ದಂಡದ ಹೊರೆ ತಪ್ಪಿಸಿಕೊಳ್ಳಲು ದಾಖಲೆಯ ಮೊರೆ!

ಜಿಲ್ಲೆಯಲ್ಲಿ 20 ಎಮಿಶನ್‌ ಟೆಸ್ಟ್‌ ಕೇಂದ್ರ ದುಬಾರಿ ದಂಡಕ್ಕೆ ಹೆದರುತ್ತಿರುವ ಜನ

Team Udayavani, Sep 14, 2019, 3:58 PM IST

14-Spectember-18

ಶಿವಮೊಗ್ಗ: ಎಮಿಷನ್‌ ಟೆಸ್ಟ್‌ ಕೇಂದ್ರದ ನೋಟ.

ಶರತ್‌ ಭದ್ರಾವತಿ
ಶಿವಮೊಗ್ಗ:
ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಜಾರಿ ನಂತರ ಜಿಲ್ಲೆಯಲ್ಲಿ ದಂಡದ ಹೊರೆ ಹೆಚ್ಚಾಗುತ್ತಿದೆ. ಇದರಿಂದ ಕಂಗೆಟ್ಟ ವಾಹನ ಸವಾರರು ಸಮರ್ಪಕ ದಾಖಲೆ ಪಡೆಯಲು ಆರ್‌ಟಿಒ, ಇನ್ಶೂರೆನ್ಸ್‌, ಎಮಿಷನ್‌ ಟೆಸ್ಟ್‌ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 20 ಎಮಿಷನ್‌ ಟೆಸ್ಟ್‌ (ಹೊಗೆ ತಪಾಸಣಾ ಕೇಂದ್ರ) ಕೇಂದ್ರಗಳಿದ್ದು ಎಲ್ಲವೂ ಖಾಸಗಿ ಪಾಲುದಾರಿಕೆಯಲ್ಲಿ ನಡೆಯುತ್ತಿವೆ. ಅದರಲ್ಲಿ ಅತಿ ಹೆಚ್ಚು ಶಿವಮೊಗ್ಗ ನಗರದಲ್ಲೇ ಇವೆ. ಈ ಹಿಂದೆ ಎಫ್‌ಸಿ, ಡಿಎಲ್ಗೆ ಕಡ್ಡಾಯ ಮಾಡಿದ್ದರಿಂದ ನಿಯಮಿತವಾಗಿ ಜನ ಬರುತ್ತಿದ್ದರು, ಈಗ ಟ್ರಾಫಿಕ್‌ ಪೊಲೀಸರು ಎಲ್ಲೆಂದರಲ್ಲಿ ದಂಡ ಹಾಕುತ್ತಿರುವ ಕಾರಣ, ಅದರಲ್ಲೂ ದುಬಾರಿ ದಂಡಕ್ಕೆ ಹೆದರಿ ದಾಖಲೆ ಪಡೆಯಲು ಮುಂದಾಗುತ್ತಿದ್ದಾರೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಕಾರಣದಿಂದ ಟ್ರಾಫಿಕ್‌ ಪೊಲೀಸರು ಬ್ಯುಸಿ ಇದ್ದ ಕಾರಣ ಅಷ್ಟೊಂದು ಕಟ್ಟು ನಿಟ್ಟಾಗಿ ಜಾರಿಯಾಗಿರಲಿಲ್ಲ. ಸೆ.12ರಿಂದ ಕಟ್ಟುನಿಟ್ಟಾಗಿ ಜಾರಿ ಮಾಡುವುದಾಗಿ ಈಗಾಗಲೇ ಪೊಲೀಸ್‌ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಬಹುಶಃ ಇನ್ಮುಂದೆ ಆರ್‌ಟಿಒ, ಇನ್ಯೂರನ್ಸ್‌, ಎಮಿಷನ್‌ ಟೆಸ್ಟ್‌ ಕೇಂದ್ರಗಳ ಬಳಿ ಜನಜಂಗುಳಿ ಹೆಚ್ಚಾಗಬಹುದು.

ಶೇ.10ರಷ್ಟು ಹೆಚ್ಚಳ: ಎಮಿಷನ್‌ ಟೆಸ್ಟ್‌ ಕೇಂದ್ರಗಳಿಗೆ ವಾರದಿಂದ ವಾಹನ ಸವಾರರ ಆಗಮನ ಕೊಂಚ ಏರಿಕೆ ಇದೆ. ಮೊದಲು 25-30 ಜನ ಬರುತ್ತಿದ್ದರು. ಈಗ 35 ಜನರವರೆಗೆ ಬರುತ್ತಿದ್ದಾರೆ. ಅಷ್ಟೇನೂ ಪ್ರಭಾವ ಬೀರಿಲ್ಲ ಎನ್ನುತ್ತಾರೆ ವಿನೋಬನಗರ ಎಸ್‌.ಆರ್‌. ಎಮಿಷನ್‌ ಟೆಸ್ಟ್‌ ಸೆಂಟರ್‌ ಮಾಲೀಕ ಮಂಜುನಾಥ್‌. ಈಗ ಬಿಎಸ್‌ 4 ವಾಹನಗಳಿಗೆ ಒಂದು ವರ್ಷ ಎಮಿಷನ್‌ ಫ್ರೀ ಇರುತ್ತದೆ. ಆಮೇಲೆ ಪ್ರತಿ ತಿಂಗಳಿಗೊಮ್ಮೆ ಮಾಡಿಸಬೇಕು. ಆದರೆ ಎಲ್ಲೂ ಇದನ್ನು ಕಡ್ಡಾಯ ದಾಖಲೆ ಎಂದು ಪರಿಗಣಿಸಿಲ್ಲ. ಹಾಗಾಗಿ ಯಾರೂ ರಿನಿವಲ್ ಮಾಡಿಸುವುದಿಲ್ಲ. ಹೊಸ ವಾಹನಗಳಾದರೂ ಕಲಬೆರಕೆ ಇಂಧನ, ಆಯಿಲ್ ಕಾರಣದಿಂದ ವಾಯು ಮಾಲಿನ್ಯ ಉಂಟು ಮಾಡುತ್ತವೆ. ಆದರೆ ಟೆಸ್ಟ್‌ ಮಾಡಿಸಿದರೆ ಇದನ್ನು ಪತ್ತೆ ಹಚ್ಚಬಹುದು. ಟ್ರಾಫಿಕ್‌ ಪೊಲೀಸರೂ ಇದನ್ನು ಕಡ್ಡಾಯ ದಾಖಲೆ ಎಂದು ಪರಿಗಣಿಸುವುದಿಲ್ಲ. ಇನ್ಮುಂದೆ ದಂಡ ಹೆಚ್ಚಾದರೆ ಜನ ಹೆಚ್ಚಾಗಿ ಬರಬಹುದು ಎನ್ನುತ್ತಾರೆ ಅವರು.

ಕರ್ನಾಟದಲ್ಲಿ 2 ವರ್ಷದಿಂದ ಆನ್‌ಲೈನ್‌ನಲ್ಲೇ ಎಮಿಷನ್‌ ಟೆಸ್ಟ್‌ ದಾಖಲೆ ಕೊಡಲಾಗುತ್ತಿದೆ. ಮೊದಲಾದರೆ ಕೈಯಲ್ಲಿ ಬರೆದುಕೊಡುತ್ತಿದ್ದರು. ವಂಚನೆಗೆ ಅವಕಾಶ ಇತ್ತು. ಈಗ ಯಾರೂ ಏನು ಮಾಡಲು ಸಾಧ್ಯವಿಲ್ಲ. ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಈಗಲು ಪೇಪರ್‌ ವ್ಯವಸ್ಥೆ ಜಾರಿಯಲ್ಲಿದೆ ಎಂದರು ಅವರು.

ಇಷ್ಟು ದಿನ ಎಮಿಷನ್‌ ಟೆಸ್ಟ್‌ ಬಗ್ಗೆ ಜನ ನಿರ್ಲಕ್ಷ್ಯ ವಹಿಸುತ್ತಿದ್ದರು. ಮೊದಲು 35 ರಿಂದ 40 ಜನ ಬರುತ್ತಿದ್ದರು. ಈಗ 50 ರವರೆಗೂ ಹೋಗಿದೆ.ಪೊಲೀಸರು ಹಿಡಿಯಲಿಲ್ಲ ಅಂದ್ರೆ ಯಾರೂ ಬರಲ್ಲ ಎನ್ನುತ್ತಾರೆ ಎಮಿಷನ್‌ ಕೇಂದ್ರದ ಮಹೇಶ್‌.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.