ಕುಮದ್ವತಿ ನದಿಗೆ ಈಜಲು ಹೋಗಿ ಬಾಲಕ ಸಾವು
Team Udayavani, Oct 9, 2019, 5:43 PM IST
ಶಿಕಾರಿಪುರ :ಕುಮಧ್ವತಿ ನದಿಗೆ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತ ಬಾಲಕ ಶಶಾಂಕ್ ( 17) ಶಿಕಾರಿಪುರದ ವಿನಾಯಕ ಬಡವಾಣೆ ನಿವಾಸಿಯಾಗಿದ್ದು, ಚನ್ನಮಲ್ಲಿಕಾರ್ಜುನ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಆಗಿದ್ದಾನೆಂದು ತಿಳಿದುಬಂದಿದೆ.
ಈ ಕುರಿತು ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ ಪರಿಶೀಲನೆ ನಡೆಸಿದ್ದಾರೆ.