ರಾಷ್ಟ್ರೀಯ ಗಣರಾಜ್ಯೋತ್ಸವ ಪೆರೆಡ್ ಗೆ ತುಂಗಾ ಮಹಾವಿದ್ಯಾಲಯದ ಅಂಕಿತಾ ಎಸ್ ಆಯ್ಕೆ
Team Udayavani, Dec 18, 2022, 8:28 PM IST
ತೀರ್ಥಹಳ್ಳಿ : ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮ ರಾಷ್ಟ್ರದ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಅನಾವರಣಗೊಳ್ಳುವ ಶೌರ್ಯ, ಸಾಹಸ,ಶಕ್ತಿ ಹಾಗೂ ಭವ್ಯ ಸಾಂಸ್ಕೃತಿಕ ವೈಭವವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಇನ್ನು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೆಂದರೆ ಅದು ಅತ್ಯಂತ ಹೆಮ್ಮೆಯ ಸಂಗತಿಯೇ ಸೈ. ರಾಷ್ಟ್ರೀಯ ಕ್ರೀಡಾ ಮತ್ತು ಯುವಜನ ಇಲಾಖೆಯು ಎಲ್ಲ ರಾಜ್ಯಗಳ ಅಯ್ದ NCC ಹಾಗೂ NSS ನ ಯುವ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ರಾಷ್ಟ್ರೀಯ ಅಖಂಡತೆ ಮತ್ತು ಏಕತೆಗೆ ಬದ್ದರಾಗುವ ಧ್ಯೇಯವನ್ನು ಬಿತ್ತುತ್ತದೆ.
ಆರ್ ಡಿ. ಪೆರೇಡ್ ಗೆ ಆಯ್ಕೆಯಾಗುವುದು ಅಷ್ಟು ಸುಲಭವಂತೂ ಅಲ್ಲ. ಜಿದ್ದಾ ಜಿದ್ದಿನ ಸ್ಪರ್ಧೆ ಇರುವ ಮೂರು ಹಂತಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಥಹಳ್ಳಿ ತುಂಗಾ ಕಾಲೇಜಿನ ಕು. ಅಂಕಿತಾ ಎಸ್ ಆಯ್ಕೆಯಾಗಿರುತ್ತಾರೆ. ತುಂಗಾ ಕಾಲೇಜಿನ NSS ನ ಕ್ರಿಯಾಶೀಲ ಸಂಯೋಜಕರಾದ ಡಾ.ಪ್ರಶಾಂತ್, ಡಾ.ನರೇಂದ್ರ ಹಾಗೂ ಪ್ರೊ.ಸೃಜನ್ ರವರ ಸಮರ್ಥ ಮಾರ್ಗದರ್ಶನ ಬಹುಮುಖ ಪ್ರತಿಭೆಯ ಅಂಕಿತಾಳಿಗೆ ಈ ಅವಕಾಶ ಒದಗಿಸಿದೆ. ದೆಹಲಿಯ ಆರ್.ಡಿ. ಪೆರೇಡ್ ಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದ ಅಂಕಿತಾಳನ್ನು ತುಂಗಾ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ ಸಮೂಹ ಅಭಿನಂದಿಸಿದೆ.
ಅಂಕಿತಾ ತೀರ್ಥಹಳ್ಳಿ ಕುವೆಂಪು ರಸ್ತೆ ನಿವಾಸಿಗಳಾದ ವೇದಾ ಮಾತಾಜಿ ಹಾಗು ಮೆಕ್ಯಾನಿಕ್ ಉದ್ಯೋಗಿ ಸುರೇಶ್ ರವರ ಮಗಳು. ಅಂಕಿತಾ ಪ್ರಾಥಮಿಕ ಶಿಕ್ಷಣವನ್ನು ಸೇವಾಭಾರತಿಯಲ್ಲೂ, ಪ್ರೌಢಶಿಕ್ಷಣವನ್ನು ಡಾ. ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲೂ, ಪಿಯು ಶಿಕ್ಷಣವನ್ನು ವಾಗ್ದೇವಿ ಸಂಸ್ಥೆಯಲ್ಲೂ ಪಡೆದಿದ್ದು ಪ್ರಸ್ತುತ ತುಂಗಾಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
ಲೋಕಸಭಾ ಕಣದಲ್ಲಿ ನಾರಿಶಕ್ತಿ ಪ್ರದರ್ಶನ: ಕಾಂಗ್ರೆಸ್ನಿಂದ 6, ಬಿಜೆಪಿಯಿಂದ 2 ಮಹಿಳೆಯರು
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ