗುಳಿ ಸುಬ್ಬರಾವ್‌, ಜಗದೀಶ, ಶ್ರೀಕಾಂತ, ಅಶೋಕ ಮುಂತಾದ ಕಾರ್ಯಕರ್ತರು ತಂಡದಲ್ಲಿ ಇದ್ದರು. ತಂಡ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ,
ಪಂಚಾಯತ್‌, ಅರಣ್ಯ ವನ್ಯಜೀವಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿತು.

ಟಾಪ್ ನ್ಯೂಸ್

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.