ಕುಗ್ರಾಮಗಳಲ್ಲೇ ಆರೋಗ್ಯ ಶಿಬಿರ ನಡೆಸಲು ನಿರ್ಧಾರ
ಕಾಗೋಡು ತಿಮ್ಮಪ್ಪ ಫೌಂಡೇಷನ್ ಮುಖ್ಯಸ್ಥೆ ಡಾ| ರಾಜನಂದಿನಿ ಹೇಳಿಕೆ
Team Udayavani, May 15, 2022, 4:44 PM IST
ಸಾಗರ: ತಾಲೂಕಿನ ಗಡಿ ಪ್ರದೇಶದಲ್ಲಿರುವ ಕುಗ್ರಾಮಗಳಲ್ಲಿಯೇ ಅತ್ಯಂತ ಅಗತ್ಯವಾದ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ರಕ್ಷಣೆ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದ್ದು, ಕಳೆದ ಏ.24ರಿಂದ ಮೇ 8ರ ವರೆಗೆ ಅಂತಹ ಸ್ಥಳಗಳಲ್ಲಿ ಶಿಬಿರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಫೌಂಡೇಷನ್ನ ಪ್ರಮುಖರಾದ ಡಾ| ರಾಜನಂದಿನಿ ತಿಳಿಸಿದರು.
ತಾಲೂಕು ಕೇಂದ್ರದಿಂದ 80 ಕಿಮೀ ದೂರದಲ್ಲಿರುವ ಚನ್ನಗೊಂಡ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹೆಬ್ಟಾನಕೇರಿ ಶಿಬಿರ ಉದ್ಘಾಟಿಸಿ ಮಾತನಾಡಿ ಅವರು, ಮೇಘಾನೆ, ಅರ್ಕಳ, ನಾಗವಳ್ಳಿ, ಬಾನ್ಕುಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಉರುಳುಗಲ್ಲು, ಸಾಲ್ಕೋಡು, ಕರಕೋಡು ಗ್ರಾಮಗಳಲ್ಲಿ ಕೂಡ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಶರಾವತಿ ಅಭಯಾರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ರಸ್ತೆ, ವಿದ್ಯುತ್ ಸೇರಿ ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಗ್ರಾಮಗಳಲ್ಲಿ ಶಿಬಿರವನ್ನು ಸಂಘಟಿಸಲಾಗಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆತರಲು ಹೆಗಲ ಮೇಲೆ ಹೊತ್ತುಕೊಂಡು ಬರಬೇಕಾದ ಪರಿಸ್ಥಿತಿ ಕೆಲವು ಗ್ರಾಮಗಳಲ್ಲಿ ಇದೆ. ಅಂತಹ ಗ್ರಾಮಗಳಲ್ಲಿ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಅವರು ತಿಳಿಸಿದರು.
ನಾಗವಳ್ಳಿಯ ವಿದ್ಯಾ ಶಂಕರ್, ಚಂದ್ರಶೇಖರ್, ಮಾರ್ಟಿನ್, ನಾಗಮ್ಮ, ಮೆಘಾನೆಯ ಲೂಮ, ಅರ್ಕಳದ ಕೇಶವ, ಕೃಷ್ಣ, ಸವಿತಾ ನಾಗೇಂದ್ರ, ಕೊರ್ಲಿಕೊಪ್ಪದ ಕೆ.ವಿ. ಸುರೇಶ್, ಕೋವಿಶಿವಪ್ಪ, ರತ್ನ, ಶಿವಕುಮಾರ್, ಅಣ್ಣಪ್ಪ, ಎಂ.ಎನ್. ನಾಗರಾಜ್, ಅನ್ನಪೂರ್ಣ, ಭಾಗ್ಯ, ಚಂದ್ರಮ್ಮ, ಶಿವಮೂರ್ತಿ, ರಮೇಶ, ಮಂಜುನಾಥ್, ಜಾನ್, ಪರಸಪ್ಪ, ತ್ಯಾಗರ್ತಿಯ ಟಿ.ಕೆ. ಹನುಮಂತಪ್ಪ, ಗಿರೀಶ್, ಪರಶುರಾಮ, ಯಲ್ಲಪ್ಪ, ರೇಣುಕಾ, ಹಮೀದ್ ಖಾನ್, ಭಾನುಕುಳಿಯ ಸೋಮರಾಜ್, ಪದ್ಮರಾಜ್, ಚಂದ್ರಕಾಂತ್, ಉದಯಕುಮಾರ್, ಯಮುನಾ ಉದಯ್ ಕುಮಾರ್, ವಿಜಯ ಕುಮಾರ್, ಸಾಲುಕೋಡು ಗ್ರಾಮದ ರಮೇಶ ಸಾಲುಕೋಡು, ಗಣಪತಿ ಸಾಲುಕೋಡು, ದಿನೇಶ ಸಾಲುಕೋಡು ಹಾಗೂ ಆಯಾ ಸ್ಥಳೀಯ ಆಶಾ ಕಾರ್ಯಕರ್ತೆಯರಾದ ಸಾವಿತ್ರಿ, ಅನುರಾಧ, ಪ್ರೇಮ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಾದ ಪಲ್ಲವಿ, ನಗರ ಸಭಾ ಸದಸ್ಯರಾದ ಮಧುಮಾಲತಿ, ವೆಂಕಟೇಶ್ ಮೆಳವರಿಗೆ, ಡಾ| ಲೋಹಿತ್, ಡಾ| ಸುನೀಲ್, ಜ್ಞಾನಸಾಗರ ಪ್ಯಾರಾ ಮೆಡಿಕಲ್ ಸೈನ್ಸ್ನ ವಿದ್ಯಾರ್ಥಿಗಳು, ಫೌಂಡೇಶನ್ನ ವ್ಯವಸ್ಥಾಪಕರಾದ ಅನಂತ್ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು