ಸಾಗರ : ಕೆಎಸ್ಆರ್ಟಿಸಿ ಡಿಪೋದಲ್ಲಿಯೇ ಬಸ್ನಿಂದ ಡಿಸೇಲ್ ಕಳ್ಳತನ !
Team Udayavani, Jul 25, 2022, 8:59 PM IST
ಸಾಗರ : ಇಲ್ಲಿನ ಜೋಗ ರಸ್ತೆಯಲ್ಲಿನ ಕೆಎಸ್ಆರ್ಟಿಸಿ ಘಟಕದ ಆವರಣದಲ್ಲಿಯೇ ನಿಲ್ಲಿಸಲಾಗಿದ್ದ ಸರ್ಕಾರಿ ಬಸ್ನಿಂದ ಡಿಸೇಲ್ ಕಳ್ಳತನ ಮಾಡಲಾಗಿರುವ ವಿಚಿತ್ರ ಘಟನೆ ನಡೆದಿದ್ದು, ಈ ಸಂಬಂಧ ಘಟಕ ವ್ಯವಸ್ಥಾಪಕರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟಕದ ಸಾಗರ-ಶಿವಮೊಗ್ಗ-ರಾಯಚೂರು ಮಾರ್ಗದ ಕೆಎ 14 ಎಫ್ 0009 ಸಂಖ್ಯೆಯ ಬಸ್ಗೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ್ ಜೈನ್ ಎಂಬುವವರು ಜು. 21ರಂದು 190 ಲೀಟರ್ ಇಂಧನ ತುಂಬಿಸಿ ಟ್ಯಾಂಕ್ ಭರ್ತಿ ಮಾಡಿದ್ದರು. ಇಂಧನ ತುಂಬಿಸಿದ ನಂತರ ವಾಹನದ ತಾಂತ್ರಿಕ ನಿರ್ವಹಣೆ ಮಾಡಿಸಿ ಭದ್ರತಾ ವ್ಯವಸ್ಥೆಯ ಎದುರುಗಡೆ ಮೂಲೆಯಲ್ಲಿರುವ ನೀರಿನ ಟ್ಯಾಂಕ್ ಹತ್ತಿರ ಬಸ್ ನಿಲ್ಲಿಸಲಾಗಿತ್ತು. ಜು. 22ರಂದು ಬೆಳಿಗ್ಗೆ ಚಾಲಕ ಪ್ರವೀಣ್ ಕರ್ತವ್ಯಕ್ಕಾಗಿ ಘಟಕಕ್ಕೆ ಬಂದಾಗ ವಾಹನದ ಇಂಧನ ಪರಿಶೀಲಿಸಿದ್ದಾರೆ. ಇಂಧನದ ಪ್ರಮಾಣ ಕಡಿಮೆ ಇದ್ದಿದ್ದು ಕಂಡು ಬಂದಿದೆ.
ಸಂಚಾರ ಮೇಲ್ವಿಚಾರಕ, ಪಾಳಿ ಮುಖ್ಯಸ್ಥ ಮತ್ತು ಇಂಧನ ಶಾಲೆಯ ಸಿಬ್ಬಂದಿ ಪರಿಶೀಲಿಸಿದಾಗ ಇಂಧನ ಕಡಿಮೆ ಇರುವುದು ಸ್ಪಷ್ಟವಾಗಿದೆ.
ಮತ್ತೊಮ್ಮೆ ಇಂಧನ ತುಂಬಿಸಿದಾಗ 35 ಲೀಟರ್ ಇಂಧನ ಹಾಕಲು ಸಾಧ್ಯವಾಗಿದೆ. ಘಟಕದಲ್ಲಿ ನಿಲ್ಲಿಸಲಾಗಿದ್ದ ವಾಹನದಿಂದ 35 ಲೀಟರ್ ಇಂಧನವನ್ನು ಕಳ್ಳತನ ಮಾಡಿರುವುದು ಬಯಲಿಗೆ ಬಂದಿದೆ. ಅಂದಾಜು 3,097 ರೂ. ಮೌಲ್ಯದ ಡೀಸೆಲ್ ಕಳ್ಳತನವಾಗಿದೆ ಎಂದು ಭಾವಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ
MUST WATCH
ಹೊಸ ಸೇರ್ಪಡೆ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ