ಡಿ.14ರಂದು ಉಚಿತ ಸಾಮೂಹಿಕ ವಿವಾಹ ಸಮಾರಂಭ
Team Udayavani, Nov 18, 2019, 4:17 PM IST
ಶಹಾಪುರ: ಮಾಜಿ ಸಚಿವ ದಿ| ಬಾಪುಗೌಡ ದರ್ಶನಾಪುರ ಅವರ 31ನೇ ಪುಣ್ಯಸ್ಮರಣೆ ಸ್ಮರಣಾರ್ಥ ಡಿ. 14ರಂದು ನಗರದ ರಾಖಂಗೇರಾ ಗ್ರಾಮದಲ್ಲಿನ ವಗ್ಗರಾಯಣ್ಣ ಮುತ್ಯಾನವರ ಸನ್ನಿಧಾನದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಲಾಗಿದೆ ಎಂದು ಬಿಲ್ವಂಕೊಂಡಿಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ನಗರದ ಬಿಲ್ವಂಕೊಂಡಿಮಠದಲ್ಲಿ ನಡೆದ ಸಾಮೂಹಿಕ ವಿವಾಹದ ಕರ ಪತ್ರ ಬಿಡುಗಡೆ ಮಾಡಿ ಸ್ವಾಮೀಜಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಅಗತ್ಯಗಿಂತ ಹೆಚ್ಚಾಗಿ ಮದುವೆ ಸಮಾರಂಭಗಳಲ್ಲಿ ಖರ್ಚು ಮಾಡುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ಬಡವರು ಮಕ್ಕಳ ಮದುವೆಗೆ ಜೀವಮಾನವಿಡಿ ದುಡಿದು ಕೂಡಿಟ್ಟ ಹಣ ಖರ್ಚು ಮಾಡಿದರೂ ಸಾಲ ಅನಿವಾರ್ಯವಾಗಿದೆ. ಇದಕ್ಕೆಲ್ಲ ಸರಳ ಉಚಿತ ಸಾಮೂಹಿಕ ಮದುವೆಯೇ ಮದ್ದು ಎಂದು ಹೇಳಿದರು.
ದಿ| ಬಾಪುಗೌಡ ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ನೂರಾರು ಬಡ ಕುಟುಂಬಗಳ ಬದುಕಿಗೆ ಅವರು ದಾರಿ ದೀಪವಾಗಿದ್ದಾರೆ. ಇಂದಿಗೂ ಪ್ರತಿ ಹಳ್ಳಿಯಲ್ಲಿ ಬಾಪುಗೌಡರ ಹೆಸರೇಳಿ ದೀಪ ಮೂಡಿಸುವಂತೆ ಕುಟುಂಬಗಳನ್ನು ನಾವೆಲ್ಲ ಕಾಣಬಹುದು. ಅಂತಹ ಮಹಾನ್ ವ್ಯಕ್ತಿ ಪುಣ್ಯಸ್ಮರಣೆ ಅಂಗವಾಗಿ ಪುಣ್ಯದ ಕೆಲಸ ಮಾಡುವ ಮೂಲಕ ಅವರಿಗೆ ನಮನಗಳನ್ನು ಸಲ್ಲಿಸಬೇಕು ಎಂಬ ಉದ್ದೇಶದಿಂದ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮ ಪಕ್ಷಾತೀತ ಮತ್ತು ಜಾತ್ಯತೀತವಾಗಿದೆ. ಇಲ್ಲಿ
ಬಾಪುಗೌಡರು ಈ ಹಿಂದೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಅವರ ಪುಣ್ಯಸ್ಮರಣೆ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ವಿನಃ ಇಲ್ಲಿ ಯಾವುದೇ ರಾಜಕೀಯ, ಪಕ್ಷ, ಪಂಥ ಎಂಬ ಭಿನವಿಲ್ಲ ಎಂದು ಹೇಳಿದದರು.
ಮಡ್ನಾಳ ಗ್ರಾಮದ ಅಲ್ಲಮಪ್ರಭುಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಸರಳ ಸಾಮೂಹಿಕ ವಿವಾಹ ಈಗಿನ ಕಾಲದಲ್ಲಿ ಅಗತ್ಯವಿದ್ದು, ಇದೊಂದು ಉತ್ತಮ ಕಾರ್ಯವಾಗಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಿದೆ. ಕಳೆದ ಎರಡು ಮೂರು ವರ್ಷಗಳಿಂದ ರೈತರು ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿದ್ದಾರೆ. ನೆರೆ ಹಾವಳಿ, ಅತಿವೃಷ್ಠಿ, ಅನಾವೃಷ್ಠಿ ಹೀಗೆ ಸಾಲು ಸಾಲು ಕಷ್ಟಗಳಲ್ಲಿ ಳುಗಿರುವಾಗ ಮನೆಯಲ್ಲಿ ವಯಸ್ಸಿಗೆ ಬಂದ ಮಕ್ಕಳ ಮದುವೆ ಮಾಡುವುದು ಕಷ್ಟದ ಕೆಲಸ. ಹೀಗಾಗಿ ಪ್ರತಿ ಗ್ರಾಮಕ್ಕೂ ಈ ಕುರಿತು ಮಾಹಿತಿ ಹೋಗಬೇಕು. ಯಾವುದೇ ಹಿಂದೆ ಮುಂದೆ ನೋಡದೇ ಸಾಮೂಹಿಕ ವಿವಾಹದಲ್ಲಿ ತಮ್ಮ ಮಕ್ಕಳನ್ನು ಮದುವೆಯಾಗಲು ಪ್ರೇರಿಪಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ವಿಶ್ವನಾಥರಡ್ಡಿ ಪಾಟೀಲ ದರ್ಶನಾಪುರ, ಬಸವರಾಜ ಹೇರುಂಡಿ, ವಸಂತಕುಮಾರ ಸುರಪುರಕರ್, ರೇವಣಸಿದ್ದಪ್ಪ ಕಲಬುರ್ಗಿ, ರವಿಕುಮಾರ ಎದುರಮನಿ, ಮಹಾದೇವಯ್ಯ ಸ್ವಾಮಿ, ಶಿವುಕುಮಾರ ಕನ್ಯಾಕೋಳೂರ, ತಿರುಪತಿ ಬಾಣತಿಹಾಳ, ಶಿವುಕುಮಾರ ಬಿಲ್ಲಂಕೊಂಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ