ಕೆಂಡ ಹಾಯ್ದು ಹರಕೆ ತೀರಿಸಿದ ಭಕ್ತರು
Team Udayavani, Apr 8, 2019, 5:05 PM IST
ಸಂಡೂರು: ಸುಶೀಲಾನಗರ ಗ್ರಾಮದಲ್ಲಿ ಭಕ್ತರು ಅಗ್ನಿ ಕೆಂಡ ಹಾಯ್ದರು.
ಸಂಡೂರು: ಯುಗಾದಿ ಹಬ್ಬದ ಅಂಗವಾಗಿ ತಾಲೂಕಿನ ಸುಶೀಲಾನಗರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಅಗ್ನಿ ಕೆಂಡ ಉತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. ವೀರಭದ್ರಶ್ವೇರ ಸ್ವಾಮಿಗೆ ಬೆಳಗ್ಗೆ 5 ರಿಂದ 8 ಗಂಟೆಯವರೆಗೆ ವಿವಿಧ ಅಭಿಷೇಕಗಳು ಜರುಗಿದವು.
ಭಕ್ತರು ಉಪವಾಸ ವೃತದಿಂದ ದೇವಸ್ಥಾನದ ಪೂಜೆಯಲ್ಲಿ ಭಾಗಿಗಳಾಗಿ ಹೂ-ಹಣ್ಣು-ನೈವೇದ್ಯ ಸಮರ್ಪಿಸಿದರು. ವೀರಗಾಸೆ ನೃತ್ಯದೊಂದಿಗೆ ಗಂಗೆ ತರಲಾಯಿತು. ಬಳಿಕ ಶ್ರೀ ವೀರಭದ್ರೇಶ್ವರ ಸ್ವಾಮಿ ವಿಶೇಷ ಪೂಜೆ, ಈಶ್ವರ, ಪಾರ್ವತಿ ಪೂಜೆ ನೆರವೇರಿಸಲಾಯಿತು.
ವೀರಗಾಸೆಯ ಕುಣಿತದ ಸಂದರ್ಭದಲ್ಲಿ ವೀರಭದ್ರೇಶ್ವರ ಸ್ವಾಮಿಯ ಒಡಪುಗಳನ್ನು ಹೇಳಲಾಯಿತು. ಮೆರವಣಿಗೆಯ ಅಂತ್ಯದ ಸಮಯಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಅಗ್ನಿಕೆಂಡ ಸಿದ್ಧಪಡಿಸಲಾಯತು.
ಉಪವಾಸವಿದ್ದು ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಅಗ್ನಿ ಕುಂಡ ಹಾಯ್ದರು. ಬಿಕೆ. ಬಸವರಾಜ, ಸಕ್ರಪ್ಪ, ಕತ್ತಿ ಭರ್ಮಪ್ಪ, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು