ಸೇನಾ ಹೆಲಿಕಾಪ್ಟರ್‌ ಹುಡುಕಿಕೊಟ್ಟವರಿಗೆ ಸಿಗದ ಭೂಮಿ

ಸರ್ಕಾರದ ಭರವಸೆ ನಂಬಿ ಕೆಟ್ಟ ಪುಟ್ಟಸ್ವಾಮಿ ಗೌಡ „ಕಳೆದ 27 ವರ್ಷಗಳಿಂದ ಸೌಲಭ್ಯಕ್ಕಾಗಿ ಕಚೇರಿಗೆ ತಪ್ಪದ ಅಲೆದಾಟ

Team Udayavani, Jul 4, 2019, 3:40 PM IST

04-July-32

1992ರ ಜೂನ್‌ ತಿಂಗಳಿನಲ್ಲಿ ಸಕಲೇಶಪುರಕ್ಕೆ ಆಗಮಿಸಿದ್ದ ಅಂದಿನ ನೌಕಾಪಡೆ ಮುಖ್ಯಸ್ಥ ಸಿಕ್ವೇರಾ ಪುಟ್ಟಸ್ವಾಮಿ ಗೌಡರನ್ನು ಸನ್ಮಾನಿಸಿದ್ದರು.

ಸುಧೀರ್‌ ಎಸ್‌.ಎಲ್
ಸಕಲೇಶಪುರ:
ಕಾಣೆಯಾಗಿದ್ದ ಭಾರತೀಯ ನೌಕ ಪಡೆಯ ಹೆಲಿಕಾಪ್ಟರ್‌ನ್ನು ಹುಡುಕಿಕೊಟ್ಟ ವ್ಯಕ್ತಿ ಯೋರ್ವರು ಸರ್ಕಾರ ನೀಡುತ್ತದೆಂದು ಕನಸು ಕಂಡಿದ್ದ 4 ಎಕರೆ ಭೂಮಿಗಾಗಿ ಕಳೆದ 27 ವರ್ಷಗಳಿಂದ ಇಂದಿಗೂ ಸಹ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.

1992ರಲ್ಲಿ ಕಾಪ್ಟರ್‌ ಪತನ: 1992 ನೇ ಇಸವಿ ಡಿಸೆಂಬರ್‌ 22 ರಂದು ಬೆಂಗಳೂರಿನಿಂದ ಮಂಗಳೂರಿ ನೆಡೆಗೆ ಮೂವರು ಯೋಧರನ್ನು ಹೊತ್ತೂಯ್ಯುತ್ತಿದ್ದ ಕೇರಳದ ಕೊಚ್ಚಿನ್‌ ವಿಭಾಗಕ್ಕೆ ಸೇರಿದ ಚೇತಕ್‌ ಕೊಚ್ಚಿನ್‌ ಹೆಲಿಕಾಪ್ಟರ್‌ ಅತಿಯಾದ ಮಂಜಿನಿಂದಾಗಿ ತಾಲೂಕಿನ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಪತನ ಗೊಂಡಿತ್ತು. ಈ ವೇಳೆ ಹೆಲಿಕಾಪ್ಟರ್‌ ಪತ್ತೆ ಕಾರ್ಯಕ್ಕಾಗಿ ಸೇನಾ ಪಡೆ ಐದು ಹೆಲಿಕಾಪ್ಟರ್‌ಗಳ ಸಹಾಯ ದೊಂದಿಗೆ ಸ್ಥಳೀಯ ಅಧಿಕಾರಿಗಳನ್ನು ಬಳಸಿಕೊಂಡು 120 ಸೈನಿಕರು ಸತತ 45 ದಿನಗಳ ಕಾಲ ಹುಡುಕಾಟ ನಡೆಸಿದರೂ ಸಹ ಹೆಲಿಕಾಪ್ಟರ್‌ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಜಿಲ್ಲಾಡಳಿತ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಹೆಲಿಕಾಪ್ಟರ್‌ ಹುಡುಕಿಕೊಟ್ಟವರಿಗೆ ಒಂದು ಲಕ್ಷ ನಗದು, ಸರ್ಕಾರಿ ಕೆಲಸದೊಂದಿಗೆ ನಾಲ್ಕು ಎಕರೆ ಜಮೀನು ನೀಡುವುದಾಗಿ ಘೋಷಿಸಿತ್ತು.

15 ದಿನಗಳ ಪರಿಶ್ರಮ: ಈ ಹಿನ್ನೆಲೆಯಲ್ಲಿ ಕಾಡುಮನೆ ಟೀ ಎಸ್ಟೇಟ್ ಸಮೀಪ ಕೂಲಿ ಕೆಲಸ ಮಾಡುತ್ತಿದ್ದ ಪುಟ್ಟಸ್ವಾಮಿಗೌಡ ಜೀವ ಪಣಕ್ಕಿಟ್ಟು ಸತತ 15 ದಿನಗಳ ಕಾಲ ಪಶ್ಚಿಮಘಟ್ಟ ಅಲೆದ ನಂತರ ಅರೆಮನೆಗುಡ್ಡದ ಸಮೀಪದಲ್ಲಿ ಹೆಲಿಕಾಪ್ಟರ್‌ ಪತ್ತೆ ಮಾಡಿದ್ದರು. ಇದನ್ನು ಜಿಲ್ಲಾಡಳಿತಕ್ಕೆ ತಿಳಿಸಿದ ನಂತರ ಕೇರಳದ ಕೊಚ್ಚಿನ್‌ ನೌಕತಂಡ ಸ್ಥಳಕ್ಕೆ ಬಂದು ಹೆಲಿಕಾಪ್ಟರ್‌ ಅವಶೇಷ ಗಳನ್ನು ಸಂಗ್ರಹಿಸಿದ್ದಲ್ಲದೇ ಅಂದಿನ ನೌಕಪಡೆ ಮುಖ್ಯ ಸ್ಥರಾಗಿದ್ದ ಸಿಕ್ವೇರಾ ಅವರು ಪುಟ್ಟಸ್ವಾಮಿಗೌಡರಿಗೆ ಇವರಿಗೆ 10 ಸಾವಿರ ರೂ. ಬಹುಮಾನ ನೀಡಿ ಸನ್ಮಾನಿಸಿದ್ದರು.

ಪುರಸಭೆಯಿಂದ ಸಿಗದ ಹಕ್ಕುಪತ್ರ: ಪಟ್ಟಣದ ಚಂಪಕನಗರ ಬಡಾವಣೆಯಲ್ಲಿ 40×50 ನಿವೇಶನ ನೀಡಿದ ಅಂದಿನ ಉಪವಿಭಾಗಾಧಿಕಾರಿ ಪುರಸಭೆ ಅಧಿಕಾರಿಗಳಿಗೆ ಹಕ್ಕುಪತ್ರ ನೀಡುವಂತೆ ಸೂಚಿಸಿದ್ದರು. ಆದರೆ ಪುರಸಭೆ ಅಧಿಕಾರಿಗಳು ಹಕ್ಕುಪತ್ರ ನೀಡದ ಕಾರಣ ರಾಜಸ್ವ ನಿರೀಕ್ಷರ ಮಾತಿನಂತೆ ಈ ನಿವೇಶನ ದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಅಂದಿನ ಶಾಸಕರು ಈ ಜಾಗದಲ್ಲಿ ನಿರ್ಮಿಸಿರುವ ಗುಡಿಸಲು ತೆರವುಗೊಳಿ ಸುವಂತೆ ಸೂಚಿಸಿದ್ದರು. ಆದರೆ, ಕಾಕತಾಳೀಯ ಎಂಬಂತೆ ಶಾಸಕರು ಸೂಚಿಸಿದ ರಾತ್ರಿಯೆ ಗುಡಿಸಿಲಿಗೆ ಬೆಂಕಿ ಬಿದ್ದು ಗುಡಿಸಿಲು ಸಂಪೂರ್ಣ ಸುಟ್ಟುಹೋಗಿ ದ್ದರಿಂದ ಗುಡಿಸಲಿನಲ್ಲಿದ್ದ ಬಹುತೇಕ ಕಡತಗಳು ಬೆಂಕಿಯಿಂದ ನಾಶಗೊಂಡವು. ಈ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಗೌಡರು ಅನಿವಾರ್ಯವಾಗಿ ಮತ್ತೆ ಹಳ್ಳಿಗೆ ಹೋಗಿ ವಾಸಿಸುವಂತಾಗಿದೆ.

ಕಚೇರಿಗೆ ಅಲೆದಾಟ: ಹೆಲಿಕಾಪ್ಟರ್‌ ಹುಡುಕಿ ಕೊಟ್ಟಿ ದ್ದಕ್ಕೆ ಜಿಲ್ಲಾಡಳಿತ ನೀಡಿದ್ದ ಭರವಸೆ ಈಡೇರಿಸುವಂತೆ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿರುವ ಪುಟ್ಟಸ್ವಾಮಿಗೌಡ ಆಲೂರು ತಾಲೂಕು ಸಿಂಗಾಪುರ ಗ್ರಾಮದ ಸಮೀಪ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬಡತನದಲ್ಲೇ ಕಾಲಕಳೆಯುತ್ತಿರುವ ಪುಟ್ಟಸ್ವಾಮಿ ಗೌಡರ ಪತ್ನಿ ,ಪುತ್ರ ಅಂಧರಾಗಿದ್ದು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.

ಭಸ್ಮವಾದ ದಾಖಲೆಗಳು: ಬಹುತೇಕ ದಾಖಲೆಗಳು ಗುಡಿಸಲಿಗೆ ಬೆಂಕಿ ಬಿದ್ದಾಗ ಸುಟ್ಟು ಹೋಗಿದ್ದು, ಕೇವಲ ನೌಕ ಪಡೆಯ ಅಧಿಕಾರಿಗಳಿಂದ ಸನ್ಮಾನಿತ ರಾದ ಪೋಟೋವೊಂದು ಮಾತ್ರ ಇವರ ಬಳಿ ಉಳಿದಿದೆ. ಬಹುತೇಕ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ಹೋಗಿ ದಾಖಲೆ ತೆಗೆದು ಕೊಂಡು ಬನ್ರಿ ಎಂದು ಇವರನ್ನು ಸಾಗು ಹಾಕು ವುದರಿಂದ ವೃದ್ಧಾಪ್ಯದಲ್ಲಿ 4 ಎಕರೆ ಜಮೀನಿಗಾಗಿ ಕಚೇರಿಯಿಂದ ಕಚೇರಿಗೆ ತಿರುಗಾಡುತ್ತಲೆ ಇದ್ದಾರೆ.

ತಾಲೂಕಿನಲ್ಲಿ ಬೇರೆ ಬೇರೆ ಯೋಜನೆಗಳ ಹೆಸರಿ ನಲ್ಲಿ ಪ್ರಭಾವಿಗಳು ಸಾವಿರಾರು ಎಕರೆ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಆದರೆ ಪ್ರಾಮಾಣಿಕವಾಗಿ ನೌಕಪಡೆಯ ಹೆಲಿಕಾಪ್ಟರ್‌ ಹುಡುಕಿಕೊಟ್ಟ ಪುಟ್ಟಸ್ವಾಮಿಗೌಡರು ಮಾತ್ರ 4 ಎಕರೆ ಭೂಮಿಗಾಗಿ ಹೋರಾಟ ಮಾಡುತ್ತಲೇ ಇರುವುದು ದುರಂತವಾಗಿದೆ. ನನಗೇನು ಭೂಮಿ ಬೇಡ ಮನೆ ಯಲ್ಲಿರುವ ನನ್ನ ಅಂಧ ಮಗನಿ ಗಾಗಿ ಭೂಮಿ ನೀಡಲಿ ಎಂದು ಪುಟ್ಟಸ್ವಾಮಿಗೌಡರು ಕಣ್ಣೀರು ಹಾಕುತ್ತಾರೆ.

ಸ್ಥಳೀಯ ಭಜರಂಗದಳದ ಮುಖಂಡರು ಅಂದು ಸೇನಾ ಪಡೆಯಲ್ಲಿದ್ದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾನವೀಯತೆಯ ಆಧಾರದ ಮೇಲೆ ಜಿಲ್ಲಾಡಳಿತ ಈ ವೃದ್ಧರಿಗೆ ಜಮೀನು ನೀಡಲು ಮುಂದಾಗಬೇಕಾಗಿದೆ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.