ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಭೀತಿಯಲ್ಲಿ ಕಾಲು ಸಂಕ: ಅಣುವಳ್ಳಿ ಗ್ರಾಮಸ್ಥರ ಆಕ್ರೋಶ
Team Udayavani, Jul 4, 2022, 12:52 PM IST
ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಣುವಳ್ಳಿಯಿಂದ ಮೇಗರವಳ್ಳಿಗೆ ಹೋಗಬೇಕೆಂದರೆ ಅಲ್ಲಿರುವ ಹಳ್ಳವನ್ನು ದಾಟಿಕೊಂಡು ಹೋಗಬೇಕು.
ನಾಲ್ಕು ವರ್ಷಗಳ ಹಿಂದೆ ಈ ಕಾಲು ಸಂಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ನಂತರ ಸಂಪರ್ಕ ಪೂರ್ಣ ಕಡಿತವಾಗಿದ್ದು ಈ ಹಳ್ಳಕ್ಕೆ ಅಲ್ಲಿನ ಗ್ರಾಮಸ್ಥರೆ ಎಲ್ಲಾ ಸೇರಿ ಗ್ರಾಮಪಂಚಾಯಿತಿ ಅನುದಾನ ದಿಂದ ಸತತ ನಾಲ್ಕು ವರ್ಷಗಳಿಂದ ತಾತ್ಕಾಲಿಕವಾಗಿ ಅಡಿಕೆ ಮರದ ಸೇತುವೆ ( ಕಾಲು ಸಂಕ ) ಮಾಡಿಕೊಂಡಿದ್ದು ಅದರಲ್ಲಿ ನೆಡೆದುಕೊಂಡು ಹೋಗುತ್ತಿದ್ದರು ಆದರೆ ಈಗ ಈ ಕಾಲುಸಂಕದಲ್ಲಿ ನಡೆದುಕೊಂಡು ಹೋಗುವುದು ಕಷ್ಟ ಸಾಧ್ಯವಾಗಿದೆ.
ಈ ಹಿಂದೆ ಹೊನ್ನೇತಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಂದಾಳಬೈಲು ಸಮೀಪ ಕಾಲು ಸಂಕದಲ್ಲಿ ಹಳ್ಳ ದಾಟುತ್ತಿರುವಾಗ ಶಾಲಾ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ತೇಲಿ ಹೋದ ನಿದರ್ಶನ ಕೂಡ ನಮ್ಮ ಮುಂದಿದ್ದು ಈ ವಿಷಯ ಕೂಡ ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ತದನಂತರದಲ್ಲಿ ರಾಜ್ಯಾದ್ಯಂತ ಕಾಲು ಸಂಕಗಳಿಗೆ ವಿಶೇಷ ಹಣವನ್ನಿಟ್ಟು ಎಲ್ಲಾ ಕಾಲು ಸಂಕಗಳು ನಿರ್ಮಾಣ ಮಾಡುವತ್ತ ಸರ್ಕಾರ ಮುಂದಾಗಿತ್ತು .
ಆದರೆ ಕೆಂದಾಳಬೈಲಿನ ಪಕ್ಕದ ಕೆಲವೇ ಕಿಲೋ ಮೀಟರ್ ದೂರದ ಊರಾದ ಅಣುವಳ್ಳಿಯಲ್ಲಿ ಅರ್ಧ ಬರ್ಧ ( ಅರ್ಧ ಕಲ್ಲು ಚಪ್ಪಡಿ, ಅರ್ಧ ಅಡಿಕೆ ಮರ ) ಕಾಲು ಸಂಕ ಇರುವುದು ದುರಂತವೇ ಸರಿ. ಅಣುವಳ್ಳಿ ಕಾಲು ಸಂಕದಲ್ಲಿ ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರು, ವಯೋ ವೃದ್ದರು ಎಲ್ಲರು ಕೂಡ ಇದರಲ್ಲಿಯೇ ನೆಡೆದುಕೊಂಡು ಹೋಗಬೇಕಾಗಿದೆ.
ಹಾಗೆಯೇ ಈ ಭಾಗದಲ್ಲಿ ವೀರಭದ್ರೇಶ್ವರ ದೇವಸ್ಥಾನವಿದ್ದು ಈ ದೇವಸ್ಥಾನಕ್ಕೆ ಹೋಗಬೇಕಾದರೆ ಅನೇಕ ಭಕ್ತಾದಿಗಳು ಇದೆ ಕಾಲು ಸಂಕವನ್ನು ಅವಲಂಬಿಸಬೇಕು. ಮಲೆನಾಡಿನ ಮಳೆ ಅಬ್ಬರ ಜೋರಾಗಿರುವುದರಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಈ ಕಾಲು ಸಂಕ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದ್ದು ಅಪಾಯ ಮುನ್ಸೂಚನೆ ನೀಡುತ್ತಿದೆ. ಯಾವುದಾದರೂ ದುರಂತವಾಗುವ ಮುಂಚೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.
-ಶ್ರೀಕಾಂತ್ ವಿ ನಾಯಕ್ , ತೀರ್ಥಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
144 ಸೆಕ್ಷನ್ ಜಾರಿ: ನಾಳೆ ಶಿವಮೊಗ್ಗ,ಭದ್ರಾವತಿ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ
ತೀರ್ಥಹಳ್ಳಿ: ಗೃಹ ಸಚಿವರ ಬೆಂಗಾವಲು ವಾಹನ – ಕಾರು ಮುಖಾಮುಖಿ ಢಿಕ್ಕಿ
ಆಸ್ಪತ್ರೆಗಳ ಉನ್ನತೀಕರಣಕ್ಕೆ ಗಮನ: ಡಾ. ನಾರಾಯಣ ಗೌಡ ಭರವಸೆ
ಸಾಗರ: ಕಾಯಿಲೆಗೆ ಪರಿಹಾರ ಸಿಕ್ಕಿಲ್ಲ, ಇದು ಸ್ವಾತಂತ್ರ್ಯ ಅಲ್ಲ ಸಂತ್ರಸ್ತನಿಂದ; ಪ್ರತಿಭಟನೆ!
ಶಿವಮೊಗ್ಗ: ಸಾವರ್ಕರ್ – ಟಿಪ್ಪು ಫೋಟೋ ವಿವಾದದ ಬೆನ್ನಲ್ಲೇ ಯುವಕನಿಗೆ ಚೂರಿ ಇರಿತ