ಪ್ರವಾಹ ಭೀತಿ ಸೃಷ್ಟಿಸಿದ ಮಲಪ್ರಭೆ ರೌದ್ರನರ್ತನ
ಮಹಾಮಳೆಗೆ ಮನೆ ಕಾಂಪೌಂಡ್ಗಳು ಸಂಪೂರ್ಣ ನೆಲಸಮ•ಮುಂಜಾಗ್ರತಾ ಕ್ರಮ: ತಪ್ಪಿದ ಅನಾಹುತ
Team Udayavani, Aug 8, 2019, 11:54 AM IST
ಸವದತ್ತಿ: ಕ್ಷಣ-ಕ್ಷಣಕ್ಕೂ ಹೆಚ್ಚುತ್ತಿರುವ ಮಲಪ್ರಭೆಯ ಒಳಹರಿವು ಆತಂಕ ಸೃಷ್ಟಿಸಿದ್ದು, ಹಗಲಿರುಳೆನ್ನದೇ ಅಧಿಕಾರಿಗಳು ಹೊರ ಹರಿವಿಗೆ ದಾರಿ ಮಾಡಿಕೊಟ್ಟು ಅಣೆಕಟ್ಟಿನ ಭದ್ರತೆ ಜೊತೆಗೆ ಜನರ ಸುರಕ್ಷತೆ ಬಗ್ಗೆ ಲಕ್ಷ್ಯ ವಹಿಸಬೇಕಾಗಿದೆ.
ಸದ್ಯ 80 ಸಾವಿರ ಕ್ಯೂಸೆಕ್ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, 60 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಬರಬಹುದೆಂದು ಅಂದಾಜಿಸಲಾಗಿದೆ. ಸತತ ಬರಗಾಲ ಅನುಭವಿಸಿದ ಈ ಭಾಗದ ಜನತೆ ಪ್ರವಾಹ ಭೀತಿಯಿಂದ ಮಳೆ ಸಾಕಪ್ಪ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುವಂತೆ ಆಗಿದೆ. ಮುಂಜಾಗ್ರತಾ ಕ್ರಮ ವಹಿಸಿದ್ದರಿಂದ ಯಾವುದೇ ಅನಾಹುತವಿಲ್ಲದೇ ಜನತೆ ಸುರಕ್ಷತೆಯಲ್ಲಿದ್ದಾರೆ.
ಶಾಲಾ-ಕಾಳೇಜುಗಳಿಗೆ ರಜೆ ಘೋಷಿಸಲಾಗಿದೆ. ಬುಧವಾರವೂ ಮಳೆ ಸತತ ಸುರಿದಿದ್ದರಿಂದ ಸವದತ್ತಿ ಸಂತೆ, ವ್ಯಾಪಾರ ವಹಿವಾಟು ನಡೆಯಲಿಲ್ಲ. ಮಹಾಮಳೆಗೆ ಮನೆ ಕಂಪೌಂಡ್ಗಳು ನೆಲಸಮಗೊಂಡು, ಅಲ್ಪ ಸ್ವಲ್ಪದರಲ್ಲೇ ಕೆಲವರು ಅಪಾಯದಿಂದ ಪಾರಾದರೆ, ಇನ್ನು ಕೆಲವರ ಮೇಲೆ ಗೋಡೆಗಳು ಬಿದ್ದಿವೆ. ಅದೃಷ್ಟವಶಾತ ಪ್ರಾಣಹಾನಿ ಸಂಭವಿಸಿಲ್ಲ. ನಿಧಾನಗತಿಯಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಭಾಗಶಃ ಮನೆಗಳು ಸೋರಿಕೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು