ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಅಧಿಕಾರಿ ದೇವಳ ಒಡೆದಿದ್ದರೆ ಬೆಂಕಿ ಹಚ್ಚುತ್ತಿದ್ದರು: ಬೇಳೂರು
Team Udayavani, Sep 17, 2021, 2:37 PM IST
ಶಿವಮೊಗ್ಗ: ಹಿಂದುತ್ವದ ಕವಚ ಕಟ್ಟಿಕೊಂಡಿರುವ ಸರ್ಕಾರ ಮತ್ತು ಹಿಂದುತ್ವವಾದಿಗಳು ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ. ರಾತ್ರೋರಾತ್ರಿ ಕಳ್ಳರ ಹಾಗೆ ದೇಗುಲ ಕೆಡವಿರುವುದಕ್ಕೆ ನನ್ನ ವಿರೋಧವಿದೆ. ಕಾಂಗ್ರೆಸ್ ಸರ್ಕಾರವೋ, ಮುಸ್ಲಿಂ ಅಧಿಕಾರಿ ಈ ಕೆಲಸ ಮಾಡಿದ್ದರೆ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದರು ಎಂದು ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವವನ್ನು ಕವಚ ಮಾಡಿಕೊಂಡು ಕೂತಿರುವುದು ಇವರ ಡೋಂಗಿತನಕ್ಕೆ ಸಾಕ್ಷಿ. ಮುಸ್ಲಿಂಮರು ಅತ್ಯಾಚಾರ ಮಾಡಿದರೆ ಮಾತ್ರ ಮಾತನಾಡುತ್ತಾರೆ. ಚುನಾವಣೆ ಸಂದರ್ಭ ಸಿಂಪಥಿ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡ್ತಾರೆ. ರಸ್ತೆಗಾಗಿ ದೇಗುಲ ಒಡೆಯುವುದಾದರೆ, ಪಕ್ಕದಲ್ಲೆ ದೇಗುಲ ಮಾಡಬೇಕಿತ್ತು. ಸರ್ಕಾರದ ಕೈಲಾಗಲಿಲ್ಲ ಅಂದರೆ, ಜನರೆ ದುಡ್ಡು ಹಾಕುತ್ತಿದ್ದರು ಎಂದರು.
ಶೋಭಾ ಮೇಡಂ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ಅಲ್ಲಿನ ಸಂಸದರು ಏನು ಮಾಡುತ್ತಿದ್ದಾರೆ? ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರವಾದಾಗಲೂ ಇವರು ಬಾಯಿ ಬಿಡಲಿಲ್ಲ. ಚುನಾವಣೆ ಬಂದಾಗ ಬಾಂಬ್ ಹಾಕುವವರು ಈಗ ಸುಮ್ಮನಿದ್ದಾರೆ. ಸುಪ್ರೀಂ ಕೋರ್ಟ್ ಬೇರೆ ಕಡೆ ದೇಗುಲ ಕಟ್ಟಬಾರದು ಎಂದು ಹೇಳಿದೆಯಾ ಎಂದು ಬೇಳೂರು ಪ್ರಶ್ನೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯ ದಿವಾಳಿ ಮಾಡಿ ಚೊಂಬು ತೋರಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ
Shiv sena ಪಕ್ಷದ ಗೀತೆಯಿಂದ ‘ಹಿಂದೂ’, ‘ಜೈ ಭವಾನಿ’ ಪದ ಕೈಬಿಡಲ್ಲ: ಉದ್ಧವ್
Protest; ಕೇಜ್ರಿವಾಲ್ ಸಕ್ಕರೆ ಮಟ್ಟ 300 ದಾಟಿದೆ.. ; ಆಮ್ ಆದ್ಮಿ ಪಕ್ಷ ಆಕ್ರೋಶ
Ram Navami: ಅಯೋಧ್ಯೆಯಲ್ಲಿ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ!
Udupi: ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವುದು ಖಚಿತ – ಡಾ. ಆರತಿ ಕೃಷ್ಣ