ರೈತ ಸಂಘದಿಂದ ನಿರಂತರ ಹೋರಾಟ


Team Udayavani, Jul 29, 2017, 1:30 PM IST

29-SHIV-4.jpg

ಶಿರಾಳಕೊಪ್ಪ: ನರಗುಂದ- ನವಲಗುಂದದಲ್ಲಿ ಸರ್ಕಾರ ರೈತರ ಮೇಲೆ ಗೋಲಿಬಾರ್‌ ಮಾಡಿದಾಗ ರೈತಸಂಘ ಉದಯವಾಯಿತು. 1981ರಲ್ಲಿ ಶಿವಮೊಗ್ಗದಲ್ಲಿ ಜನಿಸಿದ ರೈತಸಂಘ ಎಚ್‌ ಎಸ್‌. ರುದ್ರಪ್ಪ ಮತ್ತು ಎಂಡಿ ಸುಂದರೇಶ್‌ ಅವರ ನೇತೃತ್ವದಲ್ಲಿ ಸ್ಥಾಪನೆ ಆಯಿತು. ನಂತರದ ದಿನಗಳಲ್ಲಿ ನಂಜುಂಡಸ್ವಾಮಿ ಹಾಗು ಕೆ.ಟಿ. ಗಂಗಾಧರ್‌ ಅವರ ನೇತೃತ್ವದಲ್ಲಿ ಸದೃಢವಾಗಿ ಬೆಳೆದು ನಿಂತಿದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಜಯಪ್ಪ
ಗೌಡ ತಿಳಿಸಿದರು.

ತಾಲೂಕಿನ ನರಸಾಪುರ, ಅಗ್ರಹಾರ ಮುಚಡಿ ಹಾಗು ಶಂಕ್ರೀಕೊಪ್ಪ ಗ್ರಾಮಗಳಲ್ಲಿ ರೈತ ಸಂಘದ ಗ್ರಾಮ ಘಟಕಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರು ಚಳುವಳಿ ಮಾಡಲು ಪ್ರಾರಂಭಿಸಲು 25 ವರ್ಷಗಳ ಹಿಂದೆ ಸಹಕಾರ ಸಂಘಗಳು ರೈತರಿಗೆ 600ರೂ ಸಾಲಕೊಟ್ಟು 3ಸಾವಿರ ರೂ ಬಡ್ಡಿ ಹಾಕುತ್ತಿದ್ದವು. ಸಾಲ ಮರುಪಾವತಿ ಮಾಡದಿದ್ದಾಗ ಮನೆಯನ್ನು ಜಪ್ತಿ ಮಾಡುತ್ತಿದ್ದರು. ಅಂದು ಅಲ್ಲೊಬ್ಬ ಇಲ್ಲೊಬ್ಬ ರೈತರು ಪ್ರತಿಭಟನೆ ಮಾಡಿ ಹರಾಜನ್ನು ತಡೆ ಹಿಡಿಯುತ್ತಿದ್ದರು. ನಂತರ ಸರ್ಕಾರ ಕೆಲವೊಂದು ಪ್ರಕರಣಗಳಲ್ಲಿ ರೈತರನ್ನು ಅಮಾನುಷವಾಗಿ ನಡೆಸಿಕೊಂಡು ಗೋಲಿಬಾರ್‌ ಮಾಡಿದ ಘಟನೆಗಳು ನಡೆದಿದ್ದವು. ಆದರೆ ಇದಕ್ಕೆ ಎದೆಗುಂದದೇ ಈಗ ರೈತಸಂಘ ಸದೃಢವಾಗಿ ಬೆಳೆದು ನಿಂತಿದೆ ಎಂದರು.

ಇಂದು ರೈತರು ರಾಜಕಾರಣಿಗಳ ಕೈಗೊಂಬೆ ಆಗಿ ಅವರು ತೋರಿಸುತ್ತಿರುವ ಆಮಿಷದಿಂದ ರೈತ ಸಂಘಕ್ಕೆ ಬಂದರೆ ನಮ್ಮನ್ನು ಯಾರಾದರೂ ಗುರುತಿಸುತ್ತಾರೆ ಎಂಬ ಆತಂಕದಿಂದ ರೈತಸಂಘದ ಜೊತೆ ಹೋರಾಟದಲ್ಲಿ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಇರುವ ರೈತರು ತಮ್ಮ ಯಾವದೇ ಕೆಲಸ ಕಾರ್ಯಗಳಿಗೆ ರಾಜಕಾರಣಿಗಳ ಮನೆಗೆ ಸುತ್ತುವಂತಾಗಿದೆ. ಆದರೆ ಅದೇ ರೈತರು ರೈತ ಸಂಘಟನೆಯಲ್ಲಿ ಗುರುತಿಸಿಕೊಂಡು ಹಸಿರು ಶಾಲು ಹಾಕಿಕೊಂಡಿದ್ದರೆ ರಾಜಕಾರಣಿಗಳ ಮನೆಸುತ್ತುವುದು ತಪ್ಪುತ್ತಿತ್ತು ಎಂದರು.

ರೈತಸಂಘದ ತಾಲೂಕು ಕಾರ್ಯದರ್ಶಿ ಕೊಟ್ರೇಶ್‌ ಮಾತನಾಡಿ, ಈ ಹಿಂದೆ ಸಾಕಷ್ಟು ಹಿರಿಯ ರೈತರು ರೈತ ಸಂಘಟನೆಯಲ್ಲಿ ಇದ್ದರು. ಆದರೆ ರಾಜಕೀಯ ಗೊಂದಲದಿಂದ ಅವರು ಮರೆ ಆಗುತ್ತಿದ್ದಾರೆ. ರೈತಸಂಘ ಕಳೆದ ವರ್ಷ ಸಾಕಷ್ಟು ರೈತರಿಗೆ ಮೋಸ ಮಾಡಿದ ನಕಲಿ ಬೀಜ ಹಾಗು ಇತರ ಸಂಗತಿಗಳ ಬಗ್ಗೆ ಹೋರಾಟ ಮಾಡಿ ನ್ಯಾಯ ದೊರಕಿಸಿದೆ ಎಂದರು. ಸಭೆಯಲ್ಲಿ ರೈತಸಂಘದ ಗೌರವಾಧ್ಯಕ್ಷ ಈರಣ್ಣ, ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಪುಟ್ಟನಗೌಡ ಮತ್ತಿತರರು ಇದ್ದರು.

ಗ್ರಾಮ ಸಮಿತಿ: ನರಸಾಪುರ ಗ್ರಾಮಸಮಿತಿಯ ಅಧ್ಯಕ್ಷರಾಗಿ ಪ್ರದೀಪ್‌, ಗೌರವಾಧ್ಯಕ್ಷರಾಗಿ ಬಸವರಾಜಪ್ಪ, ಉಪಾಧ್ಯಕ್ಷರಾಗಿ ಕತುಬುದ್ದೀನ್‌, ಕುಮಾರ್‌ , ಮಂಜುನಾಥ, ಕಾರ್ಯದರ್ಶಿಯಾಗಿ ವಿಶ್ವನಾಧ, ಖಜಾಂಚಿಯಾಗಿ ಜಯಪ್ಪ, ಪಾಪುಸಾಬ್‌ ಆಯ್ಕೆ ಆದರು. ಅಗ್ರಹಾರ ಮುಚಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಬಸವರಾಜಪ್ಪ, ಕಾರ್ಯದರ್ಶಿ ಮಂಜಪ್ಪ, ಉಪಾಧ್ಯಕ್ಷ ಶಿವಪ್ಪ ಬಣಕಾರ್‌, ಸಂಚಾಲಕ ಹೂವಪ್ಪ ಹಾಗೂ ಇತರರು ಆಯ್ಕೆ ಆದರು. ಶಂಕ್ರೀಕೊಪ್ಪ ಗ್ರಾಮ ಸಮಿತಿ ಅಧ್ಯಕ್ಷರಾಗಿ ನಾಗಪ್ಪ ಗುಗ್ರೇರ್‌, ಉಪಾಧ್ಯಕ್ಷ ಶೇಖನಗೌಡ, ಖಜಾಂಚಿ ಚಂದ್ರಪ್ಪ ಎಸ್‌ .ಕೆ. ಆಯ್ಕೆ ಆದರು.
 

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.