ವಿಕಲಚೇತನ ಬಾಲಕಿಗೆ ಸ್ಕೂಟರ್ ಕೊಡಿಸಿದ ಕಿಮ್ಮನೆ
Team Udayavani, Jul 13, 2017, 2:39 PM IST
ತೀರ್ಥಹಳ್ಳಿ: ಈ ಬಾಲಕಿಗೆ ಹುಟ್ಟಿನಿಂದಲೇ ವಯಸ್ಸಿಗೆ ಸರಿಯಾಗಿ ದೇಹ ಬೆಳೆಯದ ಸಮಸ್ಯೆ. ಈಗ 9ನೇ ತರಗತಿಯವರೆಗೆ ಬಂದಿದ್ದರೂ ದೇಹ ಮಾತ್ರ ಎರಡೂವರೆ ಅಡಿಯನ್ನು ಮೀರಿ ಬೆಳೆದಿಲ್ಲ. ದೇಹ ಬೆಳೆದಿರದಿದ್ದರೂ ಆತ್ಮವಿಶ್ವಾಸ, ಮನಸ್ಸು ದೃಢವಾಗಿದ್ದು, ವಿದ್ಯಾಭ್ಯಾಸ ಕಲಿತು ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಹಂಬಲ. ಆದರೆ, ಅದಕ್ಕೆ ಅಡ್ಡಿಯಾಗುತ್ತಿದ್ದುದು ಆಕೆ
ಕಲಿಯಲು ಹೋಗುತ್ತಿದ್ದ ಶಾಲೆಯ ಅಂತರ. ದಿನನಿತ್ಯ ಆಕೆ 4 ಕಿಲೋಮೀಟರ್ ದೂರ ಇಲ್ಲಿನ ಕಟ್ಟೇಹಕ್ಕಲಿನ ತುಂಬ್ರಮನೆ
ಸರ್ಕಾರಿ ಪ್ರೌಢಶಾಲೆಯವರೆಗೆ ಹೋಗಿಬರಬೇಕಾಗಿತ್ತು. ಬಸ್ಸಿನ ಸೌಲಭ್ಯ ಇದೆಯಾದರೂ ಬಸ್ಸನ್ನು ಹತ್ತಿ ಇಳಿಯುವುದು ಆಕೆಗೆ ಸಾಧ್ಯವಿರಲಿಲ್ಲ. ಇನ್ನು ಆಕೆಯ ಓದಿನ ಹಂಬಲಕ್ಕೆ ಸ್ಪಂದಿಸಿ ಸ್ವಂತ ವಾಹನವನ್ನು ಕೊಡಿಸುವ ಸಾಮರ್ಥ್ಯವೂ ಆಕೆಯ ಬಡ
ಪೋಷಕರಿಗಿರಲಿಲ್ಲ.
ಆಕಸ್ಮಿಕವಾಗಿ ಶಾಸಕ ಕಿಮ್ಮನೆ ರತ್ನಾಕರ್ ಆ ಊರಿಗೆ ಭೇಟಿ ನೀಡಿದಾಗ ಚಟುವಟಿಕೆಯ ಚಿಲುಮೆಯಂತಿದ್ದ ಈ ಬಾಲಕಿಯನ್ನು ಕಂಡು ಮನಸ್ಸು ಕರಗಿ ಮಾತನಾಡಿಸಿದ್ದಾರೆ. ಮಾತನಾಡಿಸುತ್ತಾ ಹೋದಂತೆ ಆಕೆಯ ಓದುವ ಅದಮ್ಯ ಹಂಬಲ ಮತ್ತು ತಂದೆ ಮಂಜುನಾಥ
ಶೆಟ್ಟಿ, ತಾಯಿ ಸುಮರ ಬಡತನದ ಬವಣೆಯು ಅರ್ಥವಾಯಿತು. ಬಳಿಕ ಶಾಸಕರ ಕಚೇರಿಗೆ ಬಾಲಕಿಯನ್ನು ಕಂಡು ಹೋಗುವಂತೆ
ಸೂಚಿಸಿದ ಕಿಮ್ಮನೆ ರತ್ನಾಕರ್, ಇಲಾಖೆಯ ವತಿಯಿಂದ ಯಾವುದಾದರು ಸಹಾಯ ಆ ಬಾಲಕಿಗೆ ದೊರಕಿಸಲು ಸಾಧ್ಯವೆ
ಎಂಬುದನ್ನು ಅ ಧಿಕಾರಿಗಳಲ್ಲಿ ಕೇಳಿದಾಗ ಅಂತಹ ಯಾವ ಯೋಜನೆಯೂ ಸರ್ಕಾರದ ವತಿಯಿಂದ ಲಭ್ಯವಿಲ್ಲ ಎಂಬ ಉತ್ತರ ಬಂದಿದೆ.
ಕೊನೆಗೆ ಇಲಾಖೆಯನ್ನು ವಿಚಾರಿಸಿ ಪ್ರಯೋಜನವಿಲ್ಲ ಎಂದುಕೊಂಡ ಕಿಮ್ಮನೆ ರತ್ನಾಕರ್, ಸ್ವತಃ ತಾವೇ ಬ್ಯಾಂಕಿನಲ್ಲಿ
ಸಾಲಮಾಡಿ ಆಕೆಗೆ ಅಂಗವಿಕಲರು ಉಪಯೋಗಿಸಬಹುದಾದ ತ್ರಿಚಕ್ರ ವಾಹನದಂತಹ ವಿನ್ಯಾಸದ ಹೊಸ ಸ್ಕೂಟರ್ವೊಂದನ್ನು ಕೊಡಿಸಿ ಆಕೆಯ ಓದಿನ ಹಂಬಲಕ್ಕೆ ನೀರೆರೆದಿದ್ದಾರೆ. ಸ್ಕೂಟರ್ನ್ನು ಸೌಮ್ಯಳಿಗೆ ವಿತರಿಸುವ ಸಂದರ್ಭದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ಡಿ.ಎಸ್. ವಿಶ್ವನಾಥ ಶೆಟ್ಟಿ, ಬಗರ್ಹುಕುಂ ಸಮಿತಿ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್, ಪಪಂ ಸದಸ್ಯ ರಾಘವೇಂದ್ರ ಶೆಟ್ಟಿ, ಕಾಂಗ್ರೆಸ್
ಮುಖಂಡರಾದ ಬಂಡೆ ವೆಂಕಟೇಶ್, ಪಡುವಳ್ಳಿ ಹಷೇìಂದ್ರಕುಮಾರ್, ಬಂಕೇರಿ ಫಣಿರಾಜ್, ತಗಡವಳ್ಳಿ ಶ್ರೀಧರ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ