ಬಿಸಿಲಿನ ತಾಪಕ್ಕೆ ತತ್ತರಿಸಿದ ಜನ-ಜಾನುವಾರು
ಮೇವಿಗಾಗಿ ಪರದಾಟ
Team Udayavani, May 18, 2019, 4:33 PM IST
ಶಹಾಪುರ: ಸಗರ ಗ್ರಾಮ ಪ್ರದೇಶದಲ್ಲಿ ಮೇವಿಗೆ ಅಲೆಯುತ್ತಿರುವ ಜಾನುವಾರುಗಳು.
ಶಹಾಪುರ: ಬೇಸಿಗೆ ದಿನಗಳು ಇನ್ನೂ ಹದಿನೈದು ದಿನ ಇವೆ. ಆದರೆ ಬಿಸಿಲಿನ ತಾಪಕ್ಕೆ ಜನ ಆತಂಕಗೊಂಡು ರಸ್ತೆಗಿಳಿಯದೆ ಮನೆ ಸೇರಿರುವುದು, ಗಿಡ ಮರಗಳ ನೆರಳ ಆಸರೆ ಪಡೆದಿರುವುದು ಕಂಡು ಬರುತ್ತಿದೆ.
ನಗರದ ಹಲವು ಹವಾ ನಿಯಂತ್ರಿತ ಹೋಟೆಲ್ಗಳಲ್ಲಿ ಜನ ತಂಪು ಪಾನೀಯ ಕುಡಿದು ಕಾಲ ಕಳೆಯುತ್ತಿದ್ದಾರೆ. ಹಲವಡೆ ಎಳೆ ನೀರು, ಐಸ್ ಕ್ರೀಮ್ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ದಿನ ಕಳೆದಂತೆ ಬಿಸಿಲಿನ ಕಾವು ಏರುತ್ತಿದೆ. ಬಿಸಲಿನ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಸದಾ ಜನ ಜಂಗುಳಿಯಿಂದ ಕೂಡಿರುತ್ತಿದ್ದ ನಗರ ಬಿಸಿಲ ತಾಪಕ್ಕೆ ಹೆದರಿದ ಜನ ಹೊರ ಬರುತ್ತಿಲ್ಲ.
ಜಾನುವಾರುಗಳ ಪರದಾಟ: ಮೇವು ನೀರು ಇಲ್ಲದೆ ಜಾನುವಾರುಗಳು ಪರದಾಡುವಂತಾಗಿದೆ. ಅಡವಿಯಲ್ಲಿ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಬಾಯಾರಿಕೆ ನೀಗಿಸಿಕೊಳ್ಳಲು ನೀರು ದೊರೆಯುತ್ತಿಲ್ಲ. ಈ ನಡುವೆ ಬಿಸಿಲನ ತಾಪ ಬೇರೆ, ಹೀಗಾಗಿ ಜಾನುವಾರುಗಳು ತತ್ತರಿಸಿ ಹೋಗಿವೆ. ಪಶು ಇಲಾಖೆಯವರು ಮೇವು ಆಹಾರಕ್ಕಾಗಿ ನಗರದಲ್ಲಿ ಎಲ್ಲೆಂದರಲ್ಲಿ ಅಲೆಯುವ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕಿದೆ.
ನೆರಳಿನ ವ್ಯವಸ್ಥೆ ಮಾಡಲಿ
ನಗರದ ಪ್ರಮುಖ ರಸ್ತೆ ಹಾಗೂ ತರಕಾರಿ ಮಾರುಕಟ್ಟೆ ಸೇರಿದಂತೆ ಪ್ರಮುಖ ವೃತ್ತಗಳ ಬದಿಯಲ್ಲಿ ಹಸಿರು ಹೊದಿಕೆಯಿಂದ ಸಮರ್ಪಕವಾಗಿ ಟೆಂಟ್ ಹಾಕುವ ಮೂಲಕ ಸಾರ್ವಜನಿಕರಿಗೆ ಬಿಸಿಲಿನಿಂದ ವಿಶ್ರಾಂತಿ ಪಡೆಯಲು ವಿಜಯಪುರ ಮಾದರಿಯಲ್ಲಿ ನಗರದಲ್ಲಿಯೂ ಅಳವಡಿಸಬೇಕು ಎಂದು ಪೌರಾಯುಕ್ತರಲ್ಲಿ ಬಿಜೆಪಿ ಮುಖಂಡ ಗುರು ಕಾಮಾ ಮನವಿ ಮಾಡಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ಸುರಪುರ ನಗರಗಳಲ್ಲಿ ಜನರು ಒಂದಿಷ್ಟು ವಿಶ್ರಾಂತಿ ಪಡೆಯಲು ರಸ್ತೆ ಬದಿ ನೆರಳಿನ ಪರದೆ ಅಳವಡಿಸುವ ಕಾರ್ಯ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಬೇಕು. ಕರ್ನಾಟಕದಲ್ಲಿಯೇ ಬಿಸಿಲು ನಾಡು ಎಂದು ಪ್ರಸಿದ್ಧ ಪಡೆದ ಹೈಕ ಪ್ರದೇಶದಲ್ಲಿ ಪ್ರಸ್ತುತ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದು, ವಿಜಯಪುರ ಮಾದರಿಯಲ್ಲಿ ನೆರಳಿನ ವ್ಯವಸ್ಥೆ ಮಾಡುವ ಅಗತ್ಯವಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್