ಕರೂರಿನಲ್ಲಿ ವಾಹನ ಪೂಜ
divali special
Team Udayavani, Nov 5, 2021, 5:50 PM IST
ಸಾಗರ: ತಾಲೂಕಿನ ಕರೂರಿನ ದುರ್ಗಾಂಬಾಹಾಗೂ ಮಹಾ ಗಣಪತಿ ದೇವಸ್ಥಾನದಲ್ಲಿದೀಪಾವಳಿಯ ಅಮಾವಾಸ್ಯೆ ಹಾಗೂ ಪಾಡ್ಯದದಿನ ಪೂಜೆ ಹೊಂದುವ ವಾಹನಗಳ ಮಾಲೀಕರಿಗೆಶ್ರೇಯಸ್ಸಾಗುತ್ತದೆ ಎಂಬ ಪ್ರತೀತಿಯ ಹಿನ್ನೆಲೆಯಲ್ಲಿಗುರುವಾರ ನೂರಾರು ವಾಹನಗಳ ಪೂಜೆ ನಡೆಯಿತು.
ಹೂವಿನ ದಂಡೆಗಳಿಂದ ಅಲಂಕೃತವಾದಕ್ಯಾಂಟರ್, ವ್ಯಾನ್, ಬೈಕ್, ಕಾರುಗಳಿಗೆ ಪೂಜೆನೆರವೇರಿತು.ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತುಮರಿಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣಕರೂರು ಮಾತನಾಡಿ, ಐದು ದಶಕಗಳಹಿಂದಿನಿಂದಲೂ ಈ ಪ್ರವೃತ್ತಿ ಕಂಡುಬಂದಿದೆ.
ಇಲ್ಲಿನ ದೇವಸ್ಥಾನಗಳಲ್ಲಿ ನಡೆದ ವಾಣಿಜ್ಯ ವಾಹನಗಳಪೂಜೆಯ ನಂತರ ಮುಂದಿನ ವರ್ಷಗಳಲ್ಲಿಒಂದಕ್ಕೆರಡು ವಾಹನಗಳಾಗುತ್ತವೆ. ಆಕಸ್ಮಿಕಗಳು,ಅವಘಡಗಳು ಆಗುವುದಿಲ್ಲ. ವಾಹನ ಮಾಲೀಕರಿಗೆಶ್ರೇಯಸ್ಸಾಗುತ್ತದೆ ಎಂಬ ನಂಬಿಕೆಯಿದೆ. ಅದುನಿಜವಾಗುತ್ತಿರುವುದರಿಂದಲೇ ಈ ಸಮಯದಪೂಜೆಗೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.ಈ ಹಿಂದೆ ಇದೇ ದೇವಸ್ಥಾನಗಳಲ್ಲಿ ಅವತ್ತಿನ ಕಾಲದಎತ್ತಿನ ಗಾಡಿಗಳ ಪೂಜೆ ನಡೆಯುತ್ತಿತ್ತು.
ಬದಲಾದಕಾಲಘಟ್ಟದಲ್ಲಿ ಬೈಕ್ ಹಾಗೂ ಕಾರು, ಟ್ರಕ್,ಜೀಪ್ ಮೊದಲಾದವುಗಳ ಪೂಜೆ ನಡೆಯುತ್ತಿದೆ.ಇಲ್ಲಿನ ದೇವಸ್ಥಾನಗಳನ್ನು ಮೂರು ಸುತ್ತು ಸುತ್ತಿ,ಗ್ರಾಮಸ್ಥರಿಗೆಲ್ಲ ಸಿಹಿ ಹಂಚಿ ಪೂಜೆ ಸಲ್ಲಿಸಲಾಗುತ್ತದೆ.ದೊಡ್ಡಬ್ಬದ ಸಂದರ್ಭದ ಎರಡು ದಿನ ಈ ಪೂಜೆನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ
Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್ವೈ
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
MUST WATCH
ಹೊಸ ಸೇರ್ಪಡೆ
ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ