ಬಾಂಬೆ ಬ್ಲಡ್ ನೀಡಿದ ಸಾಗರದ ವಿದ್ಯಾರ್ಥಿ
Team Udayavani, Oct 22, 2019, 3:01 PM IST
ಸಾಗರ: ಅಪರೂಪವಾದ ಬಾಂಬೆ ಬ್ಲಡ್ ಗ್ರೂಪ್ ಹೊಂದಿರುವ ನಗರದ ಎಲ್.ಬಿ. ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಉದಯಕುಮಾರ್ ಅವರು ಅಗತ್ಯವಿರುವ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರಕ್ತದಾನ ಮಾಡಿದ ಘಟನೆ ಸೋಮವಾರ ನಡೆದಿದೆ.
ಈಚೆಗೆ ಎಲ್ಬಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆದ ಸಂದರ್ಭ ವಿದ್ಯಾರ್ಥಿ ಉದಯಕುಮಾರ ಅವರ ರಕ್ತದ ಗುಂಪು ಬಹಳ ಅಪರೂಪದ್ದು ಎಂಬ ಮಾಹಿತಿ ಇಲ್ಲಿನ ರಕ್ತನಿಧಿ ಕೇಂದ್ರಕ್ಕೆ ಲಭ್ಯವಾಗಿದೆ. ಉದಯಕುಮಾರ ಮೂಲತಃ ಸಿದ್ದಾಪುರ ತಾಲೂಕಿನ ಆಡುಕಟ್ಟಾ ಸಮೀಪದ ಕೊರ್ಲಕೈ ಗ್ರಾಮದವರಾಗಿದ್ದು, ಎಲ್ಬಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.
ಇಲ್ಲಿನ ರಕ್ತನಿ ಧಿ ಕೇಂದ್ರದಲ್ಲಿ ಬಾಂಬೆ ಬ್ಲಿಡ್ ಗ್ರೂಪ್ನ ರಕ್ತ ಲಭ್ಯವಿದೆ ಎಂಬ ಮಾಹಿತಿಯನ್ನು ಕೇಂದ್ರದವರು ಸಂಕಲ್ಪ ಇಂಡಿಯನ್ ಎಂಬ ಆನ್ ಲೈನ್ ಮಾಹಿತಿ ಮೂಲಕ ಪೋಸ್ಟ್ ಮಾಡಿದ್ದರು. ಈ ಗ್ರೂಪ್ ಅಗತ್ಯವಿರುವ ಬೆಂಗಳೂರು ಮೂಲದ ವ್ಯಕ್ತಿ ಮತ್ತವರ ಕುಟುಂಬದವರು ರಕ್ತನಿಧಿ ಕೇಂದ್ರ ಸಂಪರ್ಕಿಸಿ ಸೋಮವಾರ ಇಲ್ಲಿಗೆ ಬಂದಿದ್ದಾರೆ.
ಇಲ್ಲಿನ ಸುಮುಖ ಆಸ್ಪತ್ರೆಯಲ್ಲಿ ಸೂಕ್ತ ಪರಿಶೀಲನೆ ನಂತರ ರಕ್ತ ನೀಡಲಾಗಿದೆ. ರಕ್ತವನ್ನು ಪಡೆದುಕೊಂಡವರಿಂದ ಯಾವುದೇ ಶುಲ್ಕ ಪಡೆದುಕೊಳ್ಳದೆ ಉಚಿತವಾಗಿ ಬಾಂಬೆ ಬ್ಲಿಡ್ ಗ್ರೂಪ್ ನೀಡುವ ಮೂಲಕ ರೋಟರಿ ರಕ್ತ ನಿಧಿ ಕೇಂದ್ರ ಮಾನವೀಯತೆ ಮೆರೆದಿದೆ. ಕೇಂದ್ರದ ಡಾ.ಎಚ್.ಎಂ.ಶಿವಕುಮಾರ, ಡಾ. ಬಿ.ಜಿ.ಸಂಗಂ, ಡಾ.ಅರುಣ್ಕುಮಾರ್, ಟೆಕ್ನಿಶಿಯನ್ ಹರೀಶ್, ಸಿಬ್ಬಂದಿ
ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ
MUST WATCH
ಹೊಸ ಸೇರ್ಪಡೆ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ