ಹಿರೇಪಡಸಲಗಿ ಗ್ರಂಥಾಲಯ ನೆಪಕ್ಕಷ್ಟೇ!
ಇಕ್ಕಟ್ಟಾದ ಜಾಗದಲ್ಲಿ ಕಟ್ಟಡಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಓದುಗರ ಪರದಾಟಪತ್ರಿಕೆ-ಪುಸ್ತಕಗಳು ಇಲ್ಲ
Team Udayavani, Oct 31, 2019, 6:20 PM IST
ಸಾವಳಗಿ: ಹಿರೇಪಡಸಲಗಿ ಗ್ರಂಥಾಲಯ ಅವ್ಯವಸ್ಥೆ ಆಗರಗಳಿಂದ ಕೂಡಿದ್ದು, ಓದುಗರು ಪರದಾಡುವಂತಾಗಿದೆ. ಗ್ರಂಥಾಲಯ ನೆಪಕ್ಕಷ್ಟೇ ಇದ್ದಂತೆ ಕಾಣುತ್ತಿದೆ. ಚಿಕ್ಕದಾದ ಕಟ್ಟಡ ಹೊಂದಿರುವ ಗ್ರಂಥಾಲಯ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಗ್ರಾಮದ ಓದುಗರ ಜ್ಞಾನದಾಹ ತಣಿಸುವ ಸಲುವಾಗಿ ಸ್ಥಾಪನೆಯಾಗಿದ್ದು, ಅಗತ್ಯ ಸೌಲಭ್ಯ ಒದಗಿಸುವ ವಿಚಾರದಲ್ಲಿ ಕಾಳಜಿ ತೋರದ ಕಾರಣ ಗ್ರಾಮದಲ್ಲಿ ಹೆಸರಿಗಷ್ಟೆ ಗ್ರಾಮ ಪಂಚಾಯತ ಗ್ರಂಥಾಲಯವಾಗಿದೆ.
ಹಿರೇಪಡಸಲಗಿ ಗ್ರಾಮದಲ್ಲಿ ಸುಮಾರು 12000 ಜನಸಂಖ್ಯೆಯಿದೆ. 20ವರ್ಷಗಳ ಹಿಂದೆ ಗ್ರಂಥಾಲಯ ಆರಂಭಗೊಂಡಿದೆ. ಆದರೆ, ಇಲ್ಲಿಯವರೆಗೂ ಸದಸ್ಯತ್ವ ಪಡೆದ ಸಂಖ್ಯೆ ಕೇವಲ 80 ಮಾತ್ರ. ಸಾರ್ವಜನಿಕರ ಜ್ಞಾನಾರ್ಜನೆಗಾಗಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸ್ಥಾಪನೆಯಾದ ಗ್ರಂಥಾಲಯ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಅದರ ಉದ್ದೇಶ ಈಡೇರುತ್ತಿಲ್ಲ.
ಸ್ಪರ್ಧಾತ್ಮಕ ಪುಸ್ತಕಗಳ ಕೊರತೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಅಂಕ ಗಳಿಸಿದವರಿಗೆ ನೇಮಕಾತಿಯಲ್ಲಿ ಅವಕಾಶ ಸಿಗುತ್ತಿರುವುದರಿಂದ ವಿದ್ಯಾರ್ಥಿ ಸಮುದಾಯ ಸ್ಪರ್ಧಾತ್ಮಕ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ, ಸ್ಪರ್ಧಾತ್ಮಕ ಪುಸ್ತಕಗಳು ಗ್ರಂಥಾಲಯದಲ್ಲಿಲ್ಲ.
ಸೌಲಭ್ಯಗಳ ಕೊರತೆ: ಗ್ರಂಥಾಲಯ ಕಾರ್ಯನಿರ್ವಹಿಸುವ ಕಟ್ಟಡದಲ್ಲಿ ಸರಿಯಾದ ಗಾಳಿ- ಬೆಳಕಿನ ವ್ಯವಸ್ಥೆ ಇಲ್ಲ, ಕೂರಲು ಟೇಬಲ್ ಖುರ್ಚಿ ವ್ಯವಸ್ಥೆಯಿಲ್ಲ, ಗ್ರಂಥಾಲಯದಲ್ಲಿ ಕೆಲವೇ ಮಂದಿ ರಚಿಸಿರುವ ಸಾಧಕರ ಕುರಿತ ಪುಸ್ತಕಗಳ ಸಂಗ್ರಹವಿದೆ. ಅಲ್ಲದೇ ದಿನಪತ್ರಿಕೆಗಳ
ಪೂರೈಕೆಯೂ ಕೇವಲ ಒಂದು ಎರಡು ಮಾತ್ರ. ವಾರಪತ್ರಿಕೆ, ಮಾಸಪತ್ರಿಕೆ, ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳೂ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
MUST WATCH
ಹೊಸ ಸೇರ್ಪಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!