ಗೋ ಸಂರಕ್ಷಣೆಗೆ ಸಕಲ ಸಹಕಾರ
Team Udayavani, May 4, 2018, 11:27 AM IST
ಸಾಗರ: ಗೋ ಸಂರಕ್ಷಣೆಯ ಮಹಾ ಪುಣ್ಯ ಕಾರ್ಯದಲ್ಲಿ ಪೂರ್ಣ ತೊಡಗಿಕೊಂಡ ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮಿಂದ ಸಕಲ ಸಹಕಾರ ಸದಾ ಇದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ನಗರದ ರಾಘವೇಶ್ವರ ಸಭಾ ಭವನದಲ್ಲಿ ಗುರುವಾರ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಭೇಟಿಯಾದ ಅವರು ಅರ್ಧ ಗಂಟೆಯ ಸಮಯ ಗೋ ಹತ್ಯೆ ನಿಷೇಧ, ಗೋ ಸಂರಕ್ಷಣೆ ಹಾಗೂ ಭಾನ್ಕುಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಮಠದ ಸಹಸ್ರ ಗೋವುಗಳ ಗೋಸ್ವರ್ಗದ ಕುರಿತು ಪರಸ್ಪರ ಅಭಿಪ್ರಾಯ ಹಂಚಿಕೊಂಡರು.
ಕರ್ನಾಟಕದಲ್ಲಿ ಇಂತಹ ಕ್ಲಿಷ್ಟ ಕಾಲಘಟ್ಟದಲ್ಲಿಯೂ ಗೋ ಸಂರಕ್ಷಣೆಯ ಹಲವು ಅಭಿಯಾನ, ಅಭಯಾಕ್ಷರ, ಜಾಗೃತಿ ಕೆಲಸಗಳನ್ನು ಇಲ್ಲಿಯ ಗ್ರಾಮದಿಂದಲೇ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಗೋ ರಕ್ಷಣೆ ಎನ್ನುವುದು ಮನುಕುಲದ ರಕ್ಷಣೆಯೂ ಹೌದು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂತಹ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಇದೇ ವೇಳೆ ರಾಘವೇಶ್ವರ ಶ್ರೀಗಳು ಮೇ 27ರ ಭಾನ್ಕುಳಿ ಗೋ ಸ್ವರ್ಗ ಉದ್ಘಾಟನೆ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿ, ಅಲ್ಲಿಯ ಯೋಜನೆಯ ಪೂರ್ಣ ಪಾಠವನ್ನು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ
Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್ವೈ
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು