ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದು 2.30 ಲಕ್ಷ ರೂ. ವಂಚನೆ
Team Udayavani, Jun 17, 2020, 9:36 AM IST
ಸಾಗರ: ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡ ಬಂದ ನಾಲ್ವರು ತಾಲೂಕಿನ ಜನ್ನೆಹಕ್ಲು ನಿವಾಸಿ ಸಾಫ್ಟ್ ವೇರ್ ಡೆವಲಪರ್ ಆಗಿ ಮನೆಯಲ್ಲೇ ಕೆಲಸ ಮಾಡುತ್ತಿದ್ದ ವಿಶ್ವನಾಥ್ ಎಂಬುವರಿಗೆ 2.30 ಲಕ್ಷ ರೂ. ವಂಚಿಸಿದ್ದಾರೆ.
ಜೂ.12ರಂದು ಬೆಳಗ್ಗೆ 6.40ರ ಸುಮಾರಿಗೆ ವಿಶ್ವನಾಥ್ ಅವರ ಮನೆಗೆ ಬಂದ ನಾಲ್ವರು ಅಪರಿಚಿತರು ನಾವು ಐಟಿ ಇಲಾಖೆಯವರಾಗಿದ್ದು, ನಿಮ್ಮ ವ್ಯವಹಾರ ಹಾಗೂ ಬ್ಯಾಂಕಿಗೆ ಸಂಬಂಧಪಟ್ಟ ಮಾಹಿತಿ ನೀಡುವಂತೆ ಕೇಳಿದ್ದಾರೆ. ಒಂದೊಮ್ಮೆ ನೀವು ಮಾಹಿತಿ ನೀಡದೆ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಂತರ ವಿಶ್ವನಾಥ್ ಅವರಿಗೆ ಸೇರಿದ್ದ ಲ್ಯಾಪ್ ಟಾಪ್ನಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆಯುವುದರ ಜತೆಗೆ ವಿಶ್ವನಾಥ್ ತಮ್ಮ ವಿನಯಕುಮಾರ್ ಅವರ ಎಲ್ಲ ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಣ್ಣ-ತಮ್ಮನನ್ನು ಕಾರಿನಲ್ಲಿ ಸಿದ್ದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಕರೆದೊಯ್ದು ವಿಶ್ವನಾಥ್ ಹೆಸರಿನಲ್ಲಿ 50 ಸಾವಿರ ರೂ., ನಂತರ ತಾಳಗುಪ್ಪದಲ್ಲಿ ವಿನಯಕುಮಾರ್ ಖಾತೆಯಿಂದ 1.40 ಲಕ್ಷ, ವಿಶ್ವನಾಥ್ ಅವರ ಎಟಿಎಂ ಕಾರ್ಡ್ ಪಡೆದು 40 ಸಾವಿರ ರೂ.ಗಳನ್ನು ಪಡೆದಿದ್ದಾರೆ. ಮನೆಗೆ ಕರೆದುಕೊಂಡು ಬಂದು ಉಳಿದ ಶೇ.50 ಹಣವನ್ನು 15 ದಿನದೊಳಗೆ ತಮಗೆ ತಲುಪಿಸಬೇಕೆಂದು ಎಚ್ಚರಿಕೆ ನೀಡಿ ವಿನಯಕುಮಾರ್ ಖಾತೆಗೆ ಸಂಬಂಧಿಸಿದಂತೆ 2 ಚೆಕ್ ಸಹಿ ಮಾಡಿಸಿಕೊಂಡು ಪಡೆದಿದ್ದಾರೆ. ಜತೆಗೆ ಎರಡು ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡು ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳ ಫೋಟೋ ಪಡೆದು ನಾಲ್ವರೂ ಪರಾರಿಯಾಗಿದ್ದಾರೆ. ಈ ಸಂಬಂಧ ವಿಶ್ವನಾಥ್ ಅವರು ಸೋಮವಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು