ಸಂಸ್ಕೃತಿ ಉಳಿಸೋದೇ ದೊಡ್ಡ ಸವಾಲು: ಚೂಡಾಮಣಿ
Team Udayavani, Dec 11, 2018, 4:23 PM IST
ಸಾಗರ: ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳು ತೊಡಗಿಕೊಳ್ಳಬೇಕು ಎನ್ನುವ ಮಾತನಾಡುತ್ತೇವೆ. ಆದರೆ ನಮ್ಮ ಮಕ್ಕಳನ್ನೇ ನಾವು ಈ ಕ್ಷೇತ್ರದಲ್ಲಿ ತೊಡಗಿಸುವುದಿಲ್ಲ. ಎಲ್ಲರೂ ನಗರ ಸೇರಬೇಕು, ಡಾಕ್ಟರ್, ಇಂಜಿನಿಯರ್ ಆಗಬೇಕು ಎನ್ನುವ ಮನೋಭೂಮಿಕೆ ಸೃಷ್ಟಿಯಾಗುತ್ತಿದೆ. ಹೀಗೇ ಆದರೆ, ನಮ್ಮ ಸಂಸ್ಕೃತಿ ಉಳಿಸುವುದು ಹೇಗೆ ಎಂದು ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೂಡಾಮಣಿ ರಾಮಚಂದ್ರ ಹೇಳಿದರು.
ಸಾಗರ ಮಾಧ್ವ ಸಂಘ, ತಾಲೂಕು ಬ್ರಾಹ್ಮಣ ಒಕ್ಕೂಟ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರದರ್ಶನ ಕಲೆಗಳು ಇಂದು ಅವನತಿಯ ಅಂಚಿನಲ್ಲಿವೆ. ಇವುಗಳನ್ನು ಕರಾರುವಾಕ್ಕಾಗಿ ಕಲಿತು ಪ್ರದರ್ಶಿಸುವಂತಹ ಕಲಾವಿದರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಬೃಹತ್ ಚರ್ಮವಾದ್ಯಗಳಲ್ಲಿ ಒಂದಾದ ಡೊಳ್ಳು ಒಂದು ಕಾಲದಲ್ಲಿ ಗಂಡು ಕಲೆಯಾಗಿತ್ತು. ಅದನ್ನು ಕರಗತಗೊಳಿಸಿಕೊಂಡು ನಾವು ಕಲಿಯಲು ಪುರುಷ ಡೊಳ್ಳು ಕಲಾವಿದರು ನೀಡಿದ ಸಹಕಾರವನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದರು.
ಭಾರತ ಸರ್ಕಾರದ ಸೇವಾಸಿಂಧು ಯೋಜನೆಯ ಸೇವಾ ಪುರಸ್ಕಾರ ಪಡೆದ ಕಲ್ಯಾಣಿ ಆನಂದ ಮಾತನಾಡಿ, ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳನ್ನು ತಲುಪಬೇಕು. ನಮ್ಮಲ್ಲಿ ಸೇವಾ ಮನೋಭಾವ ಇರಬೇಕು. ಆ ನಿಟ್ಟಿನಲ್ಲಿ ಶ್ರಮ ವಹಿಸಬೇಕಾದದ್ದು ನಮ್ಮ ಜವಾಬ್ದಾರಿ
ಎಂದರು.
ತಾಲೂಕು ಬ್ರಾಹ್ಮಣ ಒಕ್ಕೂಟದ ಗೌರವಾಧ್ಯಕ್ಷ ಎಚ್.ಆರ್. ನಾಗಭೂಷಣ, ಮಾಧ್ವ ಸಂಘದ ಅಧ್ಯಕ್ಷ ಡಾ| ಗುರುರಾಜ ಕಲ್ಲಾಪುರ ಮಾತನಾಡಿದರು. ಮಾಧ್ವ ಸಂಘದ ಕಾರ್ಯದರ್ಶಿ ಅನಂತರಾವ್, ಮುರುಳೀಧರ ಹತ್ವಾರ್, ಶ್ರೀಶಾಚಾರ್, ರಾಜಗೋಪಾಲ್, ಬದರೀನಾಥ್, ವೈ. ಮೋಹನ್, ಸಂಜಯ್, ರಘುನಂದನ ಪುರೋಹಿತ್, ಭಾಗ್ಯಲಕ್ಷ್ಮೀ, ಸುಮಿತ್ರಾಬಾಯಿ, ವೆಂಕಟೇಶ ಕಟ್ಟಿ, ಶ್ರೀದೇವಿ ಮೋಹನ್, ನಾಗರತ್ನ, ರಮಾಮಣಿ, ಮಂಜುಳಾ ಬದರೀನಾಥ್, ಸತ್ಯಶೀಲ, ವೀರಜಾ ಕಲ್ಲಾಪುರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು