ಏಳು ದಿನದ ಬಳಿಕ ಪತ್ತೆಯಾಯಿತು ತುಂಗಾ ನದಿಗೆ ಹಾರಿದ ಯುವಕನ ಮೃತದೇಹ
Team Udayavani, Jul 21, 2022, 5:33 PM IST
ಹೊಳೆಹೊನ್ನೂರು : ಕಳೆದ ಏಳು ದಿನಗಳ ಹಿಂದೆ ತುಂಗ ನದಿಗೆ ಹಾರಿದ್ದ ಪುರಲೆ ಯುವಕ ನಿನ್ನೆ ರಾತ್ರಿ ಕೂಡ್ಲಿ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ತುಂಗ ನದಿಗೆ ಜು.14 ರಂದು ಬೆಕ್ಕಿನ ಕಲ್ಮಠದ ಬಳಿ ಹಾರಿದ್ದನು.
ಕೂಡ್ಲಿ ಬಳಿ ಶವವಾಗಿ ಪತ್ತೆಯಾಗಿದ್ದ ಮೃತ ದೇಹವು ಸಂತೋಷ್ (27) ನದ್ದೇ ಎಂದು ಕುಟುಂಬ ಗುರುತಿಸಿದೆ. ಈ ಹಿನ್ನಲೆಯಲ್ಲಿ ಕುಟುಂಬಕ್ಕೆ ಆತನ ಮೃತ ದೇಹ ಹಸ್ತಾಂತರಿಸಿ ಶವಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ನಗರದಲ್ಲಿ ನದಿಗೆ ಹಾರಿರುವ ಬಗ್ಗೆ ಸಂತೋಷನ ತಂದೆ ಕೋಟೆ ಪೊಲೀಸ್ ಠಾಣೆಯಲ್ಲಿ ಜು.14 ರಂದು ಮಿಸ್ಸಿಂಗ್ ಕಂಪ್ಲೇಂಟ್ ವೊಂದನ್ನ ದಾಖಲಿಸಿದ್ದರು. ನದಿಗೆ ಹಾರಿರುವ ಬಗ್ಗೆ ಸಂತೋಷನ ಸ್ನೇಹಿತ ಅವರ ತಂದೆಗೆ ಕರೆ ಮಾಡಿ ನದಿಗೆ ಹಾರಿರುವ ಬಗ್ಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು.
ನದಿಗೆ ಹಾರಿದ ಸಂತೋಷ್ ಕಪ್ಪು ಬಣ್ಣದ ಟೀ ಶರ್ಟ್ ಮತ್ತು ಸಿಮೆಂಟ್ ಕಲರ್ ನ ಜೀನ್ಸ್ ಪ್ಯಾಂಟ್ ತೊಟ್ಟಿದ್ದುಗಡ್ಡ ಬಿಟ್ಟಿರುವುದಾಗಿ ತಂದೆ ರಾಮು ಮಿಸ್ಸಿಂಗ್ ಕಂಪ್ಲೇಟ್ ನಲ್ಲಿ ದಾಖಲಿಸಿದ್ದರು. ಅದರಂತೆ ಕೂಡ್ಲಿ ಬಳಿ ನಿನ್ನೆ ರಾತ್ರಿ ಪತ್ತೆಯಾದ ಶವ ಸಂತೋಷ್ ನದ್ದಾಗಿದೆ ಎಂದು ಕುಟುಂಬ ಪತ್ತೆಹಚ್ಚಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಗೋವಾ: ಕಡಲ ತೀರಗಳಲ್ಲಿ ಕೋ-ವರ್ಕಿಂಗ್ ಝೋನ್ ಪರಿಕಲ್ಪನೆ
ಕುಡಿದ ನಶೆಯಲ್ಲಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬ ಆತನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದೆ. ನದಿಯಲ್ಲಿ ನೀರಿನ ರಭಸ ಹೆಚ್ಚಾದ ಕಾರಣ ಕೂಡ್ಲಿ ತನಕ ಎಳೆದುಕೊಂಡು ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…