ಸೌಲಭ್ಯ ಕಲ್ಪಿಸಲು ಬದ್ಧ
ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಮುತ್ಯಾಗಿದೆ: ದರ್ಶನಾಪುರ
Team Udayavani, Aug 5, 2019, 11:23 AM IST
ಶಹಾಪುರ: ಹಳೆಪೇಟೆಯ ವಗ್ಗರಾಯಣ್ಣನ ನೂತನ ಮಂದಿರವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.
ಶಹಾಪುರ: ಹಳೆಪೇಟೆಯ ವಗ್ಗರಾಯಣ್ಣ ಮುತ್ಯಾನ ನೂತನ ಮಂದಿರ ನಿರ್ಮಾಣ ಮತ್ತು ವಿಶೇಷ ಪೂಜೆ ಶ್ರದ್ಧೆ ಭಕ್ತಿಯಿಂದ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದ ಇಲ್ಲಿನ ಜನರ ಇಷ್ಟಾರ್ಥಗಳ ಈಡೇರಿಸುವ ಜೊತೆಗೆ ಈ ಕ್ಷೇತ್ರದಲ್ಲಿ ಸಮೃದ್ಧ ಮಳೆ ಬೆಳೆಯಾಗಿ ರೈತರ ಕಷ್ಟ ನಿವಾರಿಸಲಿ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಹಳಪೇಟೆಯಲ್ಲಿ ವಗ್ಗರಾಯಣ್ಣ ಮುತ್ಯಾನ ಮಂದಿರ ಉದ್ಘಾಟಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಸಮಾಜ ಸಶಕ್ತವಾಗಬೇಕು. ಕಾಯಕ ನಿಷ್ಠೆ, ಧಾರ್ಮಿಕ ನಂಬಿಕೆ ಜೊತೆ ಶೈಕ್ಷಣಿಕವಾಗಿ ಪ್ರತಿಯೊಬ್ಬರೂ ಮುಂದೆ ಬರಬೇಕು. ಮಂದಿರದ ಪರಿಸರದಲ್ಲಿ ಸಸಿ ನೆಟ್ಟು ವಾತಾವರಣ ಶುಚಿತ್ವವಾಗಿಟ್ಟುಕೊಂಡು ಭಕ್ತರಿಗೆ ಇದೊಂದು ನೆಮ್ಮದಿ ನೀಡುವ ತಾಣವಾಗಿ ಹೊರ ಹೊಮ್ಮಲಿ. ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಈ ಕ್ಷೇತ್ರಾಧಿಪತಿ ವಗ್ಗರಾಯಣ್ಣ ಮುತ್ಯಾಗಿದೆ. ಅವರ ಪವಾಡಗಳನ್ನು ಕೇಳಿದ್ದೇನೆ. ಅದರಂತೆ ಈ ಕ್ಷೇತ್ರದ ಸುತ್ತಮುತ್ತಲೂ ಉತ್ತಮ ವಾತಾವರಣ ಕಲ್ಪಿಸಿದ್ದಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಒಂದಿಷ್ಟು ಸಮಯ ಕ್ಷೇತ್ರದಲ್ಲಿ ಕಳೆದು ನೆಮ್ಮದಿಯಿಂದ ಮನೆಗೆ ತೆರಳುವಂತಾಗಬೇಕು. ಅದಕ್ಕೆ ಬೇಕಾದ ಸೌಲಭ್ಯ ಪಡೆದುಕೊಂಡು ಅಭಿವೃದ್ಧಿ ಪಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ವಿವರ ನೀಡಿದ ಅವರು, ಮೂಲಭೂತ ಸೌಕರ್ಯಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಪ್ರತಿಯೊಂದು ವಾರ್ಡ್ ನಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳುವ ಕುರಿತು ಗಮನಕ್ಕೆ ತಂದರೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಕುರುಬ ಸಮಾಜದ ಯುವಕರು ಸಿದ್ಧಗೊಳಿಸಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ನಾಮಫಲಕ ಉದ್ಘಾಟಿಸಿದರು. ಬಡಾವಣೆ ವತಿಯಿಂದ ಶಾಸಕ ದರ್ಶನಾಪು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಗ್ಗರಾಯಣ್ಣ ಮುತ್ಯಾನ ಸನ್ನಿಧಾನದಲ್ಲಿ ವಿಶೇಷ ಪೂಜೆ ಅಲಂಕಾರ ಜರುಗಿತು. ಆಗಮಿಸಿದ ಜನರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಾಸಕರು ಸ್ಥಳೀಯ ಈಶ್ವರ ದೇವಸ್ಥಾನ ಮತ್ತು ಶ್ರೀ ರಾಘವೇಂದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಅಯ್ಯಪ್ಪ ಜಂಗಳಿ, ಅನಂತರಾವ ದೇಶಪಾಂಡೆ, ಶಿವು ಕುಮಾರ, ವಸಂತ ಸುರಪುರಕರ್, ಹಣಮಂತ್ರಾಯಗೌಡ ರಾಕಂಗೇರಾ, ಭೀಮರಾಯ ವಗ್ಗನೋರ, ನಾಗಪ್ಪ ವಗ್ಗನೋರ, ದ್ಯಾವಣ್ಣ ಮಾಸ್ತರ ಚಿಟ್ಟೆನೋರ, ಚಂದ್ರಾಮಪ್ಪ, ಹೈಯಾಳಪ್ಪ, ಹೊನ್ನಪ್ಪ ಪೂಜಾರಿ, ಯಲ್ಲಪ್ಪ ಪೂಜಾರಿ, ಸುಬ್ಬಣ್ಣ ಪೂಜಾರಿ, ರಾಯಪ್ಪ ಪೂಜಾರಿ, ಸಂಗಪ್ಪ, ಬಸವರಾಜ, ಅಯ್ಯಪ್ಪ ಪೂಜಾರಿ, ಸಾದಪ್ಪ ಪೂಜಾರಿ, ರಾಜಣ್ಣ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ